ಹೊನ್ನಾವರ: ಭಾರತ ರಾಷ್ಟ್ರಕ್ಕೆ ರಾಮನೇ ಚಕ್ರವರ್ತಿ. ಭಾರತೀಯರೆಲ್ಲರೂ ಶ್ರೀರಾಮನಿಗೆ ಸೇರಿದವರು. ಎಲ್ಲರೂ ರಾಮನ ಸೇವಕರಾಗಿದ್ದು ಅದುವೇ ಸುಯೋಗ ಎಂದು ಶ್ರೀ ಶ್ರೀ ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನುಡಿದರು.
ಶ್ರೀಗಳು ತಾಲೂಕಿನ ಯಕ್ಷಕಾಶಿ ಶ್ರೀಮುಖ್ಯಪ್ರಾಣ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ಶ್ರೀರಾಮ್ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಅಭಿನಂದನೆ ಹಾಗೂ ಸಂಘ ಕಾರ್ಯ ಕುರಿತು ಪರಿಚಯ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶಿರ್ವದಿಸಿದರು. ಹಿಂದೂ ಧರ್ಮದಲ್ಲಿ ಕಲೆ, ಸಂಸ್ಕೃತಿ ಉಳಿದಿದೆ ಎಂದರೆ ಅದು ದೇವಮಂದಿರಗಳಿಂದ. ಅಯೋಧ್ಯೆ ಶ್ರೀರಾಮ್ ಮಂದಿರ ಕಾರ್ಯದಲ್ಲಿ ಭಾಗಿಯಾಗಲು ಸಮಸ್ತ ಹಿಂದೂ ಸಮಾಜಕ್ಕೆ ಅವಕಾಶವಿದ್ದು ಈ ಮಹತ್ತರ್ ಕಾರ್ಯದಲ್ಲಿ ಕೈಜೋಡಿಸಿ ಎಂದು ಕರೆ ನೀಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕರಾದ ಹನುಮಂತ ಶಾನಭಾಗ ಮಾತನಾಡಿ ಅಯೋಧ್ಯೆ ಶ್ರೀರಾಮ್ ಮಂದಿರ ಕಾರ್ಯದಲ್ಲಿ ದೇಶದ ಪ್ರತಿಯೊಂದು ಹಿಂದೂಗಳ ಮನೆ ಮನ ತಲುಪುವ ಕಾರ್ಯವಾಗಿದೆ. ಈ ನಿಮಿತ್ತ ಹಿಂದೂ ಸಮಾಜದ ಬಲ ಹೆಚ್ಚಿದೆ. ಮಂದಿರ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರೂ ಪ್ರತಿನಿತ್ಯ ಹಳ್ಳಿ ಹಳ್ಳಿಗಳಲ್ಲಿ ಶಾಖಾ ಕಾರ್ಯ ಪ್ರಾರಂಭ ಮಾಡಿ ಎಲ್ಲರಲ್ಲೂ ಜಾಗ್ರತೆಗೊಳಿಸುವ ಕೆಲಸ ಆಗಬೇಕಾಗಿದೆ ಎಂದರು.
ವಕ್ತಾರರಾಗಿ ಸಂಘದ ವಿಭಾಗ ವ್ಯವಸ್ಥಾ ಪ್ರಮುಖ ಡಾ.ಸುರೇಶ ಹೆಗಡೆ ಮಾತನಾಡಿ ಸಂಘ ಯಾವ ಉದ್ದೇಶಕ್ಕಾಗಿ 95 ವರ್ಷಗಳಿಂದ ತಪಸ್ಸು ಮಾಡಿತ್ತೋ ಅದು ಮಂದಿರ ಕಾರ್ಯದ ಅಭಿಯಾನದ ಮೂಲಕ ಪ್ರಕಟಿಕರಣಗೊಂಡಿದ್ದು, ಸಜ್ಜನ್ ಶಕ್ತಿ ಎದ್ದು ನಿಂತಿದೆ. ಸಂಘ ಮಂದಿರ ಕಾರ್ಯದೊಂದಿಗೆ ದೇವರ ಅನುಗ್ರಹ ಪಡೆಯಲು ಅವಕಾಶ ಕಲ್ಪಿಸಿದೆ. ಇದು ಹಿಂದೂಗಳ ಹೆಮ್ಮೆಯ ಪ್ರತೀಕ ಎಂದರು. ಸಚಿನ್ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿನ್ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನದ ಮೋಕ್ತೇಸರ್ ವೆಂಕಟೇಶ ಕೃಷ್ಣ ಭಟ್ ಉಪಸ್ಥಿತರಿದ್ದರು. ವಿಶ್ವನಾಥ ನಾಯಕ್ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ಶ್ರೀದೇವರಿಗೆ ಪೂಜೆ ನಂತರ ರಂಗಸ್ಥಳದಲ್ಲಿ ಯಕ್ಷಗಾನ ವೀಕ್ಷಿಸಿದ ರಾಘವೇಶ್ವರ ಭಾರತೀ ಶ್ರೀಗಳು ಸಂತಸಪಟ್ಟರು.
Leave a Comment