• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನಿಲ್ಲುತ್ತಿಲ್ಲ ಅಪಘಾತಗಳ ಸಂಖ್ಯೆ – ಉತ್ತರ ಕಾಣದ ಪ್ರಶ್ನೆಯಾಗಿರುವ ಬಾಳೆಗದ್ದೆ ಕ್ರಾಸ್

December 2, 2020 by Lakshmikant Gowda Leave a Comment

ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ಸಮೀಪದ ಬಾಳೆಗದ್ದೆ ತಿರುವಿನ ಮರ್ಮವನ್ನು ಅರಿಯಲು ಸಾಧ್ಯವಾಗದ ವಾಹನ ಚಾಲಕರು ವಾಹನಗಳನ್ನು ಮಗುಚಿ ಹಾಕಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಲೇ ಇದ್ದು ಈ ತಿರುವಿನ ಬಗ್ಗೆ ಜನರಲ್ಲಿ ಆತಂಕ ಮನೆಮಾಡುವಂತಾಗಿದೆ.

watermarked 02 01


ಗೇರಸೊಪ್ಪಾ ಕಡೆಯಿಂದ ಹೊನ್ನಾವರ ಕಡೆಗೆ ಹೋಗುವಾಗ ವೇಗವಾಗಿ ಬರುವ ಚಾಲಕರು ಹುಲಿಯಪ್ಪನ ಕಟ್ಟೆ ದಾಟಿದ ತಕ್ಷಣ ಇಳಿಜಾರಿನಲ್ಲಿ ಬಲಕ್ಕೆ ಹೊರಳಿದ ತಕ್ಷಣ ಸ್ಟಿಯರಿಂಗ್‍ನ್ನು ಎಡಕ್ಕೆ ತಿರುಗಿಸಬೇಕಾದ ಈ ತೀಕ್ಷಣ ತಿರುವಿನಲ್ಲಿ ಕಕ್ಕಾಬಿಕ್ಕಿಯಾಗುವ ಚಾಲಕರು ಎಚ್ಚೆತ್ತುಕೊಳ್ಳುವಷ್ಟರಲ್ಲಿ ನಿಯಂತ್ರಣ ತಪ್ಪುವ ವಾಹನಗಳು ಪಲ್ಟಿಯಾಗುತ್ತಿದೆ.
ಸೂಚನಾ ಫಲಕಗಳು ಇಲ್ಲದ ಕಾರಣಕ್ಕೇ ಅಪಘಾತಗಳು ಸಂಭವಿಸುತ್ತಿದೆ ಎನ್ನುವ ದೂರು ಸಾರ್ವಜನಿಕರಿಂದ ಕೇಳಿಬಂದಾಗ ಎಚ್ಚೆತ್ತುಕೊಂಡ ಹೆದ್ದಾರಿ ಪ್ರಾಧಿಕಾರದವರು ಮಾರ್ಗಸೂಚಿ ಫಲಕಗಳನ್ನು ಅಳವಡಿಸುವ ಜೊತೆಗೆ ರಸ್ತೆಯ ಒಂದು ಬದಿಗೆ ಕಬ್ಬಿಣದ ಕಂಬಗಳನ್ನು ನೆಟ್ಟು ತಡೆಗೋಡೆಯನ್ನೂ ನಿರ್ಮಿಸಿದ್ದರಾದರೂ ಪದೇ ಪದೇ ಈ ಭಾಗದಲ್ಲಿ ಸಂಭವಿಸಿದ ಅಪಘಾತಗಳಿಗೆ ಕಬ್ಬಿಣದ ತಡೆಗೋಡೆ ಜಖಂ ಆಗಿದೆ. ಏನೇ ಮಾಡಿದರೂ ಇಲ್ಲಿ ಸಂಭವಿಸುವ ಅಪಘಾತಗಳ ಸಂಖ್ಯೆಯಲ್ಲಿ ಮಾತ್ರ ಕಡಿಮೆಯಾಗಿಲ್ಲ.
ಪ್ರತೀ ವರ್ಷ ಹತ್ತಾರು ವಾಹನಗಳು ಮಗುಚಿ ಬೀಳುವ, ವೇಗವಾಗಿ ಬರುವ ಬೈಕ್ ಸವಾರರು ಬೈಕ್ ಎದುರಿನಿಂದ ಬರುವ ವಾಹನಕ್ಕೆ ಗುದ್ದಿಕೊಂಡು ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುವ ದುರ್ಘಟನೆಗಳು ಒಂದಾದಮೇಲೊಂದರಂತೆ ನಡೆಯುತ್ತಿರುವುದು ನೋಡಿದರೆ ರಸ್ತೆ ನಿರ್ಮಾಣವೇ ವೈಜ್ಞಾನಿಕ ರೀತಿಯಲ್ಲಿ ಆಗಿಲ್ಲವೇನೋ.. ಅದೇ ಕಾರಣಕ್ಕೆ ಇಲ್ಲಿ ಈ ಪರಿಯ ಅಪಘಾತ ಸಂಭವಿಸುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.

watermarked 02 01 2

ಹೊನ್ನಾವರದಿಂದ ಗೇರಸೊಪ್ಪಾ ಮಾವಿನಗುಂಡಿ ವರೆಗೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನೂರಾರು ತೀಕ್ಷ್ಣ ತಿರುವುಗಳು ಇವೆಯಾದರೂ ಗೇರಸೊಪ್ಪಾ ಸೂಳೆಮುರ್ಕಿ ಮತ್ತು ಮುಗ್ವಾ ಬಾಳೆಗದ್ದೆ ತಿರುವಿನಲ್ಲಿ ಸಂಭವಿಸುವಷ್ಟು ಅಪಘಾತಗಳು ಎಲ್ಲಿಯೂ ಸಂಭವಿಸುವುದಿಲ್ಲ ಎನ್ನುವುದು ಪ್ರತೀ ವರ್ಷ ಈ ಭಾಗದಲ್ಲಿ ಸಂಭವಿಸುವ ಅಪಘಾತಗಳನ್ನು ಗಣನೆಗೆ ತೆಗೆದುಕೊಂಡಾಗ ತಿಳಿದುಬರುತ್ತದೆ.
ಹೆದ್ದಾರಿ ಅಪಘಾತಗಳು ಸಂಭವಿಸಿದಾಗ ಚಾಲಕರ ನಿರ್ಲಕ್ಷ್ಯವೇ ಕಾರಣ ಎಂದು ಷರಾ ಬರೆದು ಪ್ರಕರಣ ಮುಗಿಸುವ ಬದಲು ಯಾವುದಾದರೂ ಒಂದು ಸ್ಥಳದಲ್ಲಿ ಪದೇ ಪದೇ ಅಪಘಾತಗಳಾಗುತ್ತಿದ್ದರೆ ರಸ್ತೆ ನಿರ್ಮಾಣ ರೀತಿಯಲ್ಲಿಯೇ ಏನಾದರೂ ದೋಷ ಇರಬಹುದಾ ಎನ್ನುವುದನ್ನು ತಿಳಿದುಕೊಳ್ಳಲು ತಜ್ಞರ ಮೊರೆ ಹೋಗುವುದು ಒಳಿತು ಎನ್ನುವ ಅಭಿಪ್ರಾಯವಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಗಮನಹರಿಸುತ್ತದಾ ಎನ್ನುವುದನ್ನು ಕಾದು ನೋಡಬೇಕು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, Trending Tagged With: Due to the negligence of the drivers, the construction is scientific, the people are worried about the turn, the road towards Honnavar, the slopes immediately after crossing the Huliappanna deck, the speed of the Garasoppa side, the vehicles are worsened, ಗೇರಸೊಪ್ಪಾ ಕಡೆಯಿಂದ, ಚಾಲಕರ ನಿರ್ಲಕ್ಷ್ಯವೇ ಕಾರಣ, ತಿರುವಿನ ಬಗ್ಗೆ ಜನರಲ್ಲಿ ಆತಂಕ, ನಿರ್ಮಾಣವೇ ವೈಜ್ಞಾನಿಕ ರೀತಿ, ವಾಹನಗಳನ್ನು ಮಗುಚಿ, ಹುಲಿಯಪ್ಪನ ಕಟ್ಟೆ ದಾಟಿದ ತಕ್ಷಣ ಇಳಿಜಾರಿ, ಹೊನ್ನಾವರ ಕಡೆಗೆ, ಹೋಗುವಾಗ ವೇಗ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...