• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಗೆಹರಿಯದ ನೆಟ್ವರ್ಕ್ ಸಮಸ್ಯೆ – ರೇಶನ್ ವಿತರಣೆಯನ್ನು ಗೊಂದಲದ ಗೂಡಾಗಿಸಿರುವ ಸರ್ವರ್

November 27, 2020 by Lakshmikant Gowda Leave a Comment

ಪಡಿತರ ವ್ಯವಸ್ಥೆಯ ಸುಧಾರಣೆಗಾಗಿ ಜಾರಿಯಾದ ಬಯೋಮೆಟ್ರಿಕ್ ವ್ಯವಸ್ಥೆ ಜನರಿಗೆ ಅನುಕೂಲಮಾಡಿಕೊಡುವ ಬದಲು ಅವರ ಅತ್ಯಮೂಲ್ಯ ಸಮಯವನ್ನು ವ್ಯರ್ಥವಾಗಿಸುವ ವ್ಯವಸ್ಥೆಯಾಗಿದೆ ಎನ್ನುವ ಟೀಕೆಯನ್ನು ಎದುರಿಸುತ್ತಿದೆ.

04 24 2


ಗುಡ್ಡಗಾಡು ಪ್ರದೇಶಗಳನ್ನೊಳಗೊಂಡಿರುವ ಜಿಲ್ಲೆಯಲ್ಲಿ ಇಂದಿಗೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋದಾಗ ಮೊಬೈಲ್ ನೆಟ್ವರ್ಕ ಸಿಗುವುದೇ ಕಷ್ಟ ಎನ್ನು ಸ್ಥಿತಿಯಿದೆ. ಹಾಗಿದ್ದರೂ ದುರ್ಬಲ ನೆಟ್ವರ್ಕ ನಂಬಿ ಪಡಿತರ ವಿತರಣೆಗೂ ಆನ್ಲೈನ್ ಎಂಟ್ರಿ ಕಡ್ಡಾಯ ಮಾಡಿದ ಸರ್ಕಾರದ ನಿರ್ಧಾರದ ಬಗ್ಗೆ ವ್ಯಾಪಕ ವಿರೋಧವ್ಯಕ್ತವಾಗುತ್ತಿದೆ.
ಲಾಕ್‍ಡೌನ್ ಸಂದರ್ಭದಲ್ಲಿ ನೆಟ್ವರ್ಕ ಸಮಸ್ಯೆಯಿಂದ ರೇಶನ್ ವಿತರಣೆಗೆ ಸಮಸ್ಯೆಯಾಗಲಿದೆ ಎನ್ನುವುದನ್ನು ಅರಿತ ಅಧಿಕಾರಿಗಳು ಜನಪ್ರತಿನಿಧಿಗಳು ಹಿಂದಿನ ವ್ಯವಸ್ಥೆಯಲ್ಲಿಯೇ ರೇಶನ್ ವಿತರಣೆಗೆ ಅವಕಾಶ ಕಲ್ಪಿಸಿದ್ದರು. ಆದರೆ ಲಾಕ್‍ಡೌನ್ ತೆರವಾದ ನಂತರ ನೆಟ್ವರ್ಕ ಗುಣಮಟ್ಟದಲ್ಲಿ ಯಾವುದೇ ಬದಲಾವಣೆಯಾಗದಿದ್ದರೂ ಮತ್ತೆ ಆನ್ಲೈನ್ ಎಂಟ್ರಿಮಾಡಿಕೊಂಡು ಪಡಿತರ ವಿತರಿಸುತ್ತಿರುವ ಕ್ರಮದ ಬಗ್ಗೆ ಕಾರ್ಡದಾರರು ಪ್ರಶ್ನಿಸುತ್ತಿದ್ದಾರೆ.

04 24


ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸುಲಭವಾಗಲಿ ಎನ್ನುವ ಕಾರಣಕ್ಕೆ ಒಂದೊಂದು ಏರಿಯಾಕ್ಕೆ ಒಂದೊಂದು ದಿನ ರೇಶನ್ ಕೊಡುವ ವ್ಯವಸ್ಥೆಯನ್ನು ನ್ಯಾಯಬೆಲೆ ಅಂಗಡಿಯವರು ಮಾಡಿಕೊಂಡಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ಬೆಳಿಗ್ಗೆ ರೇಶನ್‍ಗೆ ಬಂದವರು ಕಾದು ಕಾದು ಸಂಜೆ ಮನೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಗಂಟೆಗೊಂದು ಕಾರ್ಡ ಎಂಟ್ರಿಯಾದರೆ ಸಾವಿರಾರು ಕಾರ್ಡದಾರರನ್ನು ಹೊಂದಿರುವ ನ್ಯಾಯಬೆಲೆ ಅಂಗಡಿಯವರು ಸಕಾಲದಲ್ಲಿ ಪಡಿತರ ವಿತರಿಸುವುದು ಹೇಗೆ ಎನ್ನುವುದು ಎಲ್ಲರ ಪ್ರಶ್ನೆ. ಒಂದೋ ನೆಟ್ವರ್ಕ ವ್ಯವಸ್ಥೆಯನ್ನು ಬಲಪಡಿಸಿ, ಇಲ್ಲಾ ಪಡಿತರ ವಿತರಣೆ ವ್ಯವಸ್ಥೆಯನ್ನು ಬದಲಿಸಿ, ಈಗಿರುವ ವ್ಯವಸ್ಥೆಯಲ್ಲಿಯೇ ಕುಂಟುತ್ತಾ ತೆವಳುತ್ತಾ ಮುಂದುವರೆಯಬೇಕು ಎಂದರೆ ಜನರಿಗೆ ಅನುಕೂಲಮಾಡಿಕೊಡುವುದಕ್ಕಿಂತ ಅವರನ್ನು ಗೋಳು ಹೊಯ್ದುಕೊಳ್ಳುವುದಕ್ಕೇ ಕಾರಣವಾಗುತ್ತದೆ ಎನ್ನುವ ಜನರ ಆಕ್ರೋಶದ ಮಾತನ್ನು ಆಳುವ ವರ್ಗ ಕೇಳಿಸಿಕೊಳ್ಳಬೇಕಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: biometric system, Easy to maintain, mobile network, online entry mandatory, precious time, ration delivery, social gap, ಅತ್ಯಮೂಲ್ಯ ಸಮಯ, ಆನ್ಲೈನ್ ಎಂಟ್ರಿ ಕಡ್ಡಾಯ, ಬಯೋಮೆಟ್ರಿಕ್ ವ್ಯವಸ್ಥೆ, ರೇಶನ್ ವಿತರಣೆಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸುಲಭ, ಸ್ಥಳಕ್ಕೆ ಹೋದಾಗ ಮೊಬೈಲ್ ನೆಟ್ವರ್ಕ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...