ಹೊನ್ನಾವರ: ಪಟ್ಟಣ ವ್ಯಾಪ್ತಿಯ ಬಹುನಿರಿಕ್ಷೀತ ಶರಾವತಿ ಕುಡಿಯುವ ನೀರಿನ ಘಟಕ ನಿರ್ಮಣ ಕಾಮಗಾರಿಯ ಸ್ಥಳ ಪರೀಶೀಲನೆ ನಡೆಸಿ ಕಾಮಗಾರಿಯನ್ನು ತ್ವರಿತವಾಗಿ ಮುಂದುವರೆಸುವಂತೆ ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪ್ರಬಾತನಗರದಲ್ಲಿ ಪಟ್ಟಣ ವ್ಯಾಪ್ತಿಗೆ ಕುಡಿಯುವ ನೀರು ಸೇಖರಣೆ ಮಾಡಲು ಎರಡು ಬೃಹತ್ ಟ್ಯಾಂಕ್ ನಿರ್ಮಾಣ ಕಾಮಗಾರಿಯನ್ನು ವಿಕ್ಷಿಸಿದ ಬಳಿಕ ಕಾಮಗಾರಿಯ ನಿದಾನಗತಿಯ ಕಾರಣವನ್ನು ಕೇಳಿದರು. ಮರಳು ಹಾಗೂ ಜಲ್ಲಿ ಸಮಸ್ಯೆ ಬಗ್ಗೆ ತಿಳಿಸಿದಾಗ ಈ ಸಮಸ್ಯೆ ಬಗೆಹರಿಸಲು ಉಸ್ತುವಾರಿ ಸಚೀವರಾದ ಹೆಬ್ಬಾರ ಹಾಊ ಮುರುಗೇಶ ನಿರಾಣಿಯವರ ಗಮನಕ್ಕೆ ತರುವುದಾಗಿ ತಿಳಿಸಿದರು. ಅಲ್ಲದೇ ಉತ್ತಮ ಗುಣಮಟ್ಟದಿಂದ ಕೂಡಿರುವ ಟ್ಯಾಂಕ್ ನಿರ್ಮಿಸುವ ಜೊತೆ ಇಲ್ಲಿಯ ವಾತವರಣ ಅರಿತು ಕೆಲಸ ವೇಗ ಪಡೆದುಕೊಳ್ಳುವಂತೆ ಸೂಚಿಸಿದರು.
ನಂತರ ಮಾಧ್ಯಮದರೊಂದಿಗೆ ಮಾತನಾಡಿ ಶರಾವತಿ ಕುಡಿಯುವ ನೀರಿನ ಯೋಜನೆ ಕನಸಿನ ಯೋಜನೆ ಆಗಿದ್ದು ಶಿಘ್ರವಾಗಿ ಕಾಮಗಾರಿ ನಡೆಯಬೇಕಿದೆ. ನನ್ನ ಕ್ಷೇತ್ರವ್ಯಾಪ್ತಿಯ 4 ರಿಂದ 5 ತಿಂಗಳ ಮಳೆ ಅಬ್ಬರದಿಂದ ಕೆಲಸಕ್ಕೆ ವಿಳಂಬವಾಗಲಿದ್ದು ಈಗ ಮಳೆಗಾಲದ ಪೂರ್ವ ನಡೆಯಬೇಕಾದ ಕಾಮಗಾರಿಯನ್ನು ಮಾಡಬೇಕಾಗಿದೆ. ಸರ್ಕಾರದ ಕೆಲಸವಾಗಿರುದರಿಂದ ಜಲ್ಲಿ ಹಾಗೂ ಮರಳಿನ ಬಗ್ಗೆ ಪ್ರತೈಕವಾಗಿ ಅನುಮತಿ ನೀಡುವಂತೆ ಸಚೀವರನ್ನು ಹಾಗೂ ಅಧಿಕಾರಿಗಳನ್ನು ಕೋರಿದಾಗ ಸಮ್ಮತಿ ಸೂಚಿಸಿದ್ದಾರೆ. ಇದರಿಂದ ಕಾಮಗಾರಿ ಇನ್ನಷ್ಟು ವೇಗವಾಗಿ ನಡೆಯಲಿದೆ. ಅಲ್ಲದೇ ಪ್ರತಿವಾರವು ಈ ಸ್ಥಳಕ್ಕೆ ಬಂದು ಗುಣಮಟ್ಟ ವಿಕ್ಷಿಸಲಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ ಉಪಾಧ್ಯಕ್ಷೆ ಮೇಧಾ ನಾಯ್ಕ, ಸದಸ್ಯರಾದ ವಿಜಯ ಕಾಮತ್, ಮಹೇಶ ಮೇಸ್ತಾ, ಮುಖಂಡರಾದ ಎಮ್.ಎಸ್.ಹೆಗಡೆ, ಶ್ರೀಕಾಂತ ಮೊಗೇರ್, ವಿಶ್ವನಾಥ ನಾಯಕ, ದತಾತ್ರೆಯ ಮೇಸ್ತಾ, ಉಮೇಶ ಸಾರಂಗ್, ಉಲ್ಲಾಸ್ ನಾಯ್ಕ ರವಿ ನಾಯ್ಕ, ,ನಾರಾಯಣ ಹೆಗಡೆ, ಇಲಾಖೆಯ ಅಧಿಕಾರಿಗಳಾಧ ಶಶಿಧರ ಹೆಗಡೆ, ಎಸ್.ಪಿ.ಬಾಂದೇಕರ್, ಇಂಜನಿಯರ್ ವೆಂಕಟೇಶ ದೇಸಾಯಿ, ಹೊನ್ನಾವರ ಸಿ.ಪಿ.ಐ ಶ್ರೀಧರ.ಎಸ್.ಆರ್ ಮುಂತಾದವರು ಇದ್ದರು.
Leave a Comment