ಕಾರವಾರ: ನವರಾತ್ರಿ ಉತ್ಸವದ ನಿಮಿತ್ತ ಏಳನೇ ದಿನದಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ಅವರು ಕಾರವಾರದ ನಂದನಗದ್ದಾದಲ್ಲಿರುವ ಶ್ರೀ ಸಂತೋಷಿ ಮಾತಾ ಹಾಗೂ ದೇವತಿ ಶಿಟ್ಟಾದ ಶ್ರೀ ದೇವತಿ ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.
ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೋವಿಡ್-19 ಸೋಂಕು ನಿವಾರಣೆಯಾಗಿ ಜನರ ಜೀವನ ಸುಧಾರಣೆಯಾಗಲಿ, ರಾಜ್ಯದಲ್ಲಿ ಉಂಟಾಗಿರುವ ನೆರೆ ಪ್ರಮಾಣ ಕಡಿಮೆಯಾಗಿ ಜನರು ಕಷ್ಟಗಳಿಂದ ಹೊರಬರಲಿ. ಅಲ್ಲದೇ, ಎಲ್ಲೆಡೆ ಸುಖ, ಶಾಂತಿ, ನೆಮ್ಮದಿ, ಎಲ್ಲರಿಗೂ ಉತ್ತಮ ಆರೋಗ್ಯ ನೀಡಲಿ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹಾಕಿಕೊಂಡ ಯೋಜನೆಗಳೆಲ್ಲ ಸಾಕಾರವಾಗಲಿ ಎಂದು ಪ್ರಾರ್ಥಿಸಿದರು.
Leave a Comment