ಹಳಿಯಾಳ:- ಭಾರತೀಯ ಸೈನಿಕರ ಬಲಿದಾನಕ್ಕೆ ನಾವು ನೀಜವಾಗಿ ಶೃದ್ದಾಂಜಲಿ ಸಲ್ಲಿಸಬೇಕಾದರೇ, ಅವರ ಆತ್ಮಕ್ಕೆ ಚೀರಶಾಂತಿ ದೊರೆಯಬೇಕಾದರೇ ಪ್ರತಿಯೊಬ್ಬ ಭಾರತೀಯ ಪ್ರಜೆ ಚೀನಾದ ಎಲ್ಲ ಬಗೆಯ ಉತ್ಪನ್ನಗಳ ಖರೀದಿಯನ್ನು ನಿಲ್ಲಿಸಬೇಕಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಕರೆ ನೀಡಿದರು.
ಪಟ್ಟಣದ ಶಿವಾಜಿ ವೃತ್ತದಲ್ಲಿ ಬುಧವಾರ ಸಾಯಂಕಾಲ ಭಾರತ-ಚೀನಾ ಗಡಿಯಲ್ಲಿ ಸೈನಿಕರ ಕಾದಾಟದಲ್ಲಿ ವೀರಮರಣವನ್ನಪ್ಪಿದ ಹುತಾತ್ಮ ಸೈನಿಕರಿಗೆ ಬಿಜೆಪಿ ಪಕ್ಷದಿಂದ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸುವ ಸಭೆಯಲ್ಲಿ ಭಾಗವಹಿಸಿ ಕ್ಯಾಂಡಲ್ ದೀಪ ಬೆಳಗಿಸಿ ಶೃಧ್ದಾಂಜಲಿ ಸಲ್ಲಿಸಿ ಮಾತನಾಡಿದರು.
ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವುದು ಮಾತ್ರವಲ್ಲದೇ ಅವರ ಎಲ್ಲ ರೀತಿಯ ಮೊಬೈಲ್, ಕಂಪ್ಯೂಟರ್ ಸಾಫ್ಟವೇರ್, ಅಪ್ಲಿಕೇಶನ್ಗಳನ್ನು ಬಳಸಬಾರದು. ಭಾರತ ದೇಶದಲ್ಲಿನ ಉತ್ಪನ್ನಗಳನ್ನು ಹೆಚ್ಚಾಗಿ ಖರಿದಿಸುವುದರಿಂದ ಭಾರತ ದೇಶ ಆರ್ಥಿಕತೆಯಲ್ಲಿ ಚೇತರಿಕೆ ಕಾಣಲಿದೆ ಅಲ್ಲದೇ ಇಲ್ಲಿಯ ಪ್ರಜೇಗಳು ಆರ್ಥಿಕವಾಗಿ ಮುಂದೆಬರಲು ಸಹಾಯಕವಾಗುತ್ತದೆ ಎಂಬುದನ್ನು ನಾವುಗಳು ಅರಿತು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಹಿರಿಯ ಮುಖಂಡ ಮಂಗೇಶ ದೇಶಪಾಂಡೆ ಅವರು ಮಾತನಾಡಿ ಚೀನಾ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಮೊದಲಿನಿಂದಲೂ ತಮ್ಮ ಕುತಂತ್ರ ಬುದ್ದಿಯನ್ನು ತೋರುತ್ತಿವೆ. ನೇರವಾಗಿ ಯುದ್ದ ಮಾಡುವ ಧೈರ್ಯ ಎರಡು ರಾಷ್ಟ್ರಕ್ಕಿಲ್ಲ ಹೀಗಾಗಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿವೆ. ಆದ್ದರಿಂದ ದೇಶದ ಪ್ರಜೆಗಳು ಚೀನಾಕ್ಕೆ ಆರ್ಥಿಕವಾಗಿ ಹೊಡೆತ ನೀಡಬೇಕು ಅದಕ್ಕಾಗಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದರು.
ಬಿಜೆಪಿ ತಾಲೂಕಾಧ್ಯಕ್ಷ ಗಣಪತಿ ಕರಂಜೆಕರ, ಪ್ರಧಾನ ಕಾರ್ಯದರ್ಶಿ ಅನಿಲ್ ಮುತ್ನಾಳ, ಪುರಸಭೆ ಸದಸ್ಯರಾದ ಸಂಗೀತಾ ಜಾಧವ, ಶಾಂತಾ ಹಿರೇಕರ, ರಾಜೇಶ್ವರಿ ಹಿರೇಮಠ, ರೂಪಾ ಗಿರಿ, ಚಂದ್ರು ಕಮ್ಮಾರ, ಉದಯ ಹೂಲಿ, ಸಂತೋಷ ಘಟಕಾಂಬಳೆ, ಪ್ರಮುಖರಾದ ಶಿವಾಜಿ ನರಸಾನಿ, ವಿಲಾಸ ಯಡವಿ, ಯಲ್ಲಪ್ಪಾ ಹೊನ್ನೊಜಿ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ವಿಲಾಸ ಕಣಗಲಿ ಮೊದಲಾದವರು ಇದ್ದರು.
Leave a Comment