• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಲಕ್ಷಾಂತರ ಭಕ್ತರ ಭಕ್ತಿಘೊಷಗಳೊಂದಿಗೆ ವಿಜೃಂಭಣೆಯಿಂದ ನಡೆದ ಶ್ರೀಕ್ಷೇತ್ರ ಉಳವಿ‌ ಚೆನ್ನಬಸವೇಶ್ವರರ ಮಹಾರಥೋತ್ಸವ.

February 11, 2020 by Sandesh Desai Leave a Comment

watermarked IMG 20200211 WA0051

ಜೋಯಿಡಾ –
ಹರಹರ ಮಹಾದೇವ,ಹರಹರ ಮಹಾದೇವ, ಉಳವಿ ಚೆನ್ನಬಸವೇಶ್ವರ ಮಹರಾಜ ಕೀ ಜೈ ಎನ್ನುತ್ತ ಲಕ್ಷಾಂತರ ಭಕ್ತರ ಜಯಘೋಷಗಳೊಂದಿಗೆ ಉಳವಿ ಚೆನ್ನಬಸವೇಶ್ವರ ಜಾತ್ರೆಯ ಮಹಾ ರಥೋತ್ಸವ ನಡೆಯಿತು.
ಶ್ರೀ ಕ್ಷೇತ್ರ ಉಳವಿ ಚೆನ್ನಬಸವಣ್ಣನವರ ಜಾತ್ರೆ ಪ್ರತಿ ವರ್ಷ ಭಾರತ ಹುಣ್ಣಿಮೆಯ ಮಘಾ ನಕ್ಷತ್ರದ ಶುಭ ಗಳಿಗೆಯಲ್ಲಿ ನಡೆಯುತ್ತದೆ. ಇಂದೂ ಕೂಡಾ ಮಧ್ಯಾಹ್ನ 4 ಘಂಟೆಗೆ ಹಳಿಯಾಳ ಜೋಯಿಡಾ ಶಾಸಕ ಆರ್,ವಿ,ದೇಶಪಾಂಡೆ ರಥಕ್ಕೆ ಪೂಜೆ ಸಲ್ಲಿಸಿದ ನಂತರ ತೇರು ಎಳೆದರು, ಲಕ್ಷಾಂತರ ಭಕ್ತರು ಮಹಾ ರಥೋತ್ಸವ ನೋಡಿ ಧನ್ಯರಾದರು.
ಶ್ರೀ ಕ್ಷೇತ್ರ ಉಳವಿ ಜೋಯಿಡಾ ತಾಲೂಕಿನ ಶ್ರದ್ದಾ ಭಕ್ತಿ ಕೇಂದ್ರ 12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮವರೊಂದಿಗೆ ಬಂದು ಉಳವಿಯಲ್ಲಿ ನೆಲೆಸಿದರು ,ವಚನ ಸಾಹಿತ್ಯ ರಕ್ಷಣೆ, ಅನ್ನದಾಸೋಹ ಅಂದಿನಿಂದ ನಿರಂತರವಾಗಿ ಇಲ್ಲಿ ನಡೆಯುತ್ತಲೆ ಬಂದಿತು.

watermarked IMG 20200211 WA0058


ಶ್ರೀ ಕ್ಷೇತ್ರಕ್ಕೆ ಹಿಂದೆ ಸಂಪರ್ಕದ ಕೊರತೆ ಇದ್ದಾಗ ಭಕ್ತರು ಚಕ್ಕಡಿ ಗಾಡಿಗಳ ಮೂಲಕ ವಾರಗಳ ಕಾಲ ಕಾಡಿನಲ್ಲಿ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗಲೂ ಕೂಡಾ ನೂರಾರು ಚಕ್ಕಡಿಗಳಲ್ಲಿ ಭಕ್ತರು ಬಂದು ತಮ್ಮ ಶ್ರದ್ದಾ ಭಕ್ತಿಯೊಂದಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಅತ್ಯಂತ ಸಂತೋಷದ ವಿಷಯ. ಅಲಂಕೃತ ಎತ್ತುಗಾಡಿಗಳಲ್ಲಿ ಅಡಕೇಶ್ವರ ಮಡಕೇಶ್ವರ ಉಳವಿ ಚೆನ್ನಬಸವೇಶ್ವರ ಎನ್ನುತ್ತ ರಸ್ತೆಗಳಲ್ಲಿ ಎತ್ತುಗಳ ಕಾಲಿಗೆ ಕಟ್ಟಿದ ಗೆಜ್ಜೆಯ ಸಪ್ಪಳ ಕೇಳುತ್ತ, ನೋಡುತ್ತಾ ಸಂತಸದಿಂದ ಬಸವಣ್ಣನನ್ನು ನೋಡುಲು ಆಮವಿಸುವ ಭಕ್ತರು , ಜೋಳದ ರೊಟ್ಟಿ ಚಟ್ನಿಪುಡಿ,ಮುಳಗಾಯಿ ಪಲ್ಯವನ್ನು ಬಂದತ ಭಕ್ತರಿಗೆ ಉಳವಿ ದಾಸೋಹ ನೀಡುತ್ತಿರುವುದು ಸಂತಸದ ವಿಷಯ.
ಏನೇ ಆಗಲಿ ಉಳವಿ ಜಾತ್ರೆ ತಪ್ಪಿಸೋದಿಲ್ಲರಿ, ವರ್ಷಕೊಮ್ಮೆ ನೋಡದಾಗನೇ ಸಮಾಧಾನರಿ ಅಂತ ಪಾದಯಾತ್ರೆಗಳ ಮೂಲಕ ಜಾತ್ರೆಗೆ ಬರುವ ಭಕ್ತರು ಹೇಳುವ ಮಾತು. ನೂರಾರು ಕಿ,ಮೀ,ನಡೆದು ಉತ್ತರಕರ್ನಾಟಕದ ಭಕ್ತರು ಉಳವಿಗೆ ಬರುತ್ತಾರೆ.
ಶ್ರೀ ಕ್ಷೇತ್ರದಲ್ಲಿ ಉಳವಿ ಗ್ರಾ.ಪಂ.ಕುಡಿಯುವ ನೀರಿನ,ಶೌಚಾಲಯದ ವ್ಯವಸ್ಥೆ ಮಾಡಿದೆ, ಆರೋಗ್ಯ ಇಲಾಕೆ, ಪಶು ಇಲಾಕೆ ,ಅರಣ್ಯ ಇಲಾಕೆ, ಪೋಲಿಸ್ ಇಲಾಕೆ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕಳೆದ 8 ದಿನಗಳಿಂದ ಜನರಿಗೆ ಮಾರ್ಗದರ್ಶನಕ್ಕೆ ಸಹಕರಿಸುತ್ತಿದ್ದಾರೆ. ವಿವಿಧ ಇಲಾಕೆಯ ನೂರಾರು ಸಿಬ್ಬಂದಿಗಳು ಆರಕ್ಷಕ ಇಲಾಕೆಯ 500 ಕ್ಕೂ ಹೆಚ್ಚಿನ ಸಿಬ್ಬಂದಿಗಳು ಜಾತ್ರೆಯು ಸುಗಮವಾಗಿ ನಡೆಯಲು ಶ್ರಮಿಸುತ್ತಿದ್ದಾರೆ.
ಪಾದಯಾತ್ರೆಗಳಿಂದ ಬರುವವರಿಗೆ ,ಚಕ್ಕಡಿಯಲ್ಲಿ ಬರುವ ಭಕ್ತರಿಗೆ ದಾಂಡೇಲಿ -ಗುಂದ ಮಾರ್ಗವಾಗಿ ಅವಕಾಶ ನೀಡಲಾಗಿದೆ. ವಾಹನ ಸವಾರರಿಗೆ ದಾಂಡೇಲಿ ಜೋಯಿಡಾ ಮಾರ್ಗವಾಗಿ ಅವಕಾಶ ನೀಡಲಾಗಿದೆ, ಒಟ್ಟಾರೆ 8 ದಿನಗಳ ಜಾತ್ರೆಯಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ.

IMG 20191213 WA0004


ಹಲವಾರು ಗಣ್ಯರು ಜಾತ್ರೆಯ ವೇಳೆ ಬೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ, ಹಳಿಯಾಳ ಜೋಯಿಡಾ ಶಾಸಕ ಆರ್,ವಿ,ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್,ಎಲ್,ಘೋಟ್ನೇಕರ,ಕೇಂದ್ರ ಸಚಿವರು, ಜಿ,ಪಂ, ನ ಸಂತೋಷ ರೇಣುಕೆ,ರಮೇಶ ನಾಯ್ಕ ಮತ್ತು ತಾ,ಪಂ, ಸದಸ್ಯರು ಹಾಗೂ ಉತ್ತರಕರ್ನಾಟಕದ ಹಲವಾರು ಗಣ್ಯರು, ಸ್ವಾಮೀಜಿಗಳು ಶ್ರೀ ದೇವರ ದರ್ಶನ ಪಡೆದರು.
ಟ್ರಾಪಿಕ್ ಜಾಮ್ –
ತೇರು ಎಳೆಯುತ್ತಿದ್ದಂತೆ ಸಾವಿರಾರು ಜನರು ಒಮ್ಮೆಲ್ಲೆ ರಸ್ತೆಯಲ್ಲಿ ಹೊರಟ ಕಾರಣ 2 ಗಂಟೆಗೂ ಹೆಚ್ಚು ಕಾಲ ಟ್ರಾಪಿಕ್ ಜಾಮ್ ಆಯಿತು, ಟ್ರಾಪಿಕ್ ಜಾಮ್ ಆಗಲು ಮುಖ್ಯ ಕಾರಣ ಕೆ,ಎಸ್,ಆರ್,ಟಿ,ಸಿ ಬಸ್ಸಗಳು ಎನ್ನುವುದು ಜನರ ಮಾತಾಗಿತ್ತು. ಕೆ,ಎಸ್,ಆರ್,ಟಿ,ಸಿ, ಬಸಗಳು ದಾರಿಯುದ್ದಕ್ಕೂ ನಿಂತು ರಸ್ತೆಯಲ್ಲಿ ಪ್ರಯಾಣಿಕರು ಸಾಗುವುದನ್ನೇ ನಿಲ್ಲಿಸಿ ಬಿಟ್ಟಿತು, ಪೋಲಿಸ್ ಇಲಾಕೆಯವರು ಹರ ಸಹಾಸ ಪಟ್ಟು ಟ್ರಾಪಿಕ್ ಕ್ಲೀಯರ ಮಾಡಿ ಕೊಟ್ಟರು.

watermarked IMG 20200211 WA0057

ದೇವಸ್ಥಾನದ ವತಿಯಿಂದ ನಿರಂತರ ದಾಸೋಹ ಇದ್ದರು ಕೂಡಾ 10 ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರಸಾದ ನಿಲಯ ನಿರ್ಮಸಿ ಭಕ್ತರಿಗೆ ಅನ್ನದಾಸೋಹ ನೀಡುತ್ತಿರುವುದು ವಿಶೇಷವಾಗಿತ್ತು,
ಯಾವುದೇ ಮನರಂಜನಾ ಕಾರ್ಯಕ್ರಮಗಳಿಲ್ಲದಿದ್ದರೂ ವಿವಿಧ ಅಂಗಡಿಗಳು ಹೋಟೆಲಗಳು, ಅರಣ್ಯ ಇಲಾಕೆಯ ಮಳಿಗೆಗಳು ಜಾತ್ರೆಯ ಮೆರಗನ್ನು ಹೆಚ್ಚಿಸಿದವು. ಕಳೆದ ಫೆ,1 ರಿಂದ ಉಳವಿ ಜಾತ್ರೆ ಆರಂಭವಾಗಿದ್ದು ನಾಳೆ ಮಂಗಳವಾರ ನಡೆಯುವ ಓಕುಳಿಯೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ,

ಜಾತ್ರೆಯ ತೇರು ಎಳೆಯುವ ಸಂದರ್ಭದಲ್ಲಿ ಶಾಸಕ ಆರ್,ವಿ,ದೇಶಪಾಂಡೆ ,ಎಸ್,ಎಲ್,ಘೋಟ್ನೆಕರ, ಜಿ,ಪಂ,ನ ಸಂತೋಷ ರೇಣುಕೆ, ರಮೇಶ ನಾಯ್ಕ, ಉಳವಿ ಗ್ರಾ,ಪಂ,ಅದ್ಯಕ್ಷ ಮಂಜುನಾಥ ಮೊಕಾಶಿ,ಉಳವಿ ಟ್ರಸ್ಟ ಕಮಿಟಿಯ ಅಧ್ಯಕ್ಷ ಗಂಗಾಧರ ಕಿತ್ತೂರ, ಸಂಜಯ ಕಿತ್ತೂರ, ಬಿ,ಸಿ,ಉಮಾಪತಿ, ಇತರರು ಉಪಸ್ಥಿತರಿದ್ದರು.

watermarked IMG 20200211 WA0052

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Joida Tagged With: ಆರ್, ಉಳವಿ ಚೆನ್ನಬಸವೇಶ್ವರ ಮಹರಾಜ, ಜಾತ್ರೆಯ ವೇಳೆ ಬೇಟಿ ನೀಡಿ ದೇವರ ದರ್ಶನ, ದೇಶಪಾಂಡೆ ರಥಕ್ಕೆ ಪೂಜೆ, ನಡೆದ, ಭಕ್ತಿಘೊಷಗಳೊಂದಿಗೆ ವಿಜೃಂಭಣೆ, ಭಾರತ ಹುಣ್ಣಿಮೆಯ, ಲಕ್ಷಾಂತರ ಭಕ್ತರ, ವಿ, ಶ್ರೀಕ್ಷೇತ್ರ ಉಳವಿ‌ ಚೆನ್ನಬಸವೇಶ್ವರರ ಮಹಾರಥೋತ್ಸವ

Explore More:

About Sandesh Desai

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...