ಹೊನ್ನಾವರ ತಾಲೂಕಿನ ೨೪ ಗ್ರಾಮ ಪಂಚಾಯತಿಗೆ ಡಿಸೆಂಬರನಲ್ಲಿ ನಡೆದ ಚುನಾವಣೆಯಲ್ಲಿ ೩೨೨ ಸದಸ್ಯರು ಆಯ್ಕೆಯಾಗಿದ್ದರು. ಆಯ್ಕೆಯಾದ ಸದಸ್ಯರ ಸಮ್ಮುಖದಲ್ಲಿ ಜನವರಿ ೨೯ ರಂದು ಚುನಾವಣೆ ನಡೆದ ೨೪ ಹಾಗೂ ಚುನಾವಣೆ ನಡೆಯದ ೨ ಸ್ಥಾನ ಸೇರಿಸಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿ ಆದೇಶ ಜಾರಿಯಾಗಿತ್ತು. ಮೀಸಲಾತಿ ಸಮರ್ಪಕವಾಗಿಲ್ಲ ಮೂರು ಬಾರಿಯು ಸಾಮನ್ಯ ಬಂದಿದೆ. ಎಂದು ಸಭೆಯಲ್ಲಿಯೇ ಮಹಿಳಾ ಸದಸ್ಯೆ ಗೀತಾ ಹೆಗಡೆ ಪ್ರಶ್ನಿಸಿದ್ದರು. ಅಧಿಕಾರಿಗಳು ಸಮರ್ಪಕವಾಗಿದೆ ನ್ಯಾಯಲಾಯದ ಮೊರೆ ಹೊಗಬಹುದು ಎಂದು ಮೌಖಿಕವಾಗಿ ಹೇಳಿರುದರಿಂದ ನ್ಯಾಯಲಯದ ಮೆಟ್ಟಿಲೆರಿದ್ದರು. ಇದರಿಂದ ಉಳಿದವರಿಗೆ ಅನ್ಯಾಯವಾಗುತ್ತಿದೆ ಜಿಲ್ಲೆಯ ಪ್ರಬಲ ರಾಜಕಾರಣಿಗಳ ಒತ್ತಡದಿಂದ ಹೀಗೆ ಆಗಿದೆ ಮಾಧ್ಯಮದ ಮೂಲಕ ಅಸಮಧಾನ ತೋಡಿಕೊಂಡಿದ್ದರು. ಫೆಬ್ರವರಿ ೧೦ರಂದು ತಾಲೂಕಿನ ಎಲ್ಲಾ ೨೪ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಸಲು ೧೦ ಗಂಟೆಯಿಂದ ತಾಲೂಕ ಆಡಳಿತ ಸಜ್ಜಾಗಿತ್ತು. ಈ ಬೆನ್ನಲ್ಲೆ ನ್ಯಾಯಲಯ ಮಧ್ಯಾಹ್ನ ೩ ಗಂಟೆಯವರೆಗೆ ನವಿಲಗೋಣ ಪಂಚಾಯತ ಆಯ್ಕೆ ಪ್ರಕ್ರಿಯೆ ನಡೆಸದೆ ಇರುವಂತೆ ಆದೇಶ ಹೊರಡಿಸಿದೆ.ಇಂದು ನಡೆಯುವ ವಿಚಾರಣೆ ಬಳಿಕ ನವಿಲಗೋಣ ಪಂಚಾಯತಿಯ ಮೀಸಲಾತಿ ಪ್ರಕ್ರಿಯೆ ಅಂತಿಮವಾಗಲಿದ್ದು ನ್ಯಾಯಲಯದ ತಿರ್ಪು ಕೂತೂಹಲ ಮೂಡಿಸಿದೆ.
Leave a Comment