ಹೊನ್ನಾವರ: ಕರುಣೆ ಇಲ್ಲದವನಿಗೆ ಕಾವ್ಯ ಒಲಿಯುವುದಿಲ್ಲ. ಕವಿ ಕಣ್ಣೀರಿನ ಹಿಂದೆ ಸಾಗಬೇಕು. ಕರುಣೆ ಮತ್ತು ಕಣ್ಣೀರಿಲ್ಲದ ಮನುಷ್ಯ ಕವಿ ಆಗಲಾರ. ಕವಿತೆ ಒಂದು ಅನುಭವ. ಮೌನದ ಓದಿನ ಮೂಲಕ ಅದು ಅರ್ಥವಂತಿಕೆ ಮತ್ತು ದರ್ಶನವನ್ನು ನೀಡುತ್ತದೆ ಎಂದು ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ನುಡಿದರು.
ಅವರು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಭಿನವ ಬೆಂಗಳೂರು ಸಹಯೋಗದಲ್ಲಿ ಪಟ್ಟಣದ ಎಸ್ಡಿಎಂ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಪ್ರೊ.ನಾಗರಾಜ ಹೆಗಡೆ ಅಪಗಾಲ ಅವರ ಸಣ್ಣಬೆಂಕಿ’ ಕವನ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಪರಿಚಯಿಸಿ ಮಾತನಾಡಿದರು. ನಾಗರಾಜ ಹೆಗಡೆ ಅಪಗಾಲ ಸಣ್ಣಬೆಂಕಿಯಂತೆ ಎಚ್ಚರ ಮತ್ತು ಬೆಳಕು ಮೂಡಿಸುತ್ತಿದ್ದಾರೆ. ಅವರ ಕವನಗಳು ತಣ್ಣನೆಯ ದೀಪವಿದ್ದಂತೆ ಆದರೆ ಉರಿ ಇಲ್ಲ. ಅವರ ಎಲ್ಲಾ ಕವಿತೆಗಳು ಸುಖೋಷ್ಣ ಅನುಭವದ ಕವಿತೆಗಳಾಗಿವೆ ಎಂದು ಅಭಿಪ್ರಾಯಪಟ್ಟರು. ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಕಥೆಗಾರ ಡಾ.ಶ್ರೀಧರ ಬಳಗಾರ, ನಮ್ಮ ಹೃದಯವನ್ನು ಹದ ಮಾಡುವುದೇ ಕಾವ್ಯ. ಕವಿಯಾಗುವವನಿಗೆ ಸೂಕ್ಷ್ಮತೆ, ಜಾಣತನ, ವಿಸ್ಮಯ, ಹೊಸತನ, ಮುಗ್ಧತೆ, ಪ್ರಬುದ್ಧತೆ ಎಲ್ಲವೂ ಬೇಕು. ನಾಗರಾಜ ಹೆಗಡೆಯವರಲ್ಲಿ ಇವೆಲ್ಲವೂ ಮುಪ್ಪರಿಗೊಂಡಿವೆ. ಅವರ ಕವಿತೆಗಳಲ್ಲಿ ಅಪಾರವಾದ ಅನುಕಂಪವಿದೆ. ಅದರ ಜೊತೆಗೆ ಸಣ್ಣಬೆಂಕಿಯಂತಹ ಕೋಪವೂ ಇರಬೇಕು ಎಂದರು. ಕಾವ್ಯಾನುಸಂಧಾನದಲ್ಲಿ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್, ಡಾ.ಚೈತ್ರ ಹೆಗಡೆ ಕಣ್ಣಿ, ಡಾ.ಸಂಧ್ಯಾ ಹೆಗಡೆ ದೊಡ್ಡಹೊಂಡ, ಪ್ರೊ.ಪ್ರಶಾಂತ ಮೂಡಲಮನೆ
ಸಣ್ಣಬೆಂಕಿ’ ಕವನ ಸಂಕಲನದ ಕುರಿತು ವಿಮರ್ಶಿಸಿ ಮಾತನಾಡಿದರು, ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಪಿ.ಚಂದ್ರಿಕಾ ಮತ್ತು ನಾಗರಾಜ ಹೆಗಡೆ ಅಪಗಾಲ ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ಸ್ವಾಗತಿಸಿದರು. ಶಶಿಧರ ದೇವಾಡಿಗ ವಂದಿಸಿದರು. ಶಂಕರ U್ಷಡ ಗುಣವಚಿತೆ ನಿರೂಪಿಸಿದರು.
Leave a Comment