ಹೊನ್ನಾವರ – ಕ್ರಿಯಾಶೀಲ ಬರಹಗಾರ, ಪತ್ರಕರ್ತ, ಕರಾವಳಿ ಮುಂಜಾವು ದಿನಪತ್ರಿಕೆಯ ಸಂಪಾದಕ ಟಿ.ಬಿ.ಹರಿಕಾಂತ್ ಅವರ ತಾಯಿ 84 ವಯಸ್ಸಿನ ಹಿರಿಯ ಜೀವ ಗೌರಿ ಹರಿಕಾಂತ್ ರವಿವಾರ ಮಂಕಿಯ ತಮ್ಮ ಸ್ವ ಗೃಹದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಕಡುಬಡತನದಲ್ಲಿಯೂ ತಮ್ಮ 6 ಮಂದಿ ಮಕ್ಕಳನ್ನು ಸುಶಿಕ್ಷಿತ, ಸುಸಂಸ್ಕøತರನ್ನಾಗಿ ಬೆಳೆಸುವಲ್ಲಿ ಅಪಾರ ಶ್ರಮಪಟ್ಟಿದ್ದರು. ಆಗಿನ್ನೂ ಆಸ್ಪತ್ರೆಗಳು ಮುಂಚೂಣಿಗೆ ಬರದ ಕಾಲದಲ್ಲಿ ಸೂಲಗಿತ್ತಿಯಾಗಿ ನೂರಾರು ಗರ್ಭಿಣಿ ಮಹಿಳೆಯರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ ಹಿರಿಮೆ ಇವರದಾಗಿದೆ. ಮಂಕಿ ಭಾಗದಲ್ಲಿ ನಡೆಯುವ ಬಹುತೇಕ ಎಲ್ಲಾ ಶುಭ ಅಶುಭ ಕಾರ್ಯಗಳಲ್ಲಿ ಪಾಲ್ಗೊಂಡು ಮುಂದೆನಿಂತು ಮಾರ್ಗದರ್ಶನ ಮಾಡುತ್ತಿದ್ದರೆಂದು ಊರವರು, ಹತ್ತಿರದಿಂದ ಬಲ್ಲವರು ಸ್ಮರಿಸಿದ್ದಾರೆ.
ಮೃತರು ಪುತ್ರಿಯರಾದ ಲಕ್ಷ್ಮೀ, ಮಾಸ್ತಿ, ಶುಕ್ರಿ ಪುತ್ರರಾದ ತಿಮ್ಮಪ್ಪ, ಗಣಪತಿ, ಬಾಬು ಹಾಗೂ ಕುಟುಂಬಸ್ಥರನ್ನು ಅಪಾರ ಬಂಧು ಬಳಗ ಹಿತೈಷಿಗಳನ್ನು ಅಗಲಿದ್ದಾರೆ.
Leave a Comment