• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಗ್ನಿಶಿಖಾ ಔಷಧಿ ಗುಣಗಳು

February 22, 2020 by KV Parthasarathi Kshatriya Leave a Comment

76647921 258835611743973 6099512240799481856 n

ಅಗ್ನಿಶಿಖೆ ಅಗ್ನಿಮುಖಿ ಲಾಂಗೂಲಕಿ ಲಾಂಗಲಾಹ್ವ ಗರ್ಭಗಾತಿನಿ ಇಂದ್ರಪುಷ್ಠಿ ಅಡವಿನಾಭಿ ಪೊಟ್ಟಿದುಂಪ ಕಾದಲ್ ಪೂ ಕಾರ್ತಿಕೈ ಕೆಳಂಗು ಈಗೆ ನಾನಾ ರೀತಿ ಹೆಸರುಗಳಿಂದ ಗುರುತಿಸುತ್ತಾರೆ.
ಕಾಡುಮೇಡು ಬೆಟ್ಟಗುಡ್ಡಗಳು ಬೇಲಿಗಳಲ್ಲಿ ಬೆಳೆಯುವ ಈ ಗಿಡಕ್ಕೆ ಆಯುರ್ವೇದ ಕಂಪನಿಗಳಿಂದ ಔಷಧಿ ತಯಾರಿಸಲು ಅಪಾರ ಬೇಡಿಕೆ ಇರುವುದರಿಂದ ಇದು ಅವನತಿ ಅಂಚಿಗೆ ಬಂದು ನಿಂತಿದೆ.
ಕರ್ನಾಟಕದ ಬಾವುಟವನ್ನು ಹೋಲುವ ಬಣ್ಣಗಳಿರುವ ಈ ಹೂ ನೋಡಲು ತುಂಬಾ ಆಕರ್ಷಕವಾಗಿರುತ್ತದೆ.ಇದನ್ನು ಜಿಂಬಾಬ್ವೆ ದೇಶ ರಾಷ್ಟ್ರೀಯ ಫುಷ್ಪ ಎಂದು ಘೋಷಿಸಿದೆ.


ಅತಿಮುಖ್ಯ ಸೂಚನೆ:- ಈ ಗಿಡವು ವಿಷದಿಂದ ಕೂಡಿದ್ದು, ಅನುಭವಿ ಆಯುರ್ವೇದ ವೈದ್ಯರು ಅಥವಾ ಪಂಡಿತರ ಸಲಹೆ ಸೂಚನೆಗಳಿಲ್ಲದೆ ಉಪಯೋಗಿಸಬಾರದು. ಇದರ ಗೆಡ್ಡೆ ಶುದ್ಧಿ ಮಾಡಿದರು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಬಾರದು. ವೈದ್ಯರ ಸಲಹೆಯಂತೆ ಇಂತಿಷ್ಟೆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಆಗೊಮ್ಮೆ ತೆಗೆದುಕೊಂಡಿದ್ದೆ ಆದರೆ ವಾಂತಿ ಭೇದಿಯಾಗುವುದಲ್ಲದೆ ಹೃದಯಸ್ಥಂಬನವಾಗಿ ಮರಣವಾಗುವ ಸಂಭವ ಸಹ ಇರುತ್ತೆ. ಇದು ಎಷ್ಟು ಉಪಕಾರಿಯೋ ಅಷ್ಟೇ ಅಪಾಯಕಾರಿ.

87286952 233523134478375 214345827580116992 o


ಇದನ್ನು ಬಾಹ್ಯ ಉಪಯೋಗ ಮಾಡುವಾಗ ಮಾತ್ರ ಶುದ್ಧಿ ಮಾಡದೆ ಉಪಯೋಗಿಸಬಹುದು, ಹೊಟ್ಟೆಗೆ ತೆಗೆದುಕೊಳ್ಳುವಾಗ ಮಾತ್ರ ಶುದ್ಧಿ ಮಾಡಿಯೇ ಉಪಯೋಗಿಸಬೇಕು ಹೆಚ್ಚರ….! ಯಾವುದಕ್ಕೂ ವೈದ್ಯರ ಸಲಹೆ ಅತಿಮುಖ್ಯ.
ಶುದ್ಧಿ ಮಾಡುವ ವಿಧಾನ:- ಅಗ್ನಿಶಿಖೆ ಗೆಡ್ಡೆಯನ್ನು ತಂದು ಶುದ್ಧವಾಗಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ ಒಂದು ಮಡಕೆಯಲ್ಲಿ ಮಜ್ಜಿಗೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕಲಸಿ ಐದರಿಂದ ಆರು ದಿನಗಳ ಕಾಲ ಚೆನ್ನಾಗಿ ನೆನಸಿಟ್ಟು,ಹೊರತೆಗೆದು ನೆರಳಲ್ಲಿ ಒಣಗಿಸಿ ಉಪಯೋಗಿಸ ಬೇಕು.
ಹಾವು ಚೇಳು ವಿಷಜಂತುಗಳು ಕಚ್ಚಿದಾಗ ಶುದ್ಧಿಮಾಡಿದ ಗೆಡ್ಡೆಯ ಚೂರ್ಣ ಸೇವಿಸಿದರೆ ವಿಷ ನಿವಾರಣೆಯಾಗುತ್ತದೆ.ಇದರ ಗಂಧವನ್ನು ಕಚ್ಚಿದ ಜಾಗಕ್ಕೆ ಲೇಪನ ಮಾಡುತ್ತಾರೆ.ಇದು ವಿಷ ನಿವಾರಣೆ ಮಾಡುವದರಲ್ಲಿ ತುಂಬಾ ಪರಿಣಾಮಕಾರಿಯಾದಂತಹ ಕೆಲಸ ಮಾಡುತ್ತೆ.
ಈ ಹೂವಿನ ಪರಾಗಧೂಳನ್ನು ಎದೆಹಾಲಿನಲ್ಲಿ ತೇಯ್ದು ಕಣ್ಣು ನೋವಿಗೆ ಈಗಲೂ ಅನೇಕ ಕಡೆ ಬಳಸುತ್ತಾರೆ.
ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಗೆಡ್ಡೆಯ ಗಂಧ ತೇಯ್ದು ಅಂಗಾಲು ಅಂಗೈಗೆ ಲೇಪನ ಮಾಡಿದರೆ ಸುಖಪ್ರಸವವಾಗುತ್ತದೆ.

75199775 258835591743975 6232987523572826112 n

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, ಆರೋಗ್ಯ, ಮನೆಮದ್ದು Tagged With: ಅಗ್ನಿಮುಖಿ, ಅಗ್ನಿಶಿಖಾ ಔಷಧಿ ಗುಣಗಳು, ಅಗ್ನಿಶಿಖೆ, ಅಗ್ನಿಶಿಖೆ ಗೆಡ್ಡೆ, ಅಡವಿನಾಭಿ, ಅಪಾಯಕಾರಿ, ಆಯುರ್ವೇದ ಕಂಪನಿಗಳಿಂದ, ಇಂದ್ರಪುಷ್ಠಿ, ಎದೆಹಾಲಿನಲ್ಲಿ ತೇಯ್ದು, ಔಷಧಿ ತಯಾರಿಸಲು ಅಪಾರ ಬೇಡಿಕೆ, ಕಚ್ಚಿದಾಗ ಶುದ್ಧಿಮಾಡಿದ, ಕಣ್ಣು ನೋವಿಗೆ, ಕರ್ನಾಟಕದ ಬಾವುಟವನ್ನು ಹೋಲುವ ಬಣ್ಣ, ಕಾಡುಮೇಡು, ಕಾದಲ್, ಗರ್ಭಗಾತಿನಿ, ಗಿಡವು ವಿಷ, ಗೆಡ್ಡೆಯ ಚೂರ್ಣ, ಗೆಡ್ಡೆಯ ಚೂರ್ಣ ಸೇವಿಸಿ, ಗೌರಿಹೂವು, ಚೇಳು, ಜಿಂಬಾಬ್ವೆ ದೇಶ ರಾಷ್ಟ್ರೀಯ ಫುಷ್ಪ, ಪೂ ಕಾರ್ತಿಕೈ ಕೆಳಂಗು, ಪೊಟ್ಟಿದುಂಪ, ಬೆಟ್ಟಗುಡ್ಡಗಳು, ಬೇಲಿಗಳಲ್ಲಿ ಬೆಳೆಯುವ ಈ ಗಿಡಕ್ಕೆ, ಲಾಂಗಲಾಹ್ವ, ಲಾಂಗೂಲಕಿ, ವಿಷಜಂತುಗಳು, ವೈದ್ಯರ ಸಲಹೆ, ವೈದ್ಯರ ಸಲಹೆ ಅತಿಮುಖ್ಯ., ಹಾವು, ಹೂವಿನ ಪರಾಗಧೂಳ

Explore More:

About KV Parthasarathi Kshatriya

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...