ಒಳಚರಂಡಿ ಅವ್ಯವರ್ಸಥೆಯಿಂದ ಪಟ್ಟಣದ ರಸ್ತೆಗಳೆಲ್ಲ ಹೊಂಡ ಹಾಗೂ ಧೂಳಿನಿಂದ ಸಾರ್ವಜನಿಕರು ನಿತ್ಯ ಸಂಚಾರ ನಡೆಸಲು ಪರದಾಟಮಾಡುತ್ತಿದ್ದರು. ಈ ಹಿಂದಿನಿಂದಲೂ ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವು ಪ್ರತಿಭಟನೆಗಳು ನಡೆದಿದ್ದವು. ಭರವಸೆ ನೀಡುತ್ತ ಬಂದಿದ್ದ ಶಾಸಕ ದಿನಕರ ಶೆಟ್ಟಿ ಮಂಗಳವಾರ ಪಟ್ಟಣದ ವೆಂಕ್ರಟಮಣ ದೇವಾಲಯಕ್ಕೆ ಪೂಜೆ ಸಲ್ಲಿಸಿದ ಬಳಿಕ 1 ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು.
1 ಕೋಟಿ ವೆಚ್ಚದಲ್ಲಿ ಬಾಳೇರಿ ಕಾಂಫ್ಲೆಕ್ಸನಿಂದ ದುರ್ಗಾಕೇರಿಗೆ ಹೋಗುವ ರಸ್ತೆ , ದುರ್ಗಾಕೇರಿ ಗ್ರಾಮ ಛಾವಡಿಯಿಂದ ಬಾಂದೇಹಳ್ಳ ಬ್ರಿಜ್ ವರೆಗೆರಾಷ್ಟ್ರೀಯ ಹೆದ್ದಾರಿಯಿಂದ ಗುಂಡಿಬೈಲ್ ವೆಂಕ್ರಟಮಣ ದೇವಾಲಯದ ರಸ್ತೆಗೆ ಕಾಂಕ್ರಿಟಿಕರಣ ಹಾಗೂ ಕೆಳಗಿನಪಾಳ್ಯ ಜೋಡುಕಟ್ಟೆಯವರೆಗೆ ಗಟಾರ ನಿರ್ಮಾಣಗೊಳ್ಳಲಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ ಪಟ್ಟಣದ ಹೊಂಡದ ರಸ್ತೆಗೆ ಮುಕ್ತಿ ನೀಡುವ ಉದ್ದೇಶದಿಂದ 1 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣಗೊಳ್ಳಲಿದೆ. ನಾಳೆಯಿಂದ ಕಾರ್ಯ ಆರಂಭಗೊಳ್ಳಲಿದ್ದು ಇನ್ನು 2 ಕೋಟಿ ಟೆಂಡರ್ ಇದೇ 24ರಂದು ಓಫನ್ ಆಗಲಿದ್ದು ಅದನ್ನು ಶಿಘ್ರವಾಗಿ ಕಾರ್ಯರಂಭಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೇ ಮಳೆಗಾಲದೊಳಗೆ ಪಟ್ಟಣದ ಎಲ್ಲಾ ರಸ್ತೆಗೂ ಹೊಂಡಕ್ಕೆ ಮುಕ್ತಿ ನೀಡಲು ಪ್ರಾಮಾಣಿPವಾಗಿÀ ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ವಿವೇಕ ಶೇಣ್ವೆ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ, ಪಿಎಸೈ ಶಶಿಕುಮಾರ, ಪಟ್ಟಣಪಂಚಾಯತ ಸದಸ್ಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment