ಬೆಂಗಳೂರು- ಕುಮಟಾ : ಜನರ ಜೀವ ಹಾಗೂ ವಾಹನಗಳ ಮೇಲೆ ಚೆಲ್ಲಾಟವಾಡುತ್ತಿರುವ ಅಯ್ ಆರ್ ಬಿ ಕಂಪನಿ ತಕ್ಷಣ ಸ್ಥಳೀಯ ವಾಹನಗಳಿಗೆ ಒತ್ತಾಯ ಪೂರ್ವಕವಾಗಿ ವಸೂಲಿ ಮಾಡುತ್ತಿರುವ ಸುಂಕ ವನ್ನು ವಾರದಲ್ಲಿ ಹಿಂಪಡೆಯದೆ ಇದ್ದಲ್ಲಿ ಉಗ್ರ ಪ್ರತಿಭಟಣೆ ನಡೆಸಲಾಗುವದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಎಚ್ಚರಿಸಿದ್ದಾರೆ.
ಬೆಂಗಳೂರಲ್ಲಿ ಸೆ.8 ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಈ ವಿಷಯಕ್ಕೇ ಸಂಬಂಧಿಸಿದಂತೆ ಕ. ರ .ವೇ ರಾಜ್ಯಾಧ್ಯಕ್ಸ ನಾರಾಯಣ ಗೌಡ ರ ಬಳಿ ಚರ್ಚಿಸಲಾಗಿದೆ. ಅವರು ಕೂಡ ನಮ್ಮ ಅಹವಾಲುಗಳಿಗೆ ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಹಲವಾರು ಬಾರಿ ಆಯ್ ಆರ್ ಬಿ ಕಂಪನಿಗೆ ಎಚ್ಚರಿಕೆ ನೀಡಿದರೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಪ್ರತಿ ದಿನ ಹೊಳೆಗದ್ದೆ ಟೋಲ್ ನಾಕಾದಲ್ಲಿ ಸ್ಥಳೀಯ ವಾಹನ ಮಾಲಕರು, ಚಾಲಕರು ಹಾಗೂ ಸುಂಕ ವಸೂಲಾತಿ ಕೇಂದ್ರದ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ಪ್ರಕೋಪಕ್ಕೇ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಆಯ್ ಆರ್ ಬಿ ಕಂಪನಿ ಚತುಷ್ಪತ ಹೆದ್ದಾರಿಯ ಕಾಮಗಾರಿಯನ್ನು ಅರೆಬರೆ ಮಾಡಿ ಕ್ಯೆತೊಳೆದುಕೊಂಡಿದೆ ಹೀಗಾಗಿ ಪ್ರತಿ ದಿನ ಅಪಘಾತಗಳು ಹೆಚ್ಚಾಗುತ್ತಿವೆ. ಮೊದಲು ಸಂಪೂರ್ಣ ಕಾಮಗಾರಿ ನಿರ್ವಹಿಸಿ ಸುಂಕ ವಸೂಲಾತಿಗೆ ಮುಂದಾಗಬೇಕು. ಹೊನ್ನಾವರ ಮತ್ತು ಕುಮಟಾ ಅವಳಿ ನಗರಗಳು ಪ್ರತಿ ದಿನ ಒಂದಿಲ್ಲೊಂದು ಕೆಲಸಗಳಿಗೆ ಹಿಂದೆ ಮುಂದೆ ಓಡಾಡುವ ಅನಿವಾರ್ಯತೆ ಇದೆ ಹೀಗಾಗಿ ತಕ್ಷಣ ಸ್ಥಳೀಯ ವಾಹನಗಳಿಗೆ ವಸೂಲಿಮಾಡಲಾಗುತ್ತಿರುವ ಸುಂಕವನ್ನು ಒಂದು ವಾರದೊಳಗೆ ರದ್ದು ಮಾಡಬೇಕು ಇಲ್ಲವಾದಲ್ಲಿ ಕುಮಟಾ -ಹೊನ್ನಾವರ ಭಾಗದ ವಾಹನ ಸವಾರರರು.ಮಾಲಕರು, ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರೊಂದಿಗೆ ಪಕ್ಸಾತಿತವಾಗಿ ಸೇರಿ ಕ. ರ. ವೇ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಕರವೇ ಯುವ ಘಟಕದ ಅಧ್ಯಕ್ಷ ಧರ್ಮರಾಜ ಗೌಡ ಹಾಗೂ ಇನ್ನಿತರ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.
Leave a Comment