• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಾಮಕಸ್ತೂರಿಯ ಔಷಧಿ ಗುಣಗಳು

February 14, 2020 by KV Parthasarathi Kshatriya Leave a Comment

79774671 262934731334061 8749488473813024768 o

ಕಾಮಕಸ್ತೂರಿ
ರುದ್ರಜಡಾ ಕರ್ಫುರಾ ತುಳಸಿ ಕಮಗಗ್ಗಿಲಿ ಸಜ್ಜಮುಕ್ಕ ತಿರುನೇಟ್ರ ಪಚೈ ತಿರುವಾಚಿ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಕಾಮಕಸ್ತೂರಿ ಗಿಡವು ತನ್ನ ಒಡಲಲ್ಲಿ ಅಗಾಧವಾದ ಔಷಧೀಯಗುಣವನ್ನು ತುಂಬಿಕೊಂಡಿದೆ.ಅಷ್ಟೇ ಅಲ್ಲದೆ ಇದೊಂದು ಸುಗಂಧ ದ್ರವ್ಯ ತುಂಬಿರುವ ಗಿಡವು ಹೌದು.
ಈ ಗಿಡವು ಶಿವನಿಗೆ ತುಂಬಾ ಪ್ರಿಯವಾದದ್ದು.ಇದರ ಎಲೆಗಳಿಂದ ಮಾಲೆ ತಯಾರಿಸಿ ವಿಶೇಷ ಪೂಜೆಗಳಲ್ಲಿ ಶಿವನನ್ನು ಅಲಂಕರಿಸುತ್ತಾರೆ.ಅದಕ್ಕೆ ಇದನ್ನು”ರುದ್ರಜಡಾ”ಎಂದು ಕರೆಯುತ್ತಾರೆ.ಈ ಸಸ್ಯವು ಮನೆ ಮುಂದೆ ಇದ್ದರೆ “ಅದೃಷ್ಟದ ಬಾಗಿಲು ತೆರೆಯುತ್ತೆ”ದರಿದ್ರ ದೂರವಾಗುತ್ತೆ. ಧನಾಕರ್ಷಣೆ ಬರುತ್ತೆ ಎಂದು ಬಲ್ಲವರು, ಜ್ಯೋತಿಷಿಗಳು ಅನುಭವದ ಮಾತು ಹೇಳುತ್ತಾರೆ.
ಈ ಗಿಡವನ್ನು ಸಮೂಲ ಸಹಿತ ತಂದು ಒಂದು ಹಿಡಿಯಷ್ಟು ಮಣ್ಣಿನ ಮಡಿಕೆಯಲ್ಲಿ ಹಾಕಿ ಅದಕ್ಕೆ ಒಂದು ಲೋಟ ನೀರು ಹಾಕಿ ಅರ್ಧ ಚಮಚ ಕಾಳು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ ಉಗರು ಬೆಚ್ಚಗಾದಾಗ ಮಕ್ಕಳು 10ml ಹಿರಿಯರು 50ml ಸೇವಿಸಿದರೆ, ಜ್ವರ ಕೆಮ್ಮು ಕಫ ಚರ್ಮ ರೋಗಗಳು ಮೂತ್ರ ಸಂಬಂಧಿಸಿದ ವ್ಯಾಧಿಗಳು ಗುಣವಾಗುತ್ತೆ.ಮುಖ್ಯವಾಗಿ ಇದರಲ್ಲಿ ಫೈಬರ್ ಅಂಶ ಜಾಸ್ತಿ ಇರುವುದರಿಂದ ಮಲಬದ್ಧತೆ ದೂರವಾಗುತ್ತೆ.
ಈ ಗಿಡದ ಐದಾರು ಎಲೆಗಳನ್ನು ತಂದು ಎರಡು ಮೂರು ತೊಟ್ಟು ರಸ ಹಿಂಡಿದರೆ ಕಿವಿನೋವು ಶೀಘ್ರ ಗುಣವಾಗುತ್ತೆ.
ವಯಸ್ಕರಲ್ಲಿ ಮೊಡವೆ ಸಮಸ್ಯೆಗಳು ವಿಪರೀತ, ಅಂತವರು ಕಾಮಕಸ್ತೂರಿ ಎಲೆಗಳನ್ನು ನುಣ್ಣಗೆ ಅರೆದು ಮುಖಕ್ಕೆ ಲೇಪನ ಮಾಡಿದರೆ ಮೊಡವೆಗಳು ಮಚ್ಚೆಗಳು ಮಾಯವಾಗುತ್ತೆ.
ಕೆಲವರಿಗೆ ವಾಂತಿ ಸಮಸ್ಯೆ ಜಾಸ್ತಿ, ಅಂತವರು 2 ಚಮಚ ಎಲೆಯ ರಸಕ್ಕೆ 1ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ವಾಂತಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದು….!
ಗಜ್ಜಿ ದದ್ದು ಮಚ್ಚೆ ಇತ್ಯಾದಿ ಚರ್ಮರೋಗಗಳಿಗೆ ರಾಮಬಾಣ. ಗಿಡದ ಎಲೆಗಳನ್ನು ತಂದು ಶುಭ್ರಗೊಳಿಸಿ ಕಲಾಬತ್ತಿನಲ್ಲಿ ನುಣ್ಣಗೆ ಅರೆದು ಅದಕ್ಕೆ ಅರಸಿಣ ಚೂರ್ಣ ಸೇರಿಸಿ ಮೈಗೆ ಲೇಪನ ಮಾಡಿದರೆ ವಾಸಿಯಾಗುತ್ತೆ.
ಒಂದು ಚಮಚ ಕಾಮಕಸ್ತೂರಿ ಬೀಜಗಳನ್ನು ಶರಬತ್ತಿನಲ್ಲಿ ಕಲಸಿ ಕುಡಿದರೆ ಮೈ ತಂಪಾಗಿ ಮೈಯಲ್ಲಿನ ಉಷ್ಣತೆ ಕಡಿಮೆಯಾಗುತ್ತೆ.
ಮೈಯಲ್ಲಿ ಗಾಯಗಳಾದಾಗ ಕಾಮಕಸ್ತೂರಿ ಎಲೆಗಳನ್ನು ಅರೆದು ಅದಕ್ಕೆ ಅರಸಿಣ ಚಿಟಿಕೆ ಸೇರಿಸಿ ಲೇಪಿಸಿದರೆ ತಕ್ಷಣ ರಕ್ತಶ್ರಾವ ನಿಂತು ಗಾಯ ಬೇಗನೆ ಗುಣವಾಗುತ್ತೆ.
ಇದರ ಕಷಾಯ ಬೆಳಿಗ್ಗೆ ಸಂಜೆ ಸೇವಿಸುತ್ತಾ ಬಂದರೆ ರಕದೊತ್ತಡ,ಹೃದಯಕ್ಕೆ ಸಂಬಂಧಿಸಿದ ವ್ಯಾಧಿಗಳು ಗುಣವಾಗುತ್ತೆ. ಮುಖ್ಯವಾಗಿ ರಕ್ತಶುದ್ಧಿಯಾಗುತ್ತೆ.
ಈ ಗಿಡದ ರಸ ಅಥವಾ ಬೀಜವನ್ನು ನಿರಂತರ ಸೇವಿಸುವುದರಿಂದ ಅಲ್ಸರ್ ನಿಂದ ಮುಕ್ತಿ ಹೊಂದಬಹುದು.
ಹಳ್ಳಿಗಳಲ್ಲಿ ಪ್ರತಿಯೊಂದು ಮನೆಯ ಮುಂದೆ ಈ ಗಿಡವನ್ನು ಬೆಳೆಸಿರುದನ್ನು ಕಾಣಬಹುದು…! ಈ ಗಿಡ ಇದ್ದಕಡೆ ಸೊಳ್ಳೆಗಳ ಕಾಟ ಇರುವುದಿಲ್ಲ.ಇದು ಬಹು ಉಪಯೋಗಿ ಸಸ್ಯವಾದುದ್ದರಿಂದ ಇದನ್ನ”ಮಹಾಮೂಲಿ” ಎಂದು ಕರೆಯುತ್ತಾರೆ.ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಇದರ ಬೇಡಿಕೆ ಹೆಚ್ಚಿರುವುದರಿಂದ ಇದನ್ನ ಅನೇಕ ಪ್ರಾಂತ್ಯಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, ಆರೋಗ್ಯ, ಮನೆಮದ್ದು Tagged With: ಅಗಾಧವಾದ ಔಷಧೀಯಗುಣ, ಅರಸಿಣ ಚೂರ್ಣ ಸೇರಿಸಿ ಮೈಗೆ ಲೇಪನ, ಉಷ್ಣತೆ ಕಡಿಮೆ, ಕಮಗಗ್ಗಿಲಿ, ಕಾಮಕಸ್ತೂರಿ, ಕಾಮಕಸ್ತೂರಿ ಬೀಜಗಳನ್ನು, ಕಾಮಕಸ್ತೂರಿಯ ಔಷಧಿ ಗುಣಗಳು, ತುಳಸಿ, ಪಚೈ ತಿರುವಾಚಿ, ಮೈ ತಂಪಾಗಿ, ಮೈಯಲ್ಲಿನ, ರುದ್ರಜಡಾ ಕರ್ಫುರಾ, ಶರಬತ್ತಿನಲ್ಲಿ ಕಲಸಿ ಕುಡಿದರೆ, ಸಜ್ಜಮುಕ್ಕ ತಿರುನೇಟ್ರ, ಸುಗಂಧ ದ್ರವ್ಯ ತುಂಬಿರುವ ಗಿಡ

Explore More:

About KV Parthasarathi Kshatriya

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...