ಹೊನ್ನಾವರ – ಬೆಂಬಿಡದೇ ಕಾಡುತ್ತಿರುವ ಕೊರೊನಾ ಸೋಂಕನ್ನು ಪತ್ತೆ ಮಾಡುವ ಪ್ರಯೋಗಗಳು ಭರದಿಂದ ಸಾಗಿರುವಾಗಲೇ ಸೋಂಕಿನ ಲಕ್ಷಣಗಳಲ್ಲೊಂದಾದ ದೇಹದ ಉಷ್ಠಾಶವನ್ನು ಕುಳಿತಲ್ಲಿಯೇ ಪತ್ತೆಮಾಡುವ ತಂತ್ರಾಂಶವನ್ನು ಜಿಲ್ಲೆಯ ಶಿರಸಿಯ ಅಕ್ಷತಾ ಕರಿ, ಸಿದ್ದಾಪುರ ತಾಲೂಕಿನ ದೊಡ್ಮನೆಯ ನಾಗರಾಜ ನಾರಾಯಣ ಭಟ್ ಹಾಗೂ ಹೊನ್ನಾವರದ ಪ್ರಥ್ವಿ ಪಾಲೇಕರ್ ಇವರುಗಳು ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಕೊಕೊಸ್ಲ್ಯಾಬ್ ಇನೊವೆಟಿವ್ ಸೊಲ್ಯುಸನ್ ಕಂಪನಿಯ ಮೂಲಕ ಕೊರೊನಾದ ಮುಖ್ಯ ಲಕ್ಷಣವಾದ ದೇಹದ ತಾಪಮಾನವನ್ನು ಕುಳಿತಲ್ಲಿಯೇ ಪತ್ತೆ ಹಚ್ಚುವ ಕೃತಕ ತನಿಖೆ ಆಧಾರಿತ ತಂತ್ರಾಂಶ ಫಿಕ್ಸ್ ಯುಟ್ ಮಾಡೆಲ್ ಅಭಿವೃದ್ಧಿ ಪಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅಭಿವೃದ್ಧಿ ಪಡಿಸಿದ ಸಾಪ್ಟ್ವೇರ್ನ್ನು ರವಿವಾರ ದಸರಾ ಪ್ರಯುಕ್ತ ಪಟ್ಟಣದ ಪ್ರಸಿದ್ಧ ಶ್ರೀ ದಂಡಿನದುರ್ಗಾ ದೇವಾಲಯದಲ್ಲಿ ಡೆಮೋ ಮಾಡಿದರು.
ಈ ಕುರಿತು ಪಿಕ್ಸ್ ಯುಟ್ ಮಾಡೆಲ್ ನ ಮುಖ್ಯಾಧಿಕಾರಿ ನಾಗರಾಜ ಭಟ್ ಮಾತನಾಡಿ ಕೋರೋನಾ ಜನರನ್ನು ಸಾವಿನ ಕೂಪಕ್ಕೆ ತಳ್ಳುತ್ತಿದ್ದರೂ ಜನರು ಇದರ ಪರಿವೆಯಿಲ್ಲದಂತೆ ತಿರುಗಾಡುತ್ತಿದ್ದಾರೆ. ಮಾಸ್ಕ್ ಕೂಡಾ ಧರಿಸದೆ ಸಾರ್ವಜನಿಕ ಸ್ಥಳ, ದೇವಾಲಯಗಳಲ್ಲಿ ಬಂದು ಹೋಗಿ ಮಾಡುತ್ತಿದ್ದಾರೆ. ಇದರಿಂದ ಕೋರೋನಾ ಇನ್ನಷ್ಟು ಹರಡುವ ಭೀತಿಯಿದೆ. ಇಂತಹ ಸಂದರ್ಭದಲ್ಲಿ ಪಿಕ್ಸ ಯುಟ್ ಕಂಪನಿ ಮೂಲಕ ನಾವು ಕೊರೊನಾ ಮುಖ್ಯ ಲಕ್ಷಣವಾದ ದೇಹದ ಉμÁ್ಣಂಶವನ್ನು ಕುಳಿತಲ್ಲಿಯೇ ಪತ್ತೆ ಹಚ್ಚುವ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ ಭಕ್ತರ ಸಂಖ್ಯೆ ಹೆಚ್ಚಿರುವ ದೇವಾಲಯಗಳಲ್ಲಿ ಡೆಮೊ ಮಾಡಿದ್ದೇವೆ ಎಂದರು.
ಜನ ಸೇರುವ ಪ್ರದೇಶದಲ್ಲಂತೂ ದೇಹದ ಉμÁ್ಣಂಶ ಪತ್ತೆ ಹಚ್ಚುವ ಕ್ರತಕ ತನಿಕಾ ಆಧಾರಿತ ತಂತ್ರಾಂಶದ ಬಳಕೆ ಮಾಡಬಹುದಾಗಿದೆ. ಮಾಸ್ಕ ಹಾಕದಿರುವುದು ಕೂಡಾ ಇದರಲ್ಲಿ ಪತ್ತೆಯಾಗಲಿದೆ. ಸೆರೆಹಿಡಿದ ಡಾಟಾ ಸಂಗ್ರಹಿಸಬಹುದಾಗಿದೆ ಎಂದು ತಂತ್ರಾಂಶದ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ನಿಖಿಲ್, ಮಾರುತಿ, ಮಹೇಶ್ ಪಾಲೇಕರ್ ಹಾಗೂ ದಂಡಿನ ದುರ್ಗಾದೇವಿ ದೇವಸ್ಥಾನ ಆಡಳಿತಮಂಡಳಿ ಅಧ್ಯಕ್ಷರಾದ ಉಮೇಶ್ ಸಾರಂಗ ಉಪಸ್ಥಿತರಿದ್ದರು.
Leave a Comment