ಹೊನ್ನಾವರ: ತಾಲೂಕ ಕೇಂದ್ರದಿAದ ೧೦ಕಿಮೀ ದೂರ ಸಹ್ಯಾದ್ರಿ ಬೆಟ್ಟದ ತುದಿಯಲ್ಲಿ ಪ್ರಕೃತಿ ಸೌಂದರ್ಯದ ಮುಧ್ಯೆ ನೆಲೆಯುರಿರುವ ಕರಿಕಾನ ಪರಮೇಶ್ವರಿ ಸನ್ನಿದಿಯಲ್ಲಿ ಬೆಳದಿಂಗಳ ಸಂಗೀತೊತ್ಸವ ಫೆಬ್ರವರಿ ೨೭ರಂದು ನಡೆಯಲಿದೆ.
ನಾದಮಧವ ರಾಷ್ಟಿçÃಯ ಪ್ರಶಶ್ತಿçಯನ್ನು ಹಿರಿಯ ಸಂಗೀತ ಕಲಾವಿದ ಎಸ್.ಎಂ.ಭಟ್ ಕಟ್ಟಿಗೆ ಇವರಿಗೆ ಅವಿನಾಶ ಹೆಬ್ಬಾರ ಸ್ಮರಣೆಯ ಯುವ ಪುರಸ್ಕಾರವನ್ನು ಅನಿರುದ್ದ ಐತಾಳ ಇವರಿಗೆ ಪ್ರಧಾನ ಮಾಡಲಾಗುವುದು.
ಸಂಜೆ ೭:೧೫ಕ್ಕೆ ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಶಾಸಕ ಕುಮಾರ ಬಂಗಾರಪ್ಪ ಅತಿಥಿಯಾಗಿ ಪಾಲ್ಗೊಳ್ಳುವರು. ಡಾ. ಎಂ.ಜಿ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಷ್ಣು ಭಟ್ ವಂದೂರು, ಕರಿಕಾನಮ್ಮ ದೇವಾಲಯದ ಅರ್ಚಕರಾದ ಸುಬ್ರಹ್ಮಣ್ಯ ಭಟ್ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಶ್ರೀಧರ ಹೆಗಡೆ ಕಲ್ಬಾಗ, ರೇಖಾ ದಿನೇಶ, ವಸುಂಧರಾ ಭಟ್, ಸುಪ್ರೀಯಾ ಹೆಗಡೆ, ವಿನಾಯಕ ಹೆಗಡೆ, ಲತಾ ಗುರುರಾಜ, ಅನಿರುದ್ದ ಐತಾಳ, ಕೇದಾರ ಮರಬಂತೆ ಗಾಯನ ಪ್ರಸುತ್ತ ಪಡಿಸಲಿದ್ದಾರೆ. ಪ್ರಕಾಶ ಹೆಗಡೆ ಹಾರ್ಮೊನಿಯಂ,ರಾಮಕೃಷ್ಣ ಹೆಗಡೆ ಸಿತಾರ, ಸುಧೀರ ಹೆಗಡೆ ಬಾನ್ಸೂರಿ, ಗಣಪತಿ ಹೆಗಡೆ, ಮತ್ತು ಅಕ್ಷಯ ಹೆಗಡೆ ತಬಲಾ ಜುಗಲ್ಬಂದಿ, ಅಜಯ್ ಹೆಗಡೆ ಮತ್ತು ಹೇಮಂತ ಭಟ್ ಹಾರ್ಮೊನಿಯಂ ಜುಗಲ್ಬಂದಿ ನುಡಿಸುವರು.
ಗೌರೀಶ ಯಾಜಿ, ಹರಿಶ್ವಂದ್ರ ನಾಯ್ಕ ಹಾಮೋನಿಯಂ ಸಾಥ್ ನೀಡಲಿದ್ದು, ರಾಜು ಹೆಬ್ಬಾರ,ಭಾರತೀ ದೇವರಾಜ, ಅಕ್ಷಯ್ ಭಟ್ ಮಧು ಕುಡಲ್ಕರ್, ಎಂ.ಎಸ್ ಭಟ್, ಶರದ್ ಹೆಗಡೆ ತಬಲಾ ಸಾಥ್ ನೀಡಲಿದ್ದಾರೆ. ಕೋರೋನಾ ಸುರಕ್ಷತಾ ಕ್ರಮದಿಂದ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ಪ್ರೀಯರು ಆಗಮಿಸಿ ಕಾರ್ಯಕ್ರಮ ಯಶ್ವಸಿಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
Leave a Comment