ಕೋವಿಡ್ ಎರಡನೇ ಅಲೆ ಎಲ್ಲ ಭಾಗಗಳಲ್ಲಿ ತೀವ್ರವಾಗಿ ಪಸರಿಸುತ್ತಿರುವ ಈ ಕ್ಲಿಷ್ಟಕರ ಸಂದರ್ಭದಲ್ಲಿ ನಾವಾಗಿಯೇ ಮೈಮೇಲೆ ಬಿದ್ದು ರೋಗವನ್ನು ಮನೆಬಾಗಿಲಿಗೆ ಆವ್ಹಾನಿಸಿ ಅಪಾಯ ತಂದಿಟ್ಟುಕೊಳ್ಳುವ ಬದಲಿಗೆ -ಕೆಲವು ದಿನಗಳಮಟ್ಟಿಗಾದರೂ ನಾಗರಿಕರು ಜನತಾಕರ್ಫ್ಯು ಮತ್ತು ಕೋವಿಡ್ ನಿಯಮಗಳನ್ನು ಪಾಲಿಸಿ,ಕೋವಿಡ್ ರೋಗದ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಎನ್. ಎ. ಎಫ್. ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಕೊಚರೇಕರ,ನಾಗರಿಕರಲ್ಲಿ ಕೋರಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ನಮ್ಮ ಜಿಲ್ಲೆಯೂ ಸೇರಿದಂತೆ ರಾಜ್ಯಾದ್ಯಂತ ರೂಪಾಂತರಗೊಂಡಿರುವ ಕೊರೊನಾ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿದ್ದು ಅಪಾಯಕಾರಿ ಸ್ಥಿತಿ ಇರುವದರಿಂದ ವಿಳಂಬವಾಗಿಯಾದರೂ ಸರ್ಕಾರ ಜನರಸುರಕ್ಷತೆಗಾಗಿ ಈಗ ಕೆಲವು ವಿನಾಯಿತಿಯೊಂದಿಗೆ ಜನತಾಕರ್ಫ್ಯು ವಿಧಿಸಿದೆ.ಆದರೆ ಹಲವು ಕಡೆ ಜನತಾಕರ್ಫ್ಯು ಮತ್ತು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಜನಜಂಗುಳಿ ಸೇರುವದನ್ನು ಕಾಣುತ್ತಿದ್ದೇವೆ. ಜನರ ದೈನಂದಿನ ಅಗತ್ಯಗಳಿಗೆ ತೊಂದರೆ ಆಗಬಾರದು ಎನ್ನುವ ಸದುದ್ದೇಶದಿಂದ ನೀಡಿದ ಕೆಲ ರಿಯಾಯಿತಿ ಯನ್ನೇ ಕೆಲವು ಸಾರ್ವಜನಿಕರು ಮತ್ತು ಅಂಗಡಿಕಾರರು/ವಾಪಾರಸ್ತರು ತಮಗೆ ಬೇಕಾದ ಹಾಗೆ ಬಳಸಿಕೊಂಡು, ಕೋವಿಡ್ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಅನಗತ್ಯ ಜನಜಂಗುಳಿ ನಿರ್ಮಾಣಮಾಡಿ ಪರೋಕ್ಷವಾಗಿ ಕೋವಿಡ್ ರೋಗವನ್ನು ಹರಡಿಸುವಲ್ಲಿ ಕಾರಣೀಕರ್ತರಾಗುತ್ತಿದ್ದಾರೆ ಎನ್ನುವದನ್ನು ಮರೆಯಬಾರದು.ಜೂನ 15ರವರೆಗೆ ಜನರು ಎಚ್ಚರಿಕೆ ವಹಿಸದಿದ್ದರೆ ಮತ್ತು ಕೋವಿಡ್ ನಿಯಮಗಳನ್ನು ಪಾಲಿಸದಿದ್ದರೆ ಮುಂದೆ ಈಮಹಾಮಾರಿಯನ್ನು ನಿಯಂತ್ರಣಕ್ಕೆ ತರಲು ದೇಶದಲ್ಲಿ ಸಾಧ್ಯವಾಗದು ಮತ್ತು ಸಾವುಗಳನ್ನು ತಡೆಯಲು ತಮ್ಮಲ್ಲಿ ಮಂತ್ರದಂಡವೇನೂ ಇಲ್ಲ ಎನ್ನುವ ತಜ್ಞರ ಎಚ್ಚರಿಕೆಯನ್ನು ನಮ್ಮ ಎಲ್ಲ ನಾಗರಿಕರು ಗಂಭೀರವಾಗಿ ಪರಿಗಣಿಸಿ ಸಾಮಾಜಿಕ ಅಂತರ, ಮಾಸ್ಕ, ಮತ್ತು ಸ್ವಚ್ಛತೆ ಸಹಿತ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆಕೋವಿಡ್ ನಿಯಮಗಳನ್ನು ಪಾಲಿಸಿ, ಮೊದಲು ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಅವರು ನಾಗರಿಕರನ್ನು ಕೋರಿಕೊಂಡಿದ್ದಾರೆ.ಯಾರಿಗೂ ಕೂಡ ಕೋವಿಡ್ ಕುರಿತು ಹೆದರಿಕೆ ಬೇಡ.ಆದರೆ ಎಚ್ಚರ ತಪ್ಪಿದರೆ ಈ ರೋಗ ಮಾರಣಾಂತಿಕವೆನ್ನುವದನ್ನು ಎಲ್ಲರೂ ಗಮನಿಸಿ ಜಾಗೃತಿವಹಿಸಬೇಕಾಗಿದೆ. ಮಹಾಮಾರಿ ಕೋವಿಡ್ ಹೋರಾಟಲ್ಲಿ ಆರೋಗ್ಯ ಸಿಬ್ಬಂದಿಗಳು,ಮತ್ತು ಪೋಲೀಸರು ಸೇರಿದಂತೆ ವಿವಿಧ ಇಲಾಖೆಗಳ ಹಲವು ಸ್ವಯಂಸೇವಕವರ್ಗ ಈಗಾಗಲೇ ಸಾಕಷ್ಟು ದಣಿದಿದ್ದಾರೆ.ಅವರು ಕೂಡ ನಮ್ಮಂತೆ ಮನುಷ್ಯರು ಅವರಿಗೂ ಕೂಡ ಅವರದ್ದೇ ಆದ ಬದುಕು ಇರುತ್ತದೆ ಎನ್ನುವುದನ್ನು ನಾವು ಮರೆಯಬಾರದು ಎಂದಿರುವ ಅವರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಎಲ್ಲ ನಾಗರಿಕರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳವರು ಕೈಜೋಡಿಸಬೇಕು ಎಂದು ಮನವಿ ಮಾಡುವುದಾಗಿ ಅವರು ತಿಳಿಸಿದರು. ಕೋವಿಡ್ ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ಈ ಲಾಕ್ ಡೌನ್ ವರೆಗೆ ರಾಜ್ಯದ ಮೀನುಗಾರರು, ರೈತರು, ವಿವಿಧ ಬಗೆಯ ಶ್ರಮಿಕರು,ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ವ್ರತ್ತಿ/ಬೀದಿಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸುವ ಶ್ರಮಿಕರು, ಆಟೋ-ಟ್ಯಾಕ್ಷಿ ಚಾಲಕರು ಜೀವನ ನಿರ್ವಹಣೆಗಾಗಿ ಕಷ್ಟಪಡುತಿದ್ದಾರೆ.ಇಂತಹ ಎಲ್ಲ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಪತ್ತು ಪರಿಹಾರವಾಗಿ ತಲಾರೂ25,000 ರಂತೆ ತಾತ್ಕಾಲಿಕ ನಗದು ಪರಿಹಾರನೀಡಿ ಸರ್ಕಾರಗಳು ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸಮಾಡಬೇಕು ಎಂದು ಅವರು ಈಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
Leave a Comment