ಹಳಿಯಾಳ:- ತಾಲೂಕಿನ ದುಸಗಿ ಗ್ರಾಮದಿಂದ ಅಳ್ನಾವರ ಎನ್ಇಎಸ್ ಹೈಸ್ಕೂಲ್ ಕೂಡುವ ರಸ್ತೆ ನಿರ್ಮಾಣ ಕಾಮಗಾರಿಗೆ ಉಂಟಾಗಿರುವ ತಕರಾರನ್ನು ಬಗೆಹರಿಸಿ ಗ್ರಾಮಸ್ಥರಿಗೆ ರಸ್ತೆ ಕಾಮಗಾರಿಗೆ ಅನುಕೂಲ ಮಾಡಿಕೊಡಬೇಕೆಂದು ದುಸಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ಅವರಿಗೆ ಹಾಗೂ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ದುಸಗಿ ಗ್ರಾಮದ ರಹವಾಸಿ ಕೊಡಳ್ಳಿಯವರ ಬ್ಲಾಕ್ ನಂಬರ 153 ರಿಂದ ಅಳ್ನಾವರ ಎನ್ಇಎಸ್ ಹೈಸ್ಕೂಲ್ ವರೆಗೆ ಕೂಡುವ ರಸ್ತೆ ಸುಮಾರು 2 ಕೀಮಿ ಇದ್ದು ಇದೇ ರಸ್ತೆ ಗ್ರಾಮಸ್ಥರಿಗೆ ತೀರಾ ಅನುಕೂಲಕರವಾಗಿದೆ. ಈ ಹಿಂದೆ ಇದಕ್ಕೆ ರಸ್ತೆ ಮಂಜೂರಿ ಆಗಿತ್ತು ಆದರೇ ಅಂದು ಇದಕ್ಕೆ ತಾಗಿರುವ ಅಳ್ನಾವರದ ಶಹಜಾನ ಖಾದರಸಾಬ ಬೀಡಿ ಎನ್ನುವವರು ತಕರಾರು ಮಾಡಿ ರಸ್ತೆ ಕಾಮಗಾರಿ ನಿಲ್ಲಿಸಿದ್ದರು. ಇಂದು ಮತ್ತೇ ಇದೇ ರಸ್ತೆ ಮಂಜೂರಾಗಿದೆ ಆದರೇ ಮತ್ತೇ ಅದೇ ಶಹಜಾನ ಕಾಮಗಾರಿಗೆ ತಕರಾರು ಸಲ್ಲಿಸಿ ಕೆಲಸ ಸ್ಥಗೀತಗೊಳಿಸಿದ್ದಾನೆಂದು ಆಪಾದಿಸಲಾಗಿದೆ.
ಆದ್ದರಿಂದ ತಾಲೂಕಾಡಳಿತ ಮತ್ತು ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಿ ಈ ಬಗ್ಗೆ ಕುಲಂಕುಷ ಪರಿಶೀಲನೆ ಮಾಡಿ ಬುಧವಾರದ ಒಳಗೆ ಗ್ರಾಮಸ್ಥರ ಸಮಸ್ಯೆ ಬಗೆಹರಿಸಿ ಜನರಿಗೆ ಓಡಾಡಲು ರಸ್ತೆ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ವಿನಂತಿಸುತ್ತೇವೆ ಒಂದಾನುವೇಳೆ ಸಮಸ್ಯೆ ಬಗೆಹರಿಸದೆ ಇದ್ದರೇ ಗ್ರಾಮಸ್ಥರಿಂದ ಊಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ. ಮನವಿ ಸಲ್ಲಿಸುವಾಗ ಗ್ರಾಮದ 50 ಕ್ಕೂ ಅಧಿಕ ಜನರು ಆಗಮಿಸಿದ್ದರು.
Leave a Comment