ಹಳಿಯಾಳ :- ಹಳಿಯಾಳದ “ಬಸವರಾಜ ಟಾಕೀಜ್” ಚಿತ್ರಮಂದಿರದಲ್ಲಿ ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯಾಧಿಕಾರಿಯಾಗಿದ್ದ ಶೂರರಾಗಿದ್ದ ತಾನಾಜಿ ಮಾಲುಸರೆ ಅವರ ಚಿತ್ರ ತೆರೆಕಂಡಿದೆ.
ಖ್ಯಾತ ಹಿಂದಿಚಿತ್ರ ನಟ ಅಜಯ ದೇವಗನ್ ಅಭಿನಯದ ಈ ಚಿತ್ರ ಶುಕ್ರವಾರ ದೇಶಾದ್ಯಂತ ತೆರೆ ಕಂಡಿದ್ದು ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಹಳಿಯಾಳದ ಯುವಕರು ಶನಿವಾರ ಟಾಕೀಜ್ ಎದುರು ಪಟಾಕಿ ಸಿಡಿಸಿ -ಚಿತ್ರದ ಪೊಸ್ಟರ್ಗೆ ಹೂವಿನ ಮಾಲೆ ಹಾಕಿ-ಸಿಹಿ ಹಂಚಿ ಚಿತ್ರವನ್ನು ವಿಜೃಂಭಣೆಯಿಂದ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪ್ರವೀಣ ನಾಯ್ಕೋಜಿ, ಮೇಘರಾಜ ಲಾಡ, ಸರ್ವೆಶ ಕಾಂಡೊಳಕರ, ರಾಜು ಹಳ್ಳೂಕರ, ಬಾಳು ಜಾಧವ, ರಾಘವೇಂದ್ರ ಸಾಂಬ್ರೇಕರ, ಕಾಂತು ನೆವಗೆರಿ, ಸುನಿಲ್ ಬೊಬಾಟಿ, ಪಾಂಡು ತೊರ್ಲೆಕರ, ಸಂಜಯ ಕಲ್ಯಾಣಕರ ಇತರರು ಇದ್ದರು.
Leave a Comment