• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚೇತರಿಕೆ ಕಾಣದ ವೀಳ್ಯದೆಲೆ ಮಾರುಕಟ್ಟೆ.. ಬಳ್ಳಿಯಲ್ಲಿಯೇ ಹಣ್ಣಾಗಿ ಉದುರುತ್ತಿರುವ ಎಲೆಗಳು

November 18, 2020 by Lakshmikant Gowda Leave a Comment

ಅಡಿಕೆ ಜೊತೆ ತೋಟಗಾರಿಕಾ ಬೆಳೆಯಲ್ಲಿ ಉಪಬೆಳೆಯಾಗಿ ಬೆಳೆಯುವ ವೀಳ್ಯದೆಲೆ ರೈತರ ಪಾಲಿಗೆ ನಿರಂತರ ಆದಾಯ ತರುತ್ತಿದ್ದ ಬೆಳೆಯಾಗಿತ್ತು. ಆದರೆ ಕೊರೊನಾ ಕಾಲಘಟ್ಟದಲ್ಲಿ ಕಳೆದ ಆರೇಳು ತಿಂಗಳಿಂದ ಒಮ್ಮೆಯೂ ಕೊಯ್ಲನ್ನೇ ಕಾಣದೇ ಬಳ್ಳಿಯಲ್ಲಿಯೇ ಹಣ್ಣಾಗಿ ಉದುರುವ ಜೊತೆಗೆ ಎಲೆಯ ವಿಪರೀತ ಹೇರಿಕೆಯಿಂದಾಗಿ ಕೊಳೆ ರೋಗಕ್ಕೂ ಸುಲಭವಾಗಿತುತ್ತಾಗಿ ಬಳ್ಳಿಯೇ ನಾಶವಾಗುತ್ತಿರುವುದು ರೈತರ ಚಿಂತೆಗೆ ಕಾರಣವಾಗಿದೆ.

01 17 3


ಮಳೆಗಾಲದಲ್ಲಿ ಒಂದೆರಡು ತಿಂಗಳು ವೀಳ್ಯದೆಲೆ ಬೇಡಿಕೆ ಕೊಂಚ ಕಡಿಮೆಯಾಗುವುದು ಬಿಟ್ಟರೆ ಉಳಿದೆಲ್ಲಾ ದಿನಗಳಲ್ಲೂ ಮಾರುಕಟ್ಟೆ ಸ್ಥಿರವಾಗಿಯೇ ಇರುತ್ತಿತ್ತು. ಕೊರೊನಾ ಲಾಕ್‍ಡೌನ್ ಕಾರಣಕ್ಕೆ ಸ್ಥಗಿತವಾಗಿದ್ದ ಮಾರುಕಟ್ಟೆ ಕೆಲವೇದಿನಗಳಲ್ಲಿ ಪುನರಾರಂಭವಾಯಿತಾದರೂ ಇಂದಿಗೂ ಚೇತರಿಕೆ ಹಾದಿಯನ್ನು ಮಾತ್ರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ ಎಂದು ವ್ಯಾಪಾರಿಗಳು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.
ಲಾಹೋರ್. ಡಾಕಾ ಮೂಂತಾದ ವಿದೇಶಿ ಮಾರುಕಟ್ಟೆ ಸೇರಿದಂತೆ ದೆಹಲಿ, ಪೂನಾಗಳಿಗೂ ರಫ್ತಾಗುತ್ತಿದ್ದ ತಾಲೂಕಿನ ವೀಳ್ಯದೆಲೆಗಳಿಗೆ ಅತೀ ದೊಡ್ಡ ಮಾರುಕಟ್ಟೆ ಮಾತ್ರ ರಾಣೆಬೆನ್ನೂರು ಆಗಿತ್ತು. ಕಳೆದೊಂದು ವರ್ಷದಿಂದ ರಾಣೆಬೆನ್ನೂರಿನಲ್ಲಿಯೂ ವೀಳ್ಯದೆಲೆಗೆ ಬೇಡಿಕೆ ಇಲ್ಲವಾಗಿದೆ. ಒಂದು ಕಟ್ಟು ರಾಣಿ (100 ಎಲೆ) ಎಲೆಯನ್ನು 8-10 ರುಪಾಯಿಗೆ ಕೇಳುತ್ತಾರೆ. ಅಷ್ಟು ಕಡಿಮೆ ಬೆಲೆಗೆ ಕೊಟ್ಟರೆ ಬೆಳೆ ಬೆಳೆದ ರೈತರಿಗೆ ಲಾಭದ ಮಾತಿರಲಿ ಕೊಯ್ಲು ಮಾಡಿದವರಿಗೆ ಸಂಬಳವನ್ನೂ ಕೈಯಿಂದಲೇ ಕೊಡಬೇಕಾಗುತ್ತದೆ. ಹಾಗಾಗಿ ಯಾರೂ ಎಲೆ ಕೊಯಲಿಗೆ ಮುಂದಾಗುತ್ತಿಲ್ಲ ಎನ್ನುವ ಮಾತಿದೆ.

01 17 2


ಬೆಲೆ ಇಲ್ಲ ಎಂದು ವೀಳ್ಯದೆಲೆ ಬಳ್ಳಿಗಳನ್ನು ಹಾಗೇ ಬಿಟ್ಟರೆ ಎಲೆಗಳು ಹಣ್ಣಾಗಿ ಕೊಯ್ಲಿಗೇ ಬರದಂತಾಗುತ್ತದೆ ಮಾತ್ರವಲ್ಲ ಮಳೆಗಾಲದಲ್ಲಿ ಬಳ್ಳಿಯಲ್ಲಿ ಎಲೆ ಹೆಚ್ಚಿದ್ದರೆ ಕೊಳೆ ರೋಗವೂ ಕಾಣಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಒಂದು ರೂಪಾಯಿ ಕೊಡುವುದೂ ಬೇಡ ಎಲೆಯನ್ನಾದರೂ ಕೊಯ್ದುಕೊಂಡು ಹೋಗಿ ಎಂದರೆ ಅದಕ್ಕೂ ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸಾವಿರಾರು ರುಪಾಯಿ ಮುಂಗಡ ಕೊಟ್ಟು ಗುತ್ತಿಗೆ ಪಡೆದ ತೋಟಗಳ ಎಲೆಯನ್ನೇ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಹೀಗಿರುವಾಗ ಬೇರೆ ಎಲೆಯನ್ನು ತೆಗೆದುಕೊಂಡರೆ ಏನು ಮಾಡುವುದು ಎನ್ನುವುದು ವ್ಯಾಪಾರಿಗಳ ಪ್ರಶ್ನೆಯಾಗಿದೆ.
ಅಡಿಕೆಗೆ ರೇಟು ಬಂದಿದೆ ಎಂದ ಖುಷಿಪಟ್ಟಿದ್ದ ರೈತರ ಮುಖದಲ್ಲಿ ವೀಳ್ಯದೆಲೆ ಬಳ್ಳಿಗಳು ನಾಶವಾಗುತ್ತಿರುವ ಚಿಂತೆಯ ಗೆರೆ ಕಾಣಿಸಿಕೊಳ್ಳತೊಡಗಿದೆ. ಮಳೆ ನಿಂತರೂ ಮರದ ಹನಿ ನಿಲ್ಲದು ಎನ್ನುವಂತೆ ಕೊರೊನಾ ಮುಗಿದರೂ ಕೊರೊನಾ ಉಂಟುಮಾಡಿದ ಪರಿಣಾಮಗಳು ಜನರನ್ನು ಬಹುಕಾಲ ಕಾಡಲಿದೆ ಎನಿಸುತ್ತಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, ಅಂಕಣಗಳು, ಕೃಷಿ Tagged With: at low prices, for six months, If the leaves are ripe, in addition to the excess of the leaf, periodically, the crop growers will have to harvest the fruit, to the farmer's share of the weed, without seeing the harvest., ಆರೇಳು ತಿಂಗಳಿಂದ ಒಮ್ಮೆಯೂ, ಎಲೆಗಳು ಹಣ್ಣಾಗಿ ಕೊಯ್ಲಿಗೇ, ಎಲೆಯ ವಿಪರೀತ ಹೇರಿಕೆ, ಕಡಿಮೆ ಬೆಲೆಗೆ ಕೊಟ್ಟರೆ, ಕಾಲಘಟ್ಟದಲ್ಲಿ, ಕೊಯ್ಲನ್ನೇ ಕಾಣದೇ, ಬೆಳೆ ಬೆಳೆದ ರೈತರಿಗೆ, ವೀಳ್ಯದೆಲೆ ರೈತರ ಪಾಲಿಗೆ, ಹಣ್ಣಾಗಿ ಉದುರುವ ಜೊತೆಗೆ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...