ಹೊನ್ನಾವರ –ಮಂಗಳವಾರ ರಾತ್ರಿ ಮಂಕಿ ರೇಲ್ವೇ ಸ್ಟೇಷನ್ಬಳಿ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು ತನಿಖೆಯಲ್ಲಿ ಮೃತ ವ್ಯಕ್ತಿ ದೆಹಲಿ ಮೂಲದ ಸಂತೋಷಕುಮಾರ್.ಎಂ ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ 10 -50 ರ ಸುಮಾರಿಗೆ ತ್ರಿವೇಂದ್ರಮ್ದಿಂದ ನಿಜಾಮುದ್ದಿನ್ಗೆ ಹೋಗುವ ಪ್ರಯಾಣಿಕರ ರೈಲು ಕ್ರಾಸಿಂಗ್ ಸಲುವಾಗಿ ಮಂಕಿ ರೇಲ್ವೇ ಸ್ಟೇಷನ್ ನಿಂತಿರುವಾಗ 11 -35 ರ ಸುಮಾರಿಗೆ ದೆಹಲಿಯಿಂದ ತ್ರಿವೇಂದ್ರಮ್ಗೆ ಹೋಗುವ ಪ್ರಯಾಣಿಕರ ರೈಲು ಮಂಕಿ ಹಾದುಹೋಗಿದೆ. ದೆಹಲಿಯಿಂದ ತ್ರಿವೆಂದ್ರಮ್ಗೆ ಹೋಗುವ ರೈಲು ಹಾದುಹೋದ ನಂತರ ರೇಲ್ವೇ ಹಳಿಯ ಪಕ್ಕದಲ್ಲಿ ಅಂದಾಜು 40 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈತ ದೆಹಲಿಯಿಂದ ನಿಜಾಮುದ್ದಿನ್ಗೆ ಹೋಗುವ ರೈಲಿನಿಂದ ಆಯತಪ್ಪಿ ಬಿದ್ದು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment