ಹೊನ್ನಾವರ ;ತಾಲೂಕಿನ ಮಂಕಿ ಗ್ರಾಮದ ದೇವರಗದ್ದೆಯ ಸೀತಾರಾಮ ನಾರಾಯಣ ನಾಯ್ಕ ಇತನಿಗೆ ಸೇರಿದ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಕಳ್ಳಭಟ್ಟಿ ಸರಾಯಿಯನ್ನು ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇದ್ದ ೧೦೦ ಮಿಲಿಯಾ ೩೦ ಕಳ್ಳಭಟ್ಟಿ ಸರಾಯಿಯ ಸ್ಯಾಚೇಟ್ಗಳು ಒಟ್ಟೂ ೩ ಲೀ. ಪತ್ತೆ ಮಾಡಿ ಪ್ರಕರಣ ದಾಖಲಿಸಿದ್ದಾರೆ
ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಅಬಕಾರಿ ಉಪ ಅಧೀಕ್ಷಕರಾದ ದಾಮೋದರ್ ನಾಯ್ಕ, ಅಬಕಾರಿ ಉಪ ನಿರೀಕ್ಷಕರಾದ ಶ್ರೀಧರ್ ಮಡಿವಾಳ, ಹೊನ್ನಾವರ ವಲಯ ಕಚೇರಿಯ ಅಬಕಾರಿ ರಕ್ಷಕರಾದ ಮುತ್ತೇಪ್ಪ ಬುಗಡಿಕಟ್ಟಿ, ಹಾಲಿಸಿದ್ದಪ್ಪ ಕುರಿಹುಲಿ ಹಾಗೂ ರಮೇಶ್ ರಾಠೋಡ್, ಹಾಗೂ ವಾಹನ ಚಾಲಕರಾದ ಸಯ್ಯದ್ ಹಮಿದ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment