ಎಸ್.ಎಲ್.ಘೋಟ್ನೇಕರ ಅವರು ಮುಂದಿನ ಎಲ್ಲ ಚುನಾವಣೆ ಗೆಲ್ಲಲಿದ್ದಾರೆ, ಟೀಕೆ ಮಾಡುವ ಮುನ್ನ ಅರಿತು ಮಾತನಾಡಿ.
ಹಳಿಯಾಳ:- ಹಳಿಯಾಳದ ಮಾಜಿ ಶಾಸಕರು ಬೇರೆಯವರ ಸಮಾಜದ ಆಂತರಿಕ ವಿಷಯದಲ್ಲಿ ಮೂಗು ತೂರಿಸುವದನ್ನು ಬಿಟ್ಟು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮೊದಲು ಪ್ರಯತ್ನಿಸಲಿ ಎಂದು ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ನ ಮುಖಂಡರು ಪತ್ರಿಕಾ ಹೇಳಿಕೆಯ ಮೂಲಕ ಸವಾಲ್ ಹಾಕಿದ್ದಾರೆ.
ಈ ಕುರಿತು ಬುಧವಾರ ಸಾಯಂಕಾಲ ಪತ್ರಿಕಾ ಹೇಳಿಕೆ ಹೊರಡಿಸಿರುವ ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ನ ಮುಖಂಡರುಗಳು ಮರಾಠಾ ಭವನ ಕಾಮಗಾರಿಗೆ ಮಂಜೂರಾದ ಅನುದಾನವನ್ನು ತಡೆಹಿಡಿಯಲು ಸರ್ಕಾರ ಮಟ್ಟದಲ್ಲಿ ಯಾರು ಪ್ರಯತ್ನಪಟ್ಟಿದ್ದಾರೆ ಎನ್ನುವುದು ಸಮಾಜಕ್ಕೆ ತಿಳಿದ ವಿಷಯವಾಗಿದೆ ಅದನ್ನು ಮೊದಲು ಸದಾಕಾಲ ಘೋಟ್ನೇಕರ ಬಗ್ಗೆ ಟೀಕೆ ಮಾಡುವವರು ಅರಿತುಕೊಳ್ಳಲಿ ಎಂದಿದ್ದಾರೆ.
ಎಸ್.ಎಲ್.ಘೋಟ್ನೆಕರ ಅವರು ಮರಾಠಾ ಸಮಾಜದ ಅಧ್ಯಕ್ಷರಾದರೇ ಅಭಿವ್ಥದ್ಧಿಯಾಗುತ್ತದೆ ಎಂದು ಹೇಳಿ ಅಧ್ಯಕ್ಷರನ್ನಾಗಿ ಪರೋಕ್ಷವಾಗಿ ಪ್ರಯತ್ನಿಸಿದವರು ಇಂದು ಬೇರೆ ಪಕ್ಷದಲ್ಲಿ ಗುರುತಿಸಿಕೊಂಡು ಈಗ ಯಾರದೋ ಮಾತು ಕೇಳಿ ಘೊಟ್ನೇಕರ ಅವರ ವಿರುಧ್ದ ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿರುವ ಮುಖಂಡರುಗಳು ಮುಂದಿನ ದಿನಗಳಲ್ಲಿ ಸಕಲ ಮರಾಠಾ ಸಮಾಜ ಒಗ್ಗೂಡಿಸಿಕೊಂಡು ಘೋಟ್ನೆಕರ ಅವರಿಗೆ ಬೆಂಬಲವನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ.
ಎಲ್ಲಾ ಸಮುದಾಯವನ್ನು ಒಗ್ಗೂಡಿಸಿಕೊಂಡು ಸರ್ವ ಸಮಾಜದ ಬಡವರ, ದಿನದಲಿತರ, ರೈತರ ಅಭಿವೃದ್ಧಿಯ ಹಿತದೃಷ್ಟಿಯನ್ನು ಇರಿಸಿಕೊಂಡು ಎಲ್ಲಾ ಸಮಾಜದವರೊಂದಿಗೆ ಅನ್ಯೋನ್ಯವಾಗಿರುವ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ದುಡಿಯುತ್ತಿರುವ ಘೊಟ್ನೇಕರ ಅವರ ನೇತೃತ್ವದಲ್ಲಿ ಮಾಡಿದ “ಏಕ ಮರಾಠಾ ಲಾಕ ಮರಾಠಾ” ಕಾರ್ಯಕ್ರಮ ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದ್ದು ಅದರ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದಿದ್ದಾರೆ.
ಪ್ರತಿಷ್ಠಿತ ಕೆ.ಡಿ.ಸಿ.ಸಿ. ಬ್ಯಾಂಕನಲ್ಲಿ ಕಳೆದ 19 ವರ್ಷಗಳಿಂದ ಪ್ರತಿನಿಧಿಸುತ್ತಾ ಬಂದಿದ್ದು 16 ವರ್ಷ ಅಧ್ಯಕ್ಷರಾಗಿ 3 ವರ್ಷ ಉಪಾಧ್ಯಕ್ಷರಾಗಿ ಅತ್ಯುತ್ತವಮ ಸೇವೆ ಸಲ್ಲಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದು ಇಷ್ಟೋಂದು ಸುಧೀರ್ಘ ಅವಧಿಯನ್ನು ಬ್ಯಾಂಕಿನ ಎಲ್ಲಾ ನೀರ್ದೇಶಕರು ಸ್ವತಃ ಈಗ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ ಸಚಿವ ಶಿವರಾಮ ಹೆಬ್ಬಾರವರು ಸಹ ಬೆಂಬಲಿಸಿದ್ದು ಶ್ಲಾಘನೆ ವ್ಯಕ್ತಪಡಿಸಿದ್ದು ಮಾಜಿ ಶಾಸಕರಿಗೆ ಹಾಗೂ ಅವರ ಬೆಂಬಲಿಗರಿಗೆ ಗೊತ್ತಿಲ್ಲವೇ ಎಂದು ಪ್ರಶ್ನೀಸಿರು ಮುಖಂಡರು ಘೋಟ್ನೇಕರ ಅವರ ಕಾರ್ಯತತ್ಪರತೆ ಮತ್ತು ಪ್ರಾಮಾಣಿಕತೆಯ ಪ್ರತೀಕವಾಗಿದ್ದು, ಅವರ ಅಧೀಕಾರವಧಿಯಲ್ಲಿ ಎಲ್ಲ ರೈತರಿಗೆ ಪಕ್ಷ ಬೇಧ ಮರೆತು ಬೆಳೆ ಸಾಲ, ಬೆಳೆ ವಿಮೆ, ಬೆಳೆ ಹಾನಿ ಪರಿಹಾರ, ಮತ್ತು ಕೊಟ್ಯಾಂತರ ರೂಪಾಯಿ ದನದ ಕೊಟ್ಟಿಗೆ ಸಾಲ ನೀಡಿ ರೈತರ ಶ್ರೇಯೋಭಿವೃದ್ದಿಗೆ ಶ್ರಮಿಸಿದ್ದು ಘೊಟ್ನೇಕರ ಬಗ್ಗೆ ಟೀಕೆ ಮಾಡುವವರು ಎಚ್ಚರದಿಂದ ವಸ್ತುಸ್ಥಿತಿ ತಿಳಿದುಕೊಂಡು ಟಿಕೆ ಮಾಡಲಿ ಹಾಗೂ ಹೇಳಿಕೆ ನೀಡಲಿ ಎಂದು ಕಿಡಿ ಕಾರಲಾಗಿದೆ.
ಈ ಹಿಂದೆ ಹಳಿಯಾಳ ಕ್ಷೇತ್ರದಲ್ಲಿ ನೆರೆ ಬಂದಾಗ ನೆರೆ ಪರಿಹಾರ ಹಾಗೂ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಸಾವಿರಾರು ಜನರಿಗೆ ಅಗತ್ಯ ಆಹಾರ ಕಿಟ್ ವಿತರಿಸಿ ಅಲ್ಲದೇ ಕ್ಷೇತ್ರದಲ್ಲಿ 40ಕ್ಕೂ ಹೆಚ್ಚು ಪ್ರತಿಮೆ ಸ್ಥಾಪನೆಗೆ ಸಹಾಯ ಸಹಕಾರ ನೀಡಿ ಜನಮೆಚ್ಚುಗೆ ಗಳಿಸಿರುವ ಘೊಟ್ನೇಕರ ಅವರ ಜನಬೆಂಬಲವನ್ನು ಕಂಡು ವಿರೋಧಿಗಳು ಅವರ ವಿರುದ್ದ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವುದು ನೋಡಿದರೇ ಮುಂದೆಯೂ ಘೊಟ್ನೇಕರ ಅವರ ನೇತೃತ್ವದಲ್ಲಿ ಎಲ್ಲ ಚುನಾವಣೆಗಳಲ್ಲಿ ಅವರ ಬೆಂಬಲಿಗರು ಗೆಲುವ ಸಾಧಿಸಲಿದ್ದಾರೆ ಎಂಬುದು ಖಚಿತವಾಗಿದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ತಮ್ಮ ಆಸ್ತಿಯನ್ನು ಮಾರಾಟ ಮಾಡಿಯಾದರು ಮಾಜಿ ಶಾಸಕರನ್ನು ಸೋಲಿಸುತ್ತೇನೆ ಎಂದು ಘೊಟ್ನೇಕರ ಹೇಳಿದ್ದು ಆ ರೀತಿ ಮಾಡಲು ಸಮಾಜವು ಘೋಟ್ನೆಕರ ಅವರನ್ನು ಎಂದಿಗೂ ಕೈ ಬಿಡುವುದಿಲ್ಲ ನಾವು ಅವರೊಂದಿಗೆ ಇದ್ದೇವೆಂದು ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್(ರಿ)ನ ಪದಾಧಿಕಾರಿಗಳು ಹಾಗೂ ಸದಸ್ಯರಾದ ಬಾಳಕೃಷ್ಣಾ ಪರಶುರಾಮ ಶಹಾಪೂರಕರ, ಮಂಗಲಾ ಕಶೀಲಕರ, ತುಕಾರಾಮ ಗೌಡಾ, ಅಪ್ಪಾರಾವ ಕೃಷ್ಣಾ ಪೂಜಾರಿ, ಭಾರತಿ ಘೇವಡಿ, ಗಣಪತಿ ಬೇಕಣೆ, ವಜ್ರೇಶ್ವರಿ ಶೇಟವನ್ನವರ, ಅನಿಲ ಚವ್ಹಾಣ, ಕೃಷ್ಣಾ ದೇಸಾಯಿ, ಗೋವಿಂದ ದಲಾಲ, ಸಂದೀಪ ರಾಣೆ-ರಾಮನಗರ, ಲಕ್ಷ್ಮಣ ಅರಿಶಿನಗೇರಿ, ಪ್ರಭಾಕರ ಗಾವಡೆ, ಶಂಕರ ನಿಂಗಪ್ಪಾ ಬೆಳಗಾಂವಕರ, ಸುಂದರ ಕಾನಕತ್ರಿ, ಸಂತೋಷ ಫಕೀರಪ್ಪಾ ಮಿರಾಶಿ, ಓಮಣ್ಣಾ ಖೇ. ಭಗತ್, ಮಾರುತಿ ಕಾಮ್ರೇಕರ, ಯಲ್ಲಪ್ಪಾ ಮಾರುತಿ ಮಾಲವನಕರ ಅವರುಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Leave a Comment