ಹೊನ್ನಾವರ; ಮಂಕಿ ಕಂದಾಯ ಗ್ರಾಮಕ್ಕೊಳ್ಳಪಡುವ ನಾಲ್ಕು ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೆಲ್ದರ್ಜೆಗೇರಿಸುವಂತೆ ಹೊನ್ನಾವರ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಬುಧವಾರ ಸಾರ್ವಜನಿಕರಿಂದ ಮನವಿ ಸಲ್ಲಿಸಲಾಯಿತು.
ಕಳೆದ ಹಲವು ವರ್ಷಗಳ ಹಿಂದೆ ಅತಿ ದೊಡ್ಡ ಪಂಚಾಯತ ಎಂದು ಹೆಗ್ಗಳಿಕೆ ಹೊಂದಿದ್ದ ಮಂಕಿ ಗ್ರಾಮದಲ್ಲಿ ಇದೀಗ ಮಂಕಿ ಗ್ರಾಮದಲ್ಲಿ ಇದೀಗ ಹಳೇಮಠ, ಅನಂತವಾಡಿ,ಚಿತ್ತಾರ, ಗುಳದಕೇರಿ ಪಂಚಾಯತಿಆಗಿ ವಿಂಗಡನೆಯಾಗಿದೆ. ೨೦೧೧ರ ಜನಗಣತಿಯ ಪ್ರಕಾರ ೨೨೭೩೬ ಜನಸಂಖ್ಯೆ ಹೊಂದಿದೆ. ೨೦೧೩ರಲ್ಲೆ ಪಟ್ಟಣ ಪಂಚಾಯತ ಮೆಲ್ದರ್ಜೆಗೇರಿಸುವ ಒತ್ತಡ ಕೇಳಿಬಂದಿದ್ದು, ಇದುವರೆಗೂ ಪಟ್ಟಣ ಪಂಚಾಯತಿ ಸ್ಥಾನ ದೊರಕಲಿಲ್ಲ. ಈ ಬಾರಿ ಮತ್ತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೂಡಲೇ ಅನುಮೊದನೆ ನೀಡಬೇಕು. ಅಲ್ಲಿಯವರೆಗೆ ಮಂಕಿ ಕಂದಾಯ ಗ್ರಾಮದ ಪಂಚಾಯತ ಚುನಾವಣೆ ತಡೆಹಿಡಿಯಬೇಕು. ಅಭಿವೃದ್ದಿ ಮತ್ತು ಆಡಳಿತದ ದೃಷ್ಟಿಯಿಂದ ಪಟ್ಟಣ ಪಂಚಾಯತಿಯಾಗಿ ಕೂಡಲೇ ಮಾರ್ಪಡಿಸುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ಸುಬ್ರಾಯ ನಾಯ್ಕ, ಮಂಗಲದಾಸ ನಾಯ್ಕ, ಆನಂದ ನಾಯ್ಕ, ಅಣಪ್ಪ ನಾಯ್ಕ, ಸುರೇಶ ಹರಿಕಂತ್ರ, ವಿಜು ಕಾಮತ್, ಹನುಮಂತ ನಾಯ್ಕ, ಸಿ.ಎಸ್.ನಾಯ್ಕ, ರಘುವೀರ ಪ್ರಭು, ವಿನಾಯಕ ನಾಯ್ಕ, ರಾಘವ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Leave a Comment