• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಲಾಕ್_ಡೌನ್_ಸಮಯದಲ್ಲೊಂದು ಕ್ರೂರ ಪ್ರಸಂಗ- ಹೀಗೊಂದು ಬಸುರಿ ಕಾಡಾನೆಯ ಕೊಲೆಯ ಸುತ್ತ.

June 3, 2020 by Yogaraj SK Leave a Comment

101408890 1178564422497952 3244709769058975744 n

ಕೇರಳ:- ಕೇರಳದಲ್ಲಿ_ಗರ್ಭಿಣಿ_ಆನೆಯೊಂದು ಊರಿನೊಳಗೆ ಆಹಾರ ಅರಸಿ ಬಂದಾಗ ಅದನ್ನು ಮಾನವೀಯತೆ ಮರೆತು #ಅಮಾನುಷವಾಗಿ_ಕೊಲೆ #ಮಾಡಿರುವ_ಘಟನೆ ವರದಿಯಾಗಿದ್ದು ಈ ಘಟನೆ ಓದಿದವರ ಕರುಳು ಚುರುಕ್ ಎನ್ನದೆ ಇರದು ಅಲ್ಲದೇ ಕಣ್ಣಾಲೆಗಳು ತುಂಬಿ ಬರುತ್ತವೆ.

ಕೇರಳದಲ್ಲಿ ಹಸಿದ ಮತ್ತು ಗರ್ಭಿಣಿ ಆನೆಯೊಂದು ಊರಿನೊಳಗೆ ಆಹಾರ ಅರಸಿ ಬಂದಾಗ ಸ್ಥಳೀಯರು ಪೈನಾಪಲ್_ನಲ್ಲಿ_ದೊಡ್ಡ_ಪಟಾಕಿ_ತುಂಬಿಸಿ ಅದಕ್ಕೆ ತಿನ್ನಲು ಕೊಟ್ಟಿದ್ದಾರೆ. ಪಟಾಕಿಯನ್ನು ತಿಂದ ತಕ್ಷಣ ಭಯಂಕರ_ಸ್ಪೋಟವಾಗಿ ಆನೆಯ ಬಾಯಿ, ನಾಲಿಗೆಗೆ ಗಂಭೀರ ಗಾಯಗಳಾಗಿವೆ‌.

102563049 1178564479164613 8988938509792313344 n

ವಿಪರೀತ ಹಸಿವೆ ಮತ್ತು ಗಾಯದಿಂದ ನರಳುತ್ತ ನೀರು ಹುಡುಕುತ್ತ ಒಂದು ಕೆರೆಗೆ ಇಳಿದು ಅಲ್ಲಿ ನಿಂತಲ್ಲಿಯೇ ಮೃತ ಪಟ್ಟಿದೆ. ಕೇರಳದ ಮಳಪ್ಪುರಂನ ಅರಣ್ಯಾಧಿಕಾರಿಯೊಬ್ಬರು ಕಣ್ಣಾರೆ ಕಂಡ ರಕ್ಕಸ ಜನರ ಈ ಭಯಾನಕ ಕುಕೃತ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಓದುಗರಿಗೆ ಹರಿಬಿಟ್ಟ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

“ಮನುಷ್ಯನ ಕಪಟವನ್ನು ಅರಿಯದ‌ ಮುಗ್ಧ ಬಸುರಿ ಆನೆ ಗಬಗಬನೇ ಪಟಾಕಿಯುಕ್ತ ಪೈನಾಪಲ್ ಹಣ್ಣನ್ನು ತಿಂದಿದೆ. ಅದು ಬಸುರಿ ಇರದಿದ್ದರೆ ಊರಿನೊಳಗೆ ಬರುತ್ತಿರಲಿಲ್ಲವೇನೋ. ಪಾಪ ಇನ್ನು 18, 20 ತಿಂಗಳೊಳಗೆ ಜನ್ಮತಳೆಯುವ ತನ್ನ ಮರಿ ಹಸಿವೆಯಿಂದ ಸಾಯದಿರಲಿ ಅಂತ ಗಾಬರಿಯಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಊರಿನೊಳಗೆ ಬಂದಿದೆ.” ಅಂತ Rapid_Response_Team ನ ಅರಣ್ಯಾಧಿಕಾರಿ ಮೋಹನ್_ಕ್ರಿಷ್ಣನ್ ಅವರು ಫೇಸಬುಕ್ ನಲ್ಲಿ ಬರೆದುಕೊಳ್ಳುತ್ತಾರೆ.

ಪಟಾಕಿಯ ಸ್ಪೋಟ ಎಷ್ಟು ಭಯಾನಕವಾಗಿತ್ತೆಂದರೆ ಅದರ ಹೊಡೆತಕ್ಕೆ ಆನೆಯ ನಾಲಿಗೆ ಮತ್ತು ಬಾಯಿ ಸಂಪೂರ್ಣ ಹರಿದು ಹೋಗಿವೆ. ತೀವ್ರತರದ ಹಸಿವಾಗಿದ್ದರೂ ಏನೂ ತಿನ್ನದ ಸ್ಥಿತಿ. ನೂವು ಮತ್ತು ಹಸಿವೆಯಿಂದ ಬಸುರಿ ಆನೆ ಓಡಿದೆ ಓಡಿದೆ ಓಡಿದೆ ಓಡಿದೆ ತುಂಬಾ ಓಡಿದೆ ಪಾಪ. ಒಂದು ಮನೆಯನ್ನೂ ಧ್ವಂಸಮಾಡಲಿಲ್ಲ. ಯಾರೊಬ್ಬನನ್ನೂ ತುಳಿದು ಕೊಲ್ಲಲಿಲ್ಲ. ಅದು ತುಂಬಾ ದಯಾಳುವಾಗಿತ್ತು ಪಾಪ.

ಹಾಗೆ ಓಡಿದ ಆನೆ ನೀರನ್ನರಸಿ ವೆಳ್ಳಿಯಾರ್ ನದಿಯಲ್ಲಿ ಇಳಿದಿದೆ. ಗಾಯವಾಗಿರುವ ಬಾಯಿ ಮತ್ತು ಸೊಂಡಿಲನ್ನು ನೀರಿನೊಳಗೆ ಬಿಟ್ಟು ತುಸು ಹೊತ್ತು ನಿಂತಿದೆ. ಸ್ವಲ್ಪ ನೂವು ಶಮನವಾಗಲೆಂದು. ಚಿತ್ರದಲ್ಲಿ ಗಮನಿಸಬಹುದು. ಸೊಳ್ಳೆ ಮತ್ತು ಹುಳುಗಳಿಂದ ತಪ್ಪಸಿಕೊಳ್ಳಲೂ ಇರಬಹುದು ಪಾಪ.

101200976 1178564459164615 369733788684517376 n

ಸುರೇಂದ್ರನ್ ಮತ್ತು ನೀಲಕಂಠನ್ ಎಂಬ ಪಳಗಿದ ಆನೆಗಳನ್ನೊಳಗೊಂಡ ತಂಡ ಬಸುರಿ ಆನೆಯನ್ನು ರಕ್ಷಿಸಲು ನದಿಗಿಳಿದಿವೆ. ಹಲವು ತಾಸುಗಳಷ್ಟು ನಡೆದ ರಕ್ಷಣಾಕಾರ್ಯದ ಪ್ರಯತ್ನಗಳು ಫಲನೀಡಲಿಲ್ಲ. ಮೇ 27 ಸಂಜೆ 4 ಗಂಟೆಗೆ ನೀರಿನಲ್ಲಿ ನಿಂತಸ್ಥಳದಲ್ಲಿಯೇ ಅಸುನೀಗಿದೆ.

ಅದು ಗೌರವಸೂಚಕ ವಿದಾಯಕ್ಕೆ ಅರ್ಹವಾಗಿತ್ತು. ತಾನು ಆಡಿ ಬೆಳೆದ ಊರಿನಲ್ಲಿಯೇ ಈಗ ಅದರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಅದರ ಪೋಸ್ಟ್ ಮಾರ್ಟಂ ಮಾಡುವಾಗ ಮತ್ತು ಅಂತ್ಯ ಸಂಸ್ಕಾರ ನೆರವೇರಿಸುವಾಗ ಮೋಹನ್ ಕ್ರಿಷ್ಣನ್ ಅವರ ಮಾಸ್ಕ್ ದೂಡಿಕೊಂಡು ಕಣ್ಣೀರು ಒಸರುತ್ತಿತ್ತೆಂದು ಪೋಸ್ಟ ಮಾರ್ಟಂ ಮಾಡಿದ ವೈದ್ಯರು ಹೇಳುತ್ತಾರೆ.

watermarked 98310537 3064649900244800 2448955442685018112 o
watermarked 101502078 3064650003578123 6462342999132078080 o

ಕೃಪೆ:ಇಂಗ್ಲೀಷ್:NDTV Facebook page
ಕನ್ನಡಕ್ಕೆ:ಮಧುಸೂದನ ಕುಲಕರ್ಣಿ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Karnataka News, Trending Tagged With: Rapid_Response_Team, ಅರಿಯದ‌ ಮುಗ್ಧ, ಆನೆಯ ನಾಲಿಗೆ ಮತ್ತು ಬಾಯಿ ಸಂಪೂರ್ಣ ಹರಿದು, ಆನೆಯ ಬಾಯಿ, ಆಹಾರ ಅರಸಿ ಬಂದಾಗ, ಕಾಡಾನೆಯ ಕೊಲೆಯ ಸುತ್ತ, ಕೇರಳದಲ್ಲಿ ಹಸಿದ, ಗಬಗಬನೇ, ಗರ್ಭಿಣಿ ಆನೆ, ದೊಡ್ಡ_ಪಟಾಕಿ_ತುಂಬಿಸಿ, ಪಟಾಕಿಯುಕ್ತ, ಬಸುರಿ, ಬಸುರಿ ಆನೆ, ಭಯಂಕರ ಸ್ಪೋಟವಾಗಿ, ಭಯಾನಕ ಕುಕೃತ್ಯ, ಮನುಷ್ಯನ ಕಪಟವನ್ನು, ರಕ್ಕಸ ಜನರ, ಲಾಕ್_ಡೌನ್_ಸಮಯದಲ್ಲೊಂದು ಕ್ರೂರ ಪ್ರಸಂಗ, ಸ್ಥಳೀಯರು ಪೈನಾಪಲ್_ನಲ್ಲಿ, ಹೀಗೊಂದು

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...