ಹೊನ್ನಾವರ: ಉಪನ್ಯಾಸಕಿ ರಾಜೀವಿ ನಾಯಕ ಇವರಿಗೆ ಕೊಯಿಮತ್ತೂರು ಬಾರತೀಯಾರ್ ವಿಶ್ವ ವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಸ್ಥಳೀಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಾಗೂ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯ ಹಾಗೂ ಪ್ರೆಸಿಡೆನ್ಸಿ ಕಾಲೇಜು ಬೆಂಗಳೂರುನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದ ಇವರು ಸ್ಥಳೀಯ ದುರ್ಗಾಕೇರಿ ನಿವಾಸಿ ಆಗಿದ್ದಾರೆ.
ಇವರ ರೋಲ್ ಆಫ್ ಪಬ್ಲಿಕ್ ಸೆಕ್ಟರ್, ಪ್ರೈವೇಟ್ ಸೆಕ್ಟರ್, ಎಂಡ್ ರಿಜನಲ್ ರೂರಲ್ ಬ್ಯಾಂಕ್ ಇನ್ ವಿಮೆನ್ ಎಂಪವರ್ಮೆಂಟ್ (ಮಹಿಳಾ ಸಬಲಿಕರಣದಲ್ಲಿ ಸಾರ್ವಜನಿಕ ಬ್ಯಾಂಕ್, ಖಾಸಗಿ ಬ್ಯಾಂಕ್ ಹಾಗೂ ಗ್ರಾಮೀಣ ಬ್ಯಾಂಕ್ಗಳ ಪಾತ್ರ) ಎಂಬ ವಿಷಯದ ಮೇಲೆ ಅವರು ಮಹಾ ಪ್ರಬಂಧವನ್ನು ಕೊಯಿಮತ್ತೂರು ಬಾರತೀಯಾರ್ ವಿಶ್ವವಿದ್ಯಾನಿಲಕ್ಕೆ ಸಲ್ಲಿಸಿದ್ದರು. ಅವರ ಸಂಶೋಧನಾ ಪ್ರಬಂಧಕ್ಕೆ ಸ್ಥಳೀಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕ ಡಾ|| ವಿ.ಎಮ್ ಭಂಡಾರಿ ಗೈಡ ಆಗಿ ಸಹಕರಿಸಿದ್ದರು. ರಾಜೀವಿ ನಾಯಕ್ ಇವರಿಗೆ ಪಿ.ಎಚ್. ಡಿ ಪ್ರಧಾನ ಮಾಡಿದಕ್ಕೆ ವಿದ್ಯಾರ್ಥಿಗಳು ಹಾಗೂ ಬಂಧು ಬಳಗ ಸಂತಸ ವ್ಯಕ್ತಪಡಿಸಿದ.
Leave a Comment