ಹೊನ್ನಾವರ;ಅಯೋಧ್ಯೆಯ ರಾಮನ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ರಾಮರಥ ಹೊನ್ನಾವರ ತಾಲೂಕಿನಲ್ಲಿ ಸಂಚರಿಸುತ್ತಿದ್ದು ರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನವನ್ನು ಸೋಮವಾರ ಹೊನ್ನಾವರ ಪಟ್ಟಣದ ವೆಂಕಟ್ರಮಣ ದೇವಸ್ಥಾನದಲ್ಲಿ ದೇವರಿಗೆ ಮತ್ತು ರಾಮರಥಕ್ಕೆ ಪೂಜೆ ಸಲ್ಲಿಸುವದರ ಮೂಲಕ ಚಾಲನೆ ನೀಡಲಾಯಿತು. ನಂತರ ಹೋರಟ ರಾಮರಥ ಕಾಸರಕೋಡ ಗುಣವಂತೆ ಇಡಗುಂಜಿ ಬಳ್ಕೂರ ಜಿನ್ನೋಡ ಚಿತ್ತಾರ ಮಂಕಿ ಭಾಗದಲ್ಲಿ ಇಂದು ರಾಮರಥ ಸಂಚರಿಸಿ ಸಂಜೆ ಪಟ್ಟಣದಲ್ಲಿ ಸಂಚರಿಸಲಿದೆ ಎಂದು ವಿಶ್ವ ಹಿಂದು ಪರಿಷತ್ತಿತ ಪ್ರಮುಖರು ಮಾಹಿತಿ ನೀಡಿದರು.
ಆರ್.ಎಸ್. ಎಸ್. ಪ್ರಮುಖ ವಿಶ್ವನಾಥ ನಾಯಕ ಮಾತನಾಡಿ ನಮ್ಮ ತಾಲೂಕಿನಲ್ಲಿ ರಾಮರಥ ಸಂಚಾರ ಆರಂಭವಾಗಿದೆ ಇಂದು ತಾಲೂಕಿನಾದ್ಯಂತ ಸಂಚರಿಸಲಿದೆ ಗ್ರಾಮ ದೇವರಾದ ವೆಂಕಟ್ರಮಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ ಪ್ರತಿ ಮನೆಗೆ ಸಂಪರ್ಕಿಸಿದಾಗ ತಾಲೆಲ್ಲರು ತಮ್ಮ ಕೈಲಾದ ನಿಧಿ ಸಮರ್ಪಿಸಿ ಇದು ನಮ್ಮ ಜೀವನದ ಅದ್ಬುತ ಕ್ಷಣವಾಗಿದೆ ಎಂದರು,
ಪ್ರಮುಖರಾದ ಸಂಜು ಶೇಟ್ ಮಾತನಾಡಿ ಇಂದು ಕಾಸರಕೋಡ ಇಡಗುಂಜಿ ಮಂಕಿ ಭಾಗದಲ್ಲಿ ರಾಮ ರಥ ಸಂಚರಿಸಲಿದೆ. ನಾಳೆ ಕರ್ಕಿ ಕಡತೋಕಾ ಭಾಗ ಸೇರಿದಂತೆ ಪ್ರತಿನಿತ್ಯ ತಾಲೂಕಿನಾದ್ಯಂತ ಸಂಚರಿಸಲಿದೆ. ಪ್ರತಿನಿತ್ಯ ಹೊನ್ನಾವರ ಪಟ್ಟಣದಲ್ಲಿ ಸಂಚರಿಸಲಿದೆ. ಇಲ್ಲಿ ನಾವು ಹಣ ಸಂಗ್ರಹ ಮಾಡುವುದಿಲಾ,್ಲ ಪೂಜೆ ಕಾರ್ಯಕ್ರಮ ಇರುವುದಿಲ್ಲಾ ಉರಿಗೆ ರಾಮರಥ ಬಂದಾಗ ಉರಿನ ಪ್ರಮುಖರು ಪುಷ್ಪಾರ್ಚನೆ ಮಾಡಬಹುದು. ಈ ರಥದÀ ಉದ್ದೇಶ ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರು ರಾಮಭಕ್ತರು ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ನಿಧಿ ಸಮರ್ಪಿಸಲು ಸಿದ್ದರಾಗಿರಿ ಎನ್ನುವುದಾಗಿದೆ ಎಂದರು
ಸಂಘಟನೆಯ ಪ್ರಮುಖರಾದ ಜೆ.ಟಿ.ಪೈ, ರಾಮಚಂದ್ರ ಕಾಮತ್ ಶಿವಾನಂದ ಮೇಸ್ತಾ, ರಾಜೇಶ ಭಂಡಾರಿ. ವಿಮಲ್ ರೇವಣಕರ್, ಗಣಪತಿ ನಾಯ್ಕ ಬಿಟಿ, ಸತೀಶ ನಾಜಗಾರ, ಎಸ್ ಟಿ ನಾಯ್ಕ, ರಘು ಪೈ, ಮುಂತಾದವರು ಇದ್ದರು,
Leave a Comment