ಹೊನ್ನಾವರ: ತಾಲೂಕಿನ ಖರ್ವಾ ಪಂಚಾಯತ ಆಯ್ಕೆ ಸಂಭದ ಇರ್ವರ ಸದಸ್ಯರ ಅಪಹರಣವಾಗಿರುವುದು ನಿಜವಾಗಿದೆ ಎಂದು ಅಪಹರಣಕ್ಕೊಳಗಾಗಿದವರಲ್ಲಿ ಒರ್ವರಾದ ಇಬ್ರಾಹಿಂ ಇಸೂಬ್ ಸಾಬ್ ಸ್ಪಷ್ಟನೆ ನೀಡಿದ್ದಾರೆ. ಮತ್ತೊರ್ವ ಅವಿವಾಹಿತ ಮಹಿಳೆಯು ನಾಪತ್ತೆ ಪ್ರಕರಣ ಸಂಭದ ಈ ಹೇಳಿಕೆ ಪುಷ್ಟಿ ನೀಡಿದ್ದು, ಪೋಲಿಸರು ಕಾನುನು ಪಾಲನೆ ಮಾಡುತ್ತಿಲ್ಲ ಎಂದು ಇದೇ ಸಂಧರ್ಬದಲ್ಲಿ ಗಂಭೀರ ಆರೋಪ ಮಾಡಿದರು.
ತಾಲೂಕಿನ ಖರ್ವಾ ಕ್ರಾಸ್ ಬಳಿ ಕಾರಿನನ್ನು ನಿಲ್ಲಿಸಿ ಸಿನೀಮೀಯ ರೀತಿಯಲ್ಲಿ ಅಪಹರಣ ಮಾಡಲಾಗಿದೆ ಎಂದು ಘಟನೆ ವಿವರವನ್ನು ವಿವರಿಸಿದ ಇಬ್ರಾಹಿಂ ಇಸೂಬ್ ಸಾಬ್ ಆರಂಭದಿAದಲೂ ೨ ಲಕ್ಷ ನೀಡುತ್ತೇನೆ ಎಂದು ಆಮಿಷ ಒಡ್ಡಿದ್ದರು. ೩ ಜನ ಅಪಹರಣ ಮಾಡುವ ಉದ್ದೇಶವಾಗಿತ್ತು. ಆದರೆ, ಇರ್ವರನ್ನು ಅಪಹರಣ ಮಾಡಿದ್ದಾರೆ. ತಡರಾತ್ರಿ ೧೧ ಗಂಟೆಯವರೆಗೆ ಸಿದ್ದಾಪುರದ ಬಲೀ ಇಟ್ಟು ನಂತರ ಅಘನಾಶಿನಿ ರೆಸಾರ್ಟಗೆ ಕರೆತಂದರು. ಇರ್ವರನ್ನು ಬೇರೆ ವಾಹನದಲ್ಲಿ ಕರೆದುಕೊಂಡು ಹೋಗಿರದರಿಂದ ಮತ್ತೊರ್ವರ ಮಾಹಿತಿ ಇಲ್ಲ. ನನ್ನ ಕರೆದೊಯ್ಯಲು ಅಶೋಕ ಪರಮೇಶ್ವರ ಭಟ್ಟ, ಅಜಿತ ತಿಮ್ಮಪ್ಪ ನಾಯ್ಕ, ರಮೇಶ ಮಾದೇವ ನಾಯ್ಕ, ಕಾಂತಪ್ಪ ರಾಘವೇಂದ್ರ ಶಾನಭಾಗ ಹಾಗೂ ಇತರರು ಇದ್ದರು. ನಿನ್ನೆ ರಾತ್ರಿ ೮ ಗಂಟೆಯವರೆಗೆ ಇದ್ದ ಅಶೋಕ ಭಟ್ ನಂತರ ಇಲ್ಲ. ಇಂದು ವಾಪಸ್ಸು ಬಿಡಲು ಆತನು ಬಂದಿದ್ದಾನೆ. ಪೋಲಿಸರ ತನಿಖೆ ಯಾವ ರೀತಿ ಮಾಡಿದರು ಗೊತ್ತಿಲ್ಲ ಅಪಹರಣಕಾರರು ಎಲ್ಲರು ಮೊಬೈಲ್ ಬಳಸುತ್ತಿದ್ದಾರೆ. ನಾನು ಠಾಣಿಗೆ ಹೋಗಿ ಎಲ್ಲ ವಿಷಯವನ್ನು ಹೇಳುತ್ತೇನೆ ನನ್ನ ಮತದಾನದ ಹಕ್ಕು ಕಸಿದವರಿಗೆ ನನ್ನ ಒಪ್ಪಿಗೆ ಇಲ್ಲದೆ ಒತ್ತೆಯಾಳುವಾಗಿ ಇಟ್ಟಿರುದಕ್ಕೆ ಕಾನುನು ರೀತಿಯಲ್ಲಿ ತಕ್ಕ ಶಿಕ್ಷೆ ಆಗಲೇಬೇಕು ಎಂದು ಘಟನೆಯ ವಿವರವನ್ನು ನೀಡಿದರು.
Leave a Comment