ಜೋಯಿಡಾ –
ಜೋಯಿಡಾ ತಾಲೂಕಿನ ಪ್ರಸಿದ್ದ ಹಾಗೂ ಉತ್ತರ ಕರ್ನಾಟಕದ ಜನರ ವಿಶೇಷ ಜಾತ್ರೆ ಉಳವಿ ಜಾತ್ರೆ ನಿಮಿತ್ತ ಉಳವಿ ಗ್ರಾಮ ಪಂಚಾಯತ ವತಿಯಿಂದ ಈ ಬಾರಿ ವಿಶೇಷ ಕಾಳಜಿ ವಹಿಸಿ ಜಾತ್ರೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಉಳವಿ ಗ್ರಾ,ಪಂ, ಎಚ್ಚರ ವಹಿಸಿದೆ.
ಉಳವಿ ಜಾತ್ರೆ ಪೂರ್ವ ಸಿದ್ದತೆ ಕಾರ್ಯ ನಡೆದಿದ್ದು , ಈಗಾಗಲೇ ಉಳವಿಯಲ್ಲಿ ಹೊಸದಾಗ 4 ನೀರಿನ ಟ್ಯಾಂಕ್ ಗಳನ್ನು ಅಳವಡಿಸಿದ್ದು, ಟ್ಯಾಂಕಗಳಲ್ಲಿ ನೀರು ತುಂಬಿಸುವ ಕೆಲಸ ನಡೆಯುತ್ತಿದೆ, ವಿಶೇಷವಾಗಿ ಹೆಣಕೊಳ ಬಳಿ ಜಾತ್ರೆಗೆ ಬರುವ ಜನರಿಗೆಂದು ಹೊಸದಾಗಿ ಉಳವಿ ಗ್ರಾ,ಪಂ, ವತಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ, ಈ ಬಾರಿ ಹೆಚ್ಚಿನ ಮಳೆಯಾಗಿದ್ದರಿಂದ ವೀರಭದ್ರೇಶ್ವರ ಕೆರೆ, ಸಿದ್ದೇಶ್ವರ ಕೆರೆಗಳು ತುಂಬಿಕೊಂಡಿವೆ, ಜಾತ್ರೆಯ ಸಮಯದಲ್ಲಿ ಬಂದ ಭಕ್ತರಿಗೆ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಹಲವಾರು ಟ್ಯಾಂಕರಗಳು ಹಾಗೂ ಕೊಡತಳ್ಳಿ ಹಳ್ಳದಿಂದ ನೀರು ಮೇಲಕ್ಕೆ ತರುವ ಕಾರ್ಯ ಸಾಗಿದೆ, ಅರಣ್ಯ ಇಲಾಖೆಯಿಂದ ಸೇವೆಯ ರೂಪದಲ್ಲಿ ಜಾತ್ರೆಯ ಪೂರ್ವದಲ್ಲಿ ಬರುವ ಭಕ್ತರಿಗೆ ಅರಣ್ಯದ ಮಧ್ಯದಲ್ಲಿ ನೀರು ಹಾಗೂ ಬೆಲ್ಲವನ್ನು ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಹಿರಿಯ ಅರಣ್ಯಾಧಿಕಾರಿಗಳು ಕೆ,ಎಸ್,ಗೊರವರ್ ಹಾಗೂ ಎಸ್ ತೋಡ್ಕರ ತಿಳಿಸಿದ್ದಾರೆ.
ಮಂಜುನಾಥ ಮೋಕಾಶಿ – ಗ್ರಾ,ಪಂ,ಅಧ್ಯಕ್ಷರು ,ಉಳವಿ
ಉಳವಿ ಜಾತ್ರೆಗೆ ಬಂದಂತ ಭಕ್ತರಿಗೆ ನೀರಿನ ಸಮಸ್ಯೆ ಆಗದಂತೆ ಎಲ್ಲಾ ಕಡೆಗಳಲ್ಲಿ ನೀರಿನ ವ್ಯವಸ್ಥೆ ಮಾಡಿದ್ದೇವೆ, ಹೆಚ್ಚನ ಮಳೆಯಾಗಿದ್ದರಿಂದ ಎಲ್ಲಾ ಕೆರೆಗಳು ಹಾಗೂ ಹಳ್ಳಗಳಲ್ಲಿ ನೀರು ಇರುವುದರಿಂದ ನೀರಿನ ಸಮಸ್ಯೆ ಆಗುವುದಿಲ್ಲ.
ಗಂಗಾಧರ ಕಿತ್ತೂರ – ಉಳವಿ ಚೆನ್ನಬಸವೇಶ್ವರ ಟ್ರಸ್ಟ ಕಮಿಟಿ ಅಧ್ಯಕ್ಷ ,
ಉಳವಿ ಜಾತ್ರೆಯ ಪ್ರಯುಕ್ತವಾಗಿ ನಾವು ಈಗಾಗಲೇ ಬೇಕಾಗುವ ಎಲ್ಲಾ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ಈ ಬಾರಿ ಉಳವಿ ಜಾತ್ರೆಗೆ ಹೆಚ್ಚಿನ ಜನರು ಬರುವ ನಿರೀಕ್ಷೆ ಇದೆ.
Leave a Comment