ಹೊನ್ನಾವರ: ಬಿಜೆಪಿ ಯುವಮೋರ್ಚಾ ಘಟಕದ ಹೊನ್ನಾವರ ಇವರ ವತಿಯಿಂದ ಸ್ವಾತಂತ್ರö್ಯ ಹೋರಾಗಾರರ ಬಲಿದಾನ ದಿವಸ್ ಅಂಗವಾಗಿ ಪಟ್ಟಣದ ದಂಡಿನದುರ್ಗಾ ದೇವಾಲಯದಿಂದ ಶರಾವತಿ ವೃತ್ತದವರೆಗೆ ಪಂಜಿನ ಮೆರವಣೆಗೆ ಹಮ್ಮಿಕೊಳ್ಳಲಾಗಿತ್ತ
ಯುವಮೋರ್ಚಾ ಅಧ್ಯಕ್ಷ ಸಚೀನ ಶೇಟ್ ದಿಕ್ಸೂಚಿ ಭಾಷಣದಲ್ಲಿ ನಮ್ಮ ದೇಶಕ್ಕಾಗಿ ಹಲವು ಮಹಾನ್ ನಾಯಕರು ಪ್ರಾಣ ತ್ಯಾಗಮಾಡಿದ್ದಾರೆ. ಅವರ ಸಂಸ್ಮರಣೆಯಲ್ಲಿ ನಡೆಸಲು ಈ ದಿನವನ್ನು ದೇಶದ್ಯಂತ ಆಚರಿಸುತ್ತಿದ್ದು,
ಈ ಹಿನ್ನಲೆಯಲ್ಲಿ ಹೊನ್ನಾವರದಲ್ಲಿ ಗೌರವ ನಮನ ಸಲ್ಲಿಸಲು ಪಂಜಿನ ಮೆರವಣೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬಲಿದಾನ್ ದಿವಸ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಶಿವರಾಜ ಮೇಸ್ತ, ಸದಸ್ಯ ವಿಜಯ ಕಾಮತ್, ವಿವಿಧ ಸಂಘಟನೆಯ ಪ್ರಮುಖರಾದ ಸಂಜು ಶೇಟ್, ಉಮೇಶ ಮೇಸ್ತ, ಯುವಮೊರ್ಚಾ ಜಿಲ್ಲಾ ಕಾರ್ಯಕರಣೆ ಸದಸ್ಯರಾದ ಶ್ರೀಧರ ನಾಯ್ಕ ಮಂಕಿ, ಶಬರೀಶ ನಾಯ್ಕ, ಘಟಕದ ಪ್ರಮುಖರಾದ ಕೇಶವ ಗೌಡ, ಕೃಷ್ಣ ಜೋಶಿ, ಶಿವಾನಂದ ಮರಾಠಿ, ಸಂದೇಶ ನಾಯ್ಕ, ವೇಣುಗೋಪಾಲ ಹಾಡಗೇರಿ, ಹರಿದಾಸ ಪ್ರಭು ಉಪಸ್ಥಿತರಿದ್ದರು.
Leave a Comment