ಭಟ್ಕಳ: ಕಳೆದ ಇಪ್ಪತ್ತ ನಾಲ್ಕು ವರ್ಷಗಳಿಂದಲೂ ನಿರಂತರವಾಗಿ ಶಬರಿಮಲೆಗೆ ಯಾತ್ರೆಗಳನ್ನು ಕೈಗೊಳ್ಳುತ್ತಾ ಬಂದಿರುವ ವ್ಯಕ್ತಿಯೊರ್ವರು ಈ ಬಾರಿ ಸತತ ಒಂದು ವರ್ಷಗಳ ಕಾಲ ವೃತವನ್ನು ಆಚರಿಸಿ ತಡರಾತ್ರಿ ಶಬರಿಮಲೆಯ ದರ್ಶನಕ್ಕೆ ತೆರಳಿದರು.
ಭಟ್ಕಳ ತಾಲೂಕಿನ ಮುಂಡಳ್ಳಿಯ ಸೀತಾರಾಮ ಸ್ವಾಮಿಯ ಎನ್ನುವರು ಅಯ್ಯಪ್ಪ ಸ್ವಾಮಿ ವ್ರತಧಾರಿ ಸತತ ಏಳು ವರ್ಷಗಳ ಕಾಲ ಪಾದಯಾತ್ರೆ ನಡೆಸಿ ಹಾಗೂ ಹಾಗೂ18ನೇ ವರ್ಷದಲ್ಲಿ 108 ದಿನಗಳ ಕಾಲ ವ್ರತ ಆಚರಣೆ,ಅಯ್ಯಪ್ಪನ ದರ್ಶನ ಪಡೆಯುತ್ತ ಬಂದಿದ್ದಾರೆ.
ಈ ಬಾರಿ ಕಳೆದ 2019 ನವಂಬರ್ ನಲ್ಲಿ ಇಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಟಪ ಮುಗಳಿಕೋಣೆ ದಲ್ಲಿ ಅಯ್ಯಪ್ಪ ಮಾಲಾಧಾರಣೆ ಧರಿಸಿ 1 ವರ್ಷ ಅವಧಿ ವೃತ ಮುಗಿಸಿ ನವೆಂಬರ್ 24 ರಂದು ಶಬರಿಮಲೆ ಯಾತ್ರೆ ಪ್ರಯಾಣ ಬೆಳೆಸಿದರು.
ಪೂಜೆಯ ನೇತೃತ್ವ ವಹಿಸಿದ್ದ ಅಯ್ಯಪ್ಪ ಸ್ವಾಮಿಯ ಪರಮಭಕ್ತರಾದ ಮಾರುತಿ ಗುರುಸ್ವಾಮಿ ಅವರು,ಮನದ ಅಭೀಷ್ಟಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿದರು.ಈ ವೇಳೆ ಅಯ್ಯಪ್ಪ ಸ್ವಾಮಿ ಮಂದಿರದ ಗುರು ಸ್ವಾಮಿ ಹಾಗೂ ಅಯ್ಯಪ್ಪ ಮಾಲಾಧಾರಿಗಳು,ಕುಟುಂಬದವರು,ದುರ್ಗಾ ಗೆಳೆಯರ ಬಳಗ ಸೇರಿದಂತೆ ಅನೇಕರು ಸೀತರಾಮಸ್ವಾಮಿಯ ಅವರಿಗೆ ಸನ್ಮಾನಿಸಿ ಗೌರವಿಸಿದರು
ಲಾಕ್ ಡೌನ್ ಸಂಕಷ್ಟದಲ್ಲಿ ನೆರವಾದರನ್ನು ನೆನಪಿಕೊಂಡ ಸೀತರಾಮ ಸ್ವಾಮಿಯ :
2020 ಮಾರ್ಚ್ ನಲ್ಲಿ ದೇಶದ ದಲ್ಲಿ ಕೊರೊನಾ ವೈರಸ್ ಹರಡುವ ಭೀತಿಯಿಂದ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿ ಇದ್ದ ಸಂದರ್ಭದಲ್ಲಿ ಏನು ದಿಕ್ಕು ತೋರಿಸದೆ ಭಯಗೊಂಡಿದ್ದ ಸೀತಾರಾಮ ಸ್ವಾಮಿ ಸುಮ್ಮನೆ ನಿಂತು ಬಿಟ್ಟರಂತೆ ಇವರ ಸಂಕಷ್ಟವನ್ನು ತಿಳಿದು ಗೆಳೆಯರು,ಸ್ಥಳೀಯರು,ಹಾಗೂ ದೇವಸ್ಥಾನದ ಅಕ್ಕ ಪಕ್ಕದಲ್ಲಿ ಇದ್ದ ಅನ್ಯಧರ್ಮಿಯ ಮನೆಯವರು,ಅಕ್ಕಿ,ಬೆಳೆ,ಹಾಗೂ ಇತರೆ ವಸ್ತುಗಳನ್ನು ಸಂಪೂರ್ಣ ಪೂರೈಸಿದರು.ಮತ್ತು ಫೋನ್ ಮೂಲಕ ಕುಶಲೋಪರಿ ವಿಚಾರಿಸುತ್ತಾ ಇದ್ದರೂ ಇನ್ನೂ ಮಳೆಗಾಲದಲ್ಲಿ ಗಾಳಿ,ಮಳೆ,ಚಳಿ ಬೀಳುತ್ತಿದ್ದು ತುಂಬಾ ಕಷ್ಟದ ಸಮಯವನ್ನು ಕೂಡ ಅನುಭವಿಸಿದ್ದೇನೆ ಅಯ್ಯಪ್ಪ ಸ್ವಾಮಿ ಮತ್ತು ಗುರುಸ್ವಾಮಿಗಳ ದಯೆಯಿಂದ ಎಲ್ಲಾ ತೊಂದರೆಗಳು ತನ್ನಷ್ಟಕ್ಕೇ ದೂರವಾದವು ಅದೊಂದು ತನ್ನ ಶಬರಿಮಲೆ ವ್ರತವನ್ನು ಅವಿಸ್ಮರಣೀಯ ರೋಮಾಂಚನದ ಮರೆಯಲಾರದ ಕ್ಷಣ ಎಂದು ನೆನಪಿಸಿಕೊಂಡರು.
Leave a Comment