• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಭಯಾರಣ್ಯ ಘೋಷಣೆ ನಿರ್ಧಾರದಿಂದ ಜನಜೀವನ ಹತ್ತಿಕ್ಕುವ ಕೆಲಸ

November 16, 2019 by Vishwanath Shetty Leave a Comment

watermarked DSC 4530 1

ಹೊನ್ನಾವರ ;
ಸರ್ಕಾರದ ಅಭಯಾರಣ್ಯ ಘೋಷಣೆ ನಿರ್ಧಾರದಿಂದ ಜನಜೀವನ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಅರಣ್ಯ ಉಳಿಸುವ ಹೆಸರಿನಲ್ಲಿ ಅಕೇಶಿಯಾ, ನೀಲಗಿರಿ ಮುಂತಾದ ಗಿಡಗಳನ್ನು ನೆಟ್ಟು ಪ್ರಾಣಿಗಳಿಗೆ ವಾಸಕ್ಕೆ ಅಯೋಗ್ಯ ಮಾಡಲಾಗುತ್ತಿದೆ ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿ ಧರ್ಮದರ್ಶಿಗಳಾದ ಮಾರುತಿ ಗುರೂಜಿ ಅವರು ಸರ್ಕಾರದ ನಿರ್ಧಾರದ ವಿರುದ್ಧ ಅಸಹನೆ ವ್ಯಕ್ತಪಡಿಸಿದರು.
ಅವರು ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಸಭಾಭವನದಲ್ಲಿ ನಡೆದ ಅಭಯಾರಣ್ಯ ಘೋಷಣೆ ವಿರೋಧಿ ಹಾಗೂ ಶರಾವತಿ ನದಿ ನೀರು ಸಂರಕ್ಷಣ ಸಮಿತಿ, ಗೇರಸೊಪ್ಪಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೇವಲ ಸರ್ಕಾರಕ್ಕೆ ಮನವಿ ಸಲ್ಲಿಸುವ ಹೋರಾಟ ನಮ್ಮದಾಗಬಾರದು, ತಾತ್ವಿಕವಾಗಿ ನಿರ್ಧಾರ ಮಾಡಿ ಹೋರಾಟಕ್ಕೆ ಸರ್ಕಾರ ಸ್ಪಂದಿಸುವವರೆಗೂ ನಮ್ಮ ಹೋರಾಟ ನಿಲ್ಲಿಸಬಾರದು ಎಂದು ಕರೆ ನೀಡಿದರು.

Chintana sabhe


ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಸೂಚಿಸಲು ಅವಕಾಶ ಮಾಡಿಕೊಡಲಾಗಿತ್ತು. ದಯಾನಂದ ಹಾಡಗೇರಿ, ಗಿರೀಶ ನಾಯ್ಕ ಕಾನಗೋಡ, ಶ್ರೀಧರ ನಾಯ್ಕ ಜನ್ನಕಡ್ಕಲ್, ತಿಮ್ಮಪ್ಪ ಹಿರೇಬೈಲ್, ದತ್ತಾ ಮಡಿವಾಳ ಉಪ್ಪೋಣಿ, ವಿನಾಯಕ ಸಾಲ್ಕೋಡ, ಆರ್. ಹೆಚ್. ನಾಯ್ಕ ಚಿಕ್ಕನಕೋಡ, ಸಚಿನ್ ನಾಯ್ಕ, ಕೃಷ್ಣ ನಾಯ್ಕ ಮಾಗೋಡ, ತಿಮ್ಮಪ್ಪ ಗೌಡ ಮಹಿಮೆ, ನಾಗರಾಜ ನಾಯ್ಕ ಜನ್ನಕಡ್ಕಲ್, ನಾರಾಯಣ ನಾಯ್ಕ ಉಪ್ಪೋಣಿ, ಧರ್ಮಾ ನಾಯ್ಕ ಜನ್ನಕಡ್ಕಲ್ ಮತ್ತಿತರರು ತಮ್ಮ ತಮ್ಮ ಗ್ರಾಮದ ಸಮಸ್ಯೆಗಳನ್ನು ಮುಂದಿಟ್ಟು, ತಾವು ಹಿಂದೆ ಭಾಗವಹಿಸಿದ್ದ ಸಾರ್ವಜನಿಕ ಸಭೆಗಳ ಅನುಭವಗಳನ್ನು ಹಂಚಿಕೊಂಡರು. ಗುರೂಜಿಯವರ ಅಭಿಯಾರಣ್ಯ ಘೋಷಣೆ ವಿರೋಧದ ಹೋರಾಟವನ್ನು ಶ್ಲಾಘಿಸಿ ಒಕ್ಕೊರಲಿನಿಂದ ತಮ್ಮ ಬೆಂಬಲ ವ್ಯಕ್ತಪಡಿಸಿದರು.
.
ಖ್ಯಾತ ನ್ಯಾಯವಾದಿಗಳಾದ ನಾಗರಾಜ ನಾಯಕ, ಕಾರವಾರ ಮಾತನಾಡಿ. ಶರಾವತಿಯಂಥ ನದಿಗಳ ತಿರುವಿನ ಯೋಜನೆಗಳು ಇತ್ತೀಚಿನದಲ್ಲ, ಅನೇಕ ದಶಕಗಳಿಂದ ಇಂತಹ ಯೋಜನೆಗಳಿಗೆ ರೂಪುರೇಷೆ ನಡೆಸಲಾಗುತ್ತಿದೆ. ಕಾರ್ಖಾನೆಗಳ ಕೆಟ್ಟ ಪರಿಣಾಮದಿಂದ ಬೆಂಗಳೂರಿನ ಪವಿತ್ರ ನದಿಯಾಗಿದ್ದ ವೃಷಭಾವತಿ ಇಂದು ಕೊಳಚೆಯಾಗಿದೆ, ಬೆಂಗಳೂರಿಗರು ನದಿಗಳ ನೀರು ಸಮುದ್ರ ಸೇರಿ ಪೋಲಾಗುತ್ತಿದೆ ಎಂಬ ಅವೈಜ್ಞಾನಿಕ ಕಾರಣ ನೀಡಿ ಮಲೆನಾಡಿನ ಸಹ್ಯಾದ್ರಿ ಭಾಗಕ್ಕೆ ಕಣ್ಣು ಹಾಕುತ್ತಿದ್ದಾರೆ, ಇದಕ್ಕೆ ನಮ್ಮ ಧಿಕ್ಕಾರವಿದೆ ಎಂದರು.

ಉತ್ತರ ಕನ್ನಡ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಅರವಿಂದ ಕರ್ಕಿಕೋಡಿ ಶರಾವತಿ ನದಿ ತಿರುವು ಯೋಜನೆ ಗಾಬರಿಗೊಳಿಸುತ್ತಿದೆ, ಮನುಷ್ಯನೂ ಕೂಡ ಅಭಯಾರಣ್ಯದ ಅಂಗ, ಮನುಷ್ಯನನ್ನು ಹೊರತುಪಡಿಸಿ ಅರಣ್ಯ ಉಳಿಸುತ್ತೇವೆಂಬುದು ವಿರೋಧಾಭಾಸದ ಹೇಳಿಕೆಯಾಗುತ್ತದೆ ಎಂದರು. ಸರ್ಕಾರ ಎಂದರೆ ನಾವು ನೀವು ಎಲ್ಲರೂ ಕೂಡ, ವಿಧಾನಸೌಧಕ್ಕೆ ನಾವು ಯಾಕೆ ಹೋಗಬೇಕು? ಮುಖ್ಯಮಂತ್ರಿಗಳೇ ಬಂದು ನಮ್ಮನ್ನೆಲ್ಲ ಭೇಟಿಯಾಗಲಿ, ಗಂಗಾ ನದಿಗಿಂತಲೂ ಪುರಾತನ ನದಿ ನಮ್ಮ ಶರಾವತಿ ನದಿ, ಈ ಜೀವನದಿಯನ್ನು ಬತ್ತಲು ನಾವು ಬಿಡಬಾರದು, ನದಿಗಳ ಶುದ್ಧೀಕರಣ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಪ್ರಾಂತ ರೈತ ಸಂಘ ಹೊನ್ನಾವರದ ತಾಲೂಕಾ ಕಾರ್ಯದರ್ಶಿ ಗಣೇಶ ಭಂಡಾರಿ 10-15 ವರ್ಷಗಳ ಮೊದಲೇ ಇಂತಹ ಸಮಿತಿಗಳು ರಚನೆಯಾಗಿದ್ದರೆ ಇವತ್ತು ಹೋರಾಟ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ, ರಾಜಕೀಯ ಪ್ರೇರಿತ ಹೋರಾಟದಿಂದ ಜಯ ಸಿಗುವುದಿಲ್ಲ, ನಾವು ದೃಢಸಂಕಲ್ಪದೊಂದಿಗೆ ಜಾತಿ, ಮತ, ರಾಜಕೀಯ ತೊರೆದು ಒಂದಾಗಿ ಸಮಷ್ಠಿಯಿಂದ ಹೋರಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Chintana sabhe


ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷರಾದ ರವೀಂದ್ರ ನಾಯ್ಕ ಜನಪ್ರತಿನಿಧಿಗಳೇ ಸುಮ್ಮನೆ ಕುಳಿತಿರುವಾಗ ಗುರೂಜಿಯವರು ತಮ್ಮ ಧ್ವನಿ ಎತ್ತಿರುವುದು ಪ್ರಶಂಸನಾರ್ಹ, ನದಿಗಳನ್ನು ಸಂರಕ್ಷಿಸಿಕೊಂಡಿದ್ದರೆ ಬೆಂಗಳೂರಿಗೇ ನಮಗೆಲ್ಲ ನೀರನ್ನು ಪೂರೈಸುವ ಸಾಮಥ್ರ್ಯವಿರುತ್ತಿತ್ತು, ಜಿಲ್ಲೆಯ ಎಲ್ಲ ಅತಿಕ್ರಮಣದಾರರ ಕುಟುಂಬಗಳು ಗುರೂಜಿಯವರಿಗೆ ಬೆಂಬಲ ನೀಡುತ್ತಾರೆ, ಗುರೂಜಿಯವರ ನೇತೃತ್ವದಲ್ಲೇ ಈ ಹೋರಾಟ ಮಾಡಲು ಬಯಸುತ್ತೇನೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಮೂರು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಗ್ರಾಮ ಪಂಚಾಯತ ಮಟ್ಟದಲ್ಲಿ ಸಭೆ ಮಾಡಿ ಒಕ್ಕೊರಲಿನಿಂದ ಖಂಡನಾ ನಿರ್ಣಯ ಕೈಗೊಳ್ಳಿ ಎಂದು ಆಗ್ರಹಿಸಿದರು. ಕೇವಲ ಗೇರಸೊಪ್ಪ ಗ್ರಾಮ ಪಂಚಾಯತ ಈ ನಿರ್ಧಾರ ಕೈಗೊಂಡಿದೆ, ಉಳಿದ ಗ್ರಾಮ ಪಂಚಾಯತಗಳಿಗೆ ಏನಾಗಿದೆ ಎಂದು ಪ್ರಶ್ನಿಸಿದರು. ಈ ಸಂಘಟನೆ ಇವತ್ತೇ ಆಗಬೇಕು, ತಮ್ಮ ತಮ್ಮ ಗ್ರಾಮದಲ್ಲಿ ಸಮಸ್ಯೆಯ ಚಿತ್ರವನ್ನು ಬಿತ್ತರಿಸಬೇಕು, ಚುನಾವಣಾ ನೀತಿಸಂಹಿತೆ ಮುಗಿದ ನಂತರ ಸಭೆ ಮಾಡಿ ಖಂಡನಾ ನಿರ್ಣಯ ಕೈಗೊಳ್ಳಿ ಎಂದು ಎಲ್ಲ ಗ್ರಾಮ ಪಂಚಾಯತಗಳ ಮುಖಂಡರಿಗೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 1,500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಶೈಲೇಶ್ ನಾಯ್ಕ ಕುಮಟಾ ಕಾರ್ಯಕ್ರಮ ನಿರೂಪಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Trending Tagged With: ಅಭಯಾರಣ್ಯ ಘೋಷಣೆ ವಿರೋಧಿ, ಅರಣ್ಯ ಉಳಿಸುವ ಹೆಸರಿನಲ್ಲಿ ಅಕೇಶಿಯಾ, ಕಾರವಾರ ಮಾತನಾಡಿ. ಶರಾವತಿಯಂಥ, ಖ್ಯಾತ ನ್ಯಾಯವಾದಿಗಳಾದ ನಾಗರಾಜ ನಾಯಕ, ಗೇರಸೊಪ್ಪಾ ವತಿಯಿಂದ, ಜನಜೀವನ ಹತ್ತಿಕ್ಕುವ ಕೆಲಸ, ನದಿ ನೀರು ಸಂರಕ್ಷಣಾ ಸಮಿತಿ ಚಿಂತನ ಸಭೆ, ನದಿಗಳ ತಿರುವಿನ ಯೋಜನೆಗಳು ಇತ್ತೀಚಿನದಲ್ಲ, ನೀಲಗಿರಿ ಮುಂತಾದ ಗಿಡಗಳನ್ನು ನೆಟ್ಟು, ಪ್ರಾಣಿಗಳಿಗೆ ವಾಸಕ್ಕೆ ಅಯೋಗ್ಯ, ಶರಾವತಿ ನದಿ ನೀರು ಸಂರಕ್ಷಣ ಸಮಿತಿ, ಸಾರ್ವಜನಿಕರಿಗೆ ತಮ್ಮ ಅಭಿಪ್ರಾಯ ಮತ್ತು ಸಲಹೆ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...