• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದ ಹಿರಿಯ ಆಧ್ಯಾತ್ಮಿಕ ಚಿಂತಕ, ಪ್ರಚನಕಾರ ಎಮ್‍ಎನ್ ತಳವಾರ ಅಜ್ಜ ವಿಧಿವಶ ತಾಲೂಕಿನಲ್ಲಿ ಆಧ್ಯಾತ್ಮದ ಜ್ಞಾನ ಧಿವಿಗೆಯನ್ನು ಬೆಳಗಿಸಿದವರು, ಜಾತಿ, ಧರ್ಮ ಮೀರಿ ಬೆಳೆದಿದ್ದ ವ್ಯಕ್ತಿ ಇನ್ನಿಲ್ಲ.

September 28, 2020 by Yogaraj SK Leave a Comment

ಹಳಿಯಾಳ:- ಹಳಿಯಾಳ ತಾಲೂಕಿನ ಹಿರಿಯ ಆಧ್ಯಾತ್ಮಿಕ ಚಿಂತಕರು, ಪ್ರವಚನಕಾರರು, ಉತ್ತರ ಕನ್ನಡ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್‍ನ ಗೌರವಾಧ್ಯಕ್ಷರಾಗಿದ್ದ ಎಂ.ಎನ್.ತಳವಾರ(82) ಅವರು ಅನಾರೋಗ್ಯದಿಂದ ಭಾನುವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

watermarked 27 hly 2 a
watermarked 27 hly2


ಪಟ್ಟಣದ ಆನೆಗುಂದಿ ಬಡಾವಣೆ ನಿವಾಸಿಯಾಗಿದ್ದ ಅವರು ಹಳಿಯಾಳದಲ್ಲಿ “ತಳವಾರ ಅಜ್ಜ” ಎಂದೇ ಖ್ಯಾತರಾಗಿದ್ದರು. ನಿವೃತ್ತ ಇಂಜೀನಿಯರ್ ಆಗಿದ್ದ ಅವರು ಹಳಿಯಾಳ ತಾಲೂಕಿನಲ್ಲಿ ಆಧ್ಯಾತ್ಮದ ಜ್ಞಾನ ಧಿವಿಗೆಯನ್ನು ಪಸರಿಸಿದವರು. ಯಾವುದೇ ಫಲಾಫೆಕ್ಷೆಗಳಿಲ್ಲದೇ ತಮ್ಮ 82ರ ಇಳಿವಯಸ್ಸಿನಲ್ಲಿಯೂ ಯುವಕರನ್ನು ನಾಚಿಸುವಂತೆ ಸಮಾಜ ಸೇವೆಯಲ್ಲಿ ಮುಂಚುಣಿಯಲ್ಲಿರುತ್ತಿದ್ದ ಅವರು ಪುರಾಣ, ಪ್ರವಚನ, ಉಪನ್ಯಾಸಗಳಲ್ಲಿ ಜನರಿಗೆ ಮನಮುಟ್ಟುವಂತಹ ವಾಕ್‍ಚಾತುರ್ಯ ಅವರದ್ದಾಗಿತ್ತು. ಎಲ್ಲ ಧರ್ಮಗಳ ಆಧ್ಯಾತ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ, ಸರ್ಕಾರಿ ಜಯಂತಿಗಳಲ್ಲಿ ತಳವಾರಜ್ಜ ಖಾಯಂ ಆಹ್ವಾನಿತರು.
ಮಹರ್ಷಿ ವಾಲ್ಮೀಕಿಯಂತೆ ಬಿಳಿ ಕೂದಲು, ಬಿಳಿ ಉದ್ದ ಗಡ್ಡ ಬಿಟ್ಟಿದ್ದ ಅವರು ಹಣೆಯ ಮೇಲೆ ವಿಭೂತಿ ಧರಿಸಿ ಶ್ವೇತ ಬಣ್ಣದ ಜುಬ್ಬಾ ಮತ್ತು ಪಂಚೆ ಧರಿಸಿ ಸನ್ಯಾಸಿಗಳಂತೆ ಕಾಣುತ್ತಿದ್ದರು ಅವರ ಆ ವೇಷಭೂಷಣ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು. ಅವರು ಹೆಂಡತಿ ಹಾಗೂ ಇಬ್ಬರು ಮಕ್ಕಳು, ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಉಪ್ಪಿನ ಬೇಟಗೇರಿಯಲ್ಲಿ ನೆರವೆರಿಸಲಾಯಿತು.
ಯುವಕರಿಗೆ ಆಧ್ಯಾತ್ಮದ ಹಾಗೂ ಶ್ರೇಷ್ಠ ದಾರ್ಶನಿಕರ ಚಿಂತನೆಗಳನ್ನು ಹೇಳುವುದರ ಮೂಲಕ ಸ್ಪೂರ್ತಿಯ ಸೆಲೆಯಾಗಿದ್ದ, ಸದಾ ಚಟುವಟಿಕೆಯಿಂದ ಎಲ್ಲರಿಗೂ ಮಾದರಿಯಾಗಿ ಪ್ರೇರಕ ಶಕ್ತಿಯಾಗಿ ಇರುತ್ತಿದ್ದ ಎಮ್ ಎನ್ ತಳವಾರ ಅವರನ್ನು ಕಳೆದುಕೊಂಡಿದ್ದು ತುಂಬಲಾರದ ನಷ್ಟವಾಗಿದೆ ಎಂದು- ಶಾಸಕ ಆರ್ ವಿ ದೇಶಪಾಂಡೆ.

 ಗುರುಕರುಣೆ ಪಡೆದು ಹರನಾಮ ಪಿಡಿದು ಸಮಾಜವನ್ನೇ ಮಂದಿರ ಮಾಡಿ ಅಸಂಖ್ಯಾತ ಬಳಗ ಗಳಿಸಿ ಆಧ್ಯಾತ್ಮದ ಮಳೆಗರೆದು ಬಾರದ ಲೋಕಕ್ಕೆ ಪಯಣ ಬೆಳೆಸಿದ ಆಧ್ಯಾತ್ಮಿಕ ಚಿಂತಕರಾದ ಎಮ್.ಎನ್ ತಳವಾರ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಸದ್ಗತಿ ಪ್ರಾಪ್ತಿಯಾಗಲಿ ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ- ಮಾಜಿ ಶಾಸಕ ಸುನೀಲ್ ಹೆಗಡೆ.
 ಅತ್ಯಂತ ಸರಳ ಸ್ವಭಾವದ, ಸಜ್ಜನ ವ್ಯಕ್ತಿತ್ವದ ಆಧ್ಯಾತ್ಮಿಕ ಚಿಂತನೆಯ ಮೂಲಕ ಹಳಿಯಾಳದಲ್ಲಿ ಮನೆ ಮಾತಾಗಿದ್ದ ಹಿರಿಯಜ್ಜನಂತೆ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದ ಎಮ್.ಎನ್.ತಳವಾರ ಅವರನ್ನು ಕಳೆದುಕೊಂಡು ಹಳಿಯಾಳ ಬಡವಾಗಿದೆ ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ- ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ.   
 ಸಾಧಕರಿಗೆ, ಸನ್ಯಾಸಿಗಳಿಗೆ ಸದಾಕಾಲ ಮಾರ್ಗದರ್ಶಕರು, ಆಶ್ರಯದಾತರಾಗಿದ್ದ ಎಮ್.ಎನ್.ತಳವಾರ ಅವರು ಜಾತಿ, ಮತ, ಪಂಥ, ಧರ್ಮ ಮೀರಿ ಬೆಳೆದ ಹಿರಿಯ ಚೇತನರಾಗಿದ್ದರು. ಅವರ ಅಗಲಿಕೆ ಹಳಿಯಾಳ ತಾಲೂಕಿನ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಮೂಲ್ಯ ರತ್ನವೊಂದನ್ನು ಕಳೆದುಕೊಂಡಂತಾಗಿದೆ - ಬೆಂಗಳೂರು ಗೋಸಾಯಿ ಮಹಾಸಂಸ್ಥಾನ ಮಠದ ಮರಾಠಾ ಜಗದ್ಗುರು, ಗಾನಯೋಗಿ ಮಂಜುನಾಥ ಮಹಾರಾಜ.
 ಗಣ್ಯರಿಂದ ಸಂತಾಪ:- ಮಾಜಿ ವಿಪ ಸದಸ್ಯ ವಿಡಿ ಹೆಗಡೆ, ಕುಮಾರ ವಿರುಪಾಕ್ಷೇಶ್ವರ ಮಹಾಸ್ವಾಮಿಜಿಗಳು, ಶಿರಸಿ ಬಣ್ಣದ ಮಠದ ಶಿವಲಿಂಗ ಸ್ವಾಮಿಜಿಗಳು, ಇಂಗಳೇಶ್ವರ ಮಠದ ಚೆನ್ನಬಸವ ಮಹಾಸ್ವಾಮಿಜಿಗಳು, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವದೇವ ದೇಸಾಯಿಸ್ವಾಮಿ, ಬಸವಕೇಂದ್ರ ಅಧ್ಯಕ್ಷ ಚಂದ್ರಕಾಂತ ಅಂಗಡಿ, ಸುಮಂಗಲಾ ಅಂಗಡಿ, ಕರ್ನಾಟಕ ರಕ್ಷಣಾ ವೇದಿಕೆ ಬಸವರಾಜ ಬೆಂಡಿಗೆರಿಮಠ, ಜಯ ಕರ್ನಾಟಕ ಸಂಘಟನೆ ವಿಲಾಸ ಕಣಗಲಿ, ಹಳಿಯಾಳ ನಾಗರಿಕ ವೇದಿಕೆ ಮಂಜುನಾಥ ಮಾದರ, ಜೀಜಾಮಾತಾ ಸಂಘಟನೆ, ಹಿರಿಯ ನಾಗರಿಕರ ವೇದಿಕೆ, ವ್ಯಾಪಾರಸ್ಥರ ಸಂಘಟನೆ, ಪುರಸಭೆ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: a guru, Always a guide to the monks, an eloquent rhetoric, an honorable rhetoric, ಅನಾರೋಗ್ಯದಿಂದ ಭಾನುವಾರ, ಆಧ್ಯಾತ್ಮಿಕ ಚಿಂತಕರು, ಉತ್ತರ ಕನ್ನಡ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್‍ನ ಗೌರವಾಧ್ಯಕ್ಷ, ಗುರುಕರುಣೆ ಪಡೆದು ಹರನಾಮ ಪಿಡಿದು ಸಮಾಜ, ಪ್ರವಚನಕಾರರು, ಮನಮುಟ್ಟುವಂತಹ ವಾಕ್‍ಚಾತುರ್ಯ, ಸನ್ಯಾಸಿಗಳಿಗೆ ಸದಾಕಾಲ ಮಾರ್ಗದರ್ಶಕ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...