ಹೊನ್ನಾವರ;ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸ್ನ್ ಸೊಸೈಟಿ ಬೆಂಗಳೂರು ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕಾರವಾರ ಇವುಗಳ ಸಂಯುಕ್ತಾಶ್ರಯದಲ್ಲಿ ತಾಲೂಕಾ ಆಸ್ಪತ್ರೆಯ ಸಿಬ್ಬಂಧಿಗಳಿಗೆ ನಡೆದ ಹೆಚ್.ಐ.ವಿ/ಏಡ್ಸ್ ಕುರಿತ ತರಭೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ತಾಲೂಕಾ ಆಸ್ಪತ್ರೆಯ ಹೃದಯ ರೋಗ ತಜ್ಞರು,ಲಿಂಕ್ ಎ.ಆರ.ಟಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ|| ಪ್ರಕಾಶ ನಾಯ್ಕ ಮಾತನಾಡಿ ಹೆಚ್.ಐ.ವಿ ಸೊಂಕಿತರನ್ನು ಏಡ್ಸ್ ರೋಗಿಗಳು ಎಂದು ಕರೆಯುವಂತಿಲ್ಲ.
ಅವರು ಕೇವಲ ಹೆಚ್.ಐ.ವಿಯೊಂದಿಗೆ ಜೀವಿಸುತ್ತಿರುವವರು ಮಾತ್ರ. ಹೆಚ್.ಐ.ವಿ ಇದೆ ಅನ್ನುವ ಕಾರಣಕ್ಕೆ ಯಾವುದೇ ವ್ಯಕ್ತಿಯನ್ನು ಕಳಂಕ ತಾರತಮ್ಯದಿಂದ ನೋಡಬಾರದು. ಅದು ಕಾನೂನು ರೀತಿ ಅಪರಾಧವಾಗಿದೆ. ಗರ್ಭಿಣಿ ಮಹಿಳೆಯರಿಗೆ ಕಾಲ ಕಾಲಕ್ಕೆ ಹೆಚ್.ಐ.ವಿ ರಕ್ತ ಪರೀಕ್ಷೆ ಮಾಡಿಸುವದರ ಮೂಲಕ ಮುಂದೆ ಹುಟ್ಟುವ ಮಗುವಿಗೆ ಹೆಚ್.ಐ.ವಿ ಬರಂದತೆ ತಡೆಗಟ್ಟಬಹುದು. ಒಂದು ದಶಕಗಳಿಗಿಂತಲೂ ಹೆಚ್ಚು ತಾಲೂಕಾ ಆಸ್ಪತ್ರೆಯಲ್ಲಿ ಹೆಚ್.ಐ.ವಿ/ಏಡ್ಸ್ ಸಂಬಂಧಿಸಿದಂತೆ ಐ.ಸಿ.ಟಿ.ಸಿ ವಿಭಾಗ ಕಾರ್ಯನಿರ್ವಹಿಸುತ್ತಿದ್ದು, ಮೊದಲಿನ ವರ್ಷಗಳಿಗೆ ಹೋಲಿಸಿದ್ದರೆ ವರ್ಷದಿಂದ ವರ್ಷ ಹೊಸ ಹೆಚ್.ಐ.ವಿ ಸೊಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವುದು ಸಂತೋಷದಾಯಕ ಸಂಗತಿ. ನಮ್ಮಲ್ಲಿನ ಲಿಂಕ್ ಏ.ಆರ್.ಟಿ ಕೇಂದ್ರದಲ್ಲಿ ಪ್ರತಿ ತಿಂಗಳು ಐವತ್ತಕ್ಕೂ ಹೆಚ್ಚು ಜನ ಹೆಚ್.ಐ.ವಿ ಸೊಂಕಿತರು ಏ.ಆರ್.ಟಿ ಮಾತ್ರೆ ತೆಗೆದುಕೊಳ್ಳುತ್ತಿದ್ದು ಜನಸಾಮನ್ಯರಂತೆ ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ.
ಹೆಚ್.ಐ.ವಿ ಸೊಂಕಿತರೆಂದು ಯಾವುದೇ ಕಾರಣಕ್ಕೂ ಚಿಕಿತ್ಸೆ ನೀಡುವಿಕೆಯಲ್ಲಿ ಕಳಂಕ ತಾರತಮ್ಯ ಮಾಡುವಂತಿಲ್ಲ ಎಂದರು.
ಪವರ್ ಪಾಯಿಂಟ್ ಪ್ರಜೆಂಟೆಶನ್ ಮುಖಾಂತರ ಹೆಚ್.ಐ.ವಿ/ಏಡ್ಸ್ ಬಗ್ಗೆ ಮೂಲ ಮಾಹಿತಿ, ಸೊಂಕಿತರಿಗೆ ಹುಟ್ಟಿದ ಮಗುವಿನ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ, ಚಿಕಿತ್ಸೆ ನೀಡುವಾಗ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಚಿತ್ರ ಸಹಿತವಾಗಿ ಮಾಹಿತಿ ನೀಡಲಾಯಿತು.
ತರಬೇತಿ ಕಾರ್ಯಗಾರದಲ್ಲಿ ಶಸ್ತ್ರ ಚಿಕಿತ್ಸಕ ಡಾ ಮಂಜುನಾಥ ಶೆಟ್ಟಿ, ಚರ್ಮ ರೋಗ ತಜ್ಞ ಡಾ|| ಶಿವಾನಂದ ಹೆಗಡೆ, ಮೂಳೆ ತಜ್ಞ ಡಾ ರಮೇಶ ಗೌಡ, ಸ್ತ್ರೀ ರೋಗ ತಜ್ಞ ಡಾ|| ಕೃಷ್ಣಾ ಜಿ ಆಯುಷ ವೈದ್ಯ ಡಾ|| ಗುರುದತ್ತ ಕುಲಕರ್ಣಿ,ಸಹಾಯಕ ಆಡಳಿತಾಧಿಕಾರಿ ಶಶಿಕಲಾ ನಾಯ್ಕ, ಪ್ರಯೋಗಶಲಾ ತಂತ್ರಜ್ಞ ಉಮೇಶ ಮತ್ತು ಆರವತ್ತಕ್ಕೂ ಹೆಚ್ಚು ಆಸ್ಪತ್ರೆಯ ಸಿಬ್ಬಂದ್ದಿüಗಳು ಭಾಗವಹಿಸಿದ್ದರು. ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕಿಣಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದರು. ಐ.ಸಿ.ಟಿ.ಸಿ ಆಪ್ತಸಮಾಲೋಚಕರಾದ ವಿನಾಯಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು.
Leave a Comment