ಹೊನ್ನಾವರ; ಒಕ್ಕಲಿಗರ ಸಂಘದ ವತಿಯಿಂದ ಒಕ್ಕಲಿಗ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ೪ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಮುದಾಯ ಭವನಕ್ಕೆ ನೆರವು ನೀಡಿದ ಅಭಿನಂದನೆ ಕಾರ್ಯಕ್ರಮ ಒಕ್ಕಲಿಗ ಸಮುದಾಯ ಭವನದಲ್ಲಿ ಶುಕ್ರವಾರ ಜರುಗಿತು.
ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ್ದ ಅದಿಚುಂಚನಗಿರಿ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ ಕೊರೋನಾ ಸಂಕಟದ ಸಂಕ್ರಮಣದಲ್ಲಿ ನಾವಿದ್ದು ಇದನ್ನು ಯಶಶ್ವಸಿಯಾಗಿ ಹಿಮ್ಮೆಟ್ಟಿಸಬೇಕಿದೆ. ಇಂದು ನಾವು ಸ್ಪರ್ಧಾತ್ಮಕ ಯುಗದಲ್ಲಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಿದೆ. ಶ್ರೀಮಠವು ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿದ್ದು, ಹಲವು ಪ್ರತಿಭಾವಂತ ಪ್ರತಿವರ್ಷ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಪರಿಚಯಿಸುತ್ತಿದೆ. ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ರಂಗದವರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿರುವುದು ಕೇವಲ ಪ್ರತಿಭೆ ಗುರುತಿಸುವದಕ್ಕಷ್ಟೆ ಅಲ್ಲದೇ ಮುಂದೆ ಹಲವು ಪ್ರತಿಭೆಗಳಿಗೆ ಪ್ರೇರಣೆಯಾಗಲಿ ಎನ್ನುವ ಸದುದ್ದೇಶ ಒಳಗೊಂಡಿದೆ. ಜೊತೆಜೊತೆಗೆ ಭವ್ಯ ಸಮುದಾಯಭವನ ನಿರ್ಮಾಣ ಎಲ್ಲಾ ಸಮುದಾಯದವರಿಗೂ ಒಗ್ಗೂಡುವಿಕೆಗೆ ಸಹಕಾರಿಯಾಗಿದೆ. ಯುವಕರು ಎಚ್ಚೆತ್ತುಕೊಂಡು ಒಗ್ಗೂಡಿ ಕಾರ್ಯ ಕೈಗೊಂಡರೆ ಯಶಶ್ಸು ಸಾಧ್ಯ ಎನ್ನುವುದಕ್ಕೆ ಸಮುದಾಯ ಭವನ ಸಾಕ್ಷಿಯಾಗಿದ್ದು ಜಿಲ್ಲೆಯಲ್ಲಿ ಇನ್ನೊಂದು ಸಮಾಜದ ಭವನ ಕೇಲವೇ ದಿನದಲ್ಲಿ ಉದ್ಗಾಟನೆಗೊಳ್ಳಲಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಶೇ ೯೦ ಮತ್ತು ಪಿ.ಯು.ಸಿ. ದ್ವಿತೀಯ ವರ್ಷದಲ್ಲಿ ಶೇ ೮೫ ಮತ್ತು ಪದವಿಯಲ್ಲಿ ಶೇ ೮೫ ಹೆಚ್ಚಿಗೆ ಅಂಕ ಪಡೆದ ವಿಧ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ, ಇನ್ನಿತರ ಸ್ಫರ್ಧೆಗಳಿಗೆ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿದ ತಾಲೂಕಿನ ಒಕ್ಕಲಿಗ ಸಮಾಜದ ವಿಧ್ಯಾರ್ಥಿಗಳಿಗೆ ಗೌರವ ಪುರಸ್ಕಾರ ನೀಡಿ ಸನ್ಮಾಸಿ ಗೌರವಿಸಲಾಯಿತು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಂ.ಟಿ.ಗೌಡ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಒಕ್ಕಲಿಗರ ಸಂಘದ ತಾಲೂಕ ಅಧ್ಯಕ್ಷ ಟಿ.ಜೆ.ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಒಕ್ಕಲಿಗ ವಾಯ್ಸ ಪತ್ರಿಕೆ ಸಂಪಾದಕರಾದ ಎಸ್.ನಾಗಭೂಷಣ, ಎ.ಸಿ.ಎಫ್ ಕೆ.ಟಿ.ಬೊರಯ್ಯ, ಮತ್ತು ಸುದರ್ಶನ, ಪುರಸಭಾ ಮುಖ್ಯಾಧಿಕಾರಿ ದೇವರಾಜು, ಎಚ್.ಎನ್.ರಾಜೇಶ, ಕೆ. ರವಿಕುಮಾರ್, ಭಾಸ್ಕರ ಪಟಗಾರ, ಮೂರುರು ವೆಂಕಟಪ್ಪ ಉಪಸ್ಥಿತರಿದ್ದರು.
Leave a Comment