ಹೊನ್ನಾವರ :À ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸ್ಥಿತಿಗಾರ ಶಾಲೆಯ ವಿದ್ಯಾರ್ಥಿನಿ ತೇಜಾ ನಾರಾಯಣ ಅವಧಾನಿ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಎಸ್.ಡಿ. ಎಮ್.ಸಿ. ಅಧ್ಯಕ್ಷ ಕೃಷ್ಣ ಆಚಾರಿ ಉಪಾಧ್ಯಕ್ಷೆ ಸಂಧ್ಯಾ ಹೆಗಡೆ. ಶಾಲಾ ಮುಖ್ಯೋಪಾಧ್ಯಾಯಿನಿ ಪಾರ್ವತಿ ಹೆಗಡೆ, ಶಿಕ್ಷಕ ಎಮ್.ಎಸ್. ಹೆಗಡೆ, ಶಿಕ್ಷಕಿ ಸಾವಿತ್ರಿ ದೇವಾಡಿಗ ಹಾಗೂ ಸಿ.ಆರ್.ಪಿ. ವಿನಾಯಕ ಹೆಗಡೆ ಈ ಮುಂತಾದವರು ಅಭಿನಂದಿಸಿದ್ದಾರೆ.
Leave a Comment