ಭಟ್ಕಳ: ಅಕ್ರಮವಾಗಿ ಸಾಗುÁನಿ ತುಂಡುಗಳನ್ನು ಸಾಗಿಸುತ್ತಿದ್ದಾಗ ಆರೋಪಿಗಳ ಅಲ್ಲಿನ ಸಾರ್ವಜನಿಕರು ಕಾರು ಹಿಡಿದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಭಟ್ಕಳ ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ವಾಹನ ಸಮೇತ ಸಾಗವಾನಿ ತುಂಡನ್ನು ವಶಕ್ಕೆ ಪಡೆದ ಘಟನೆ ಕೊಪ್ಪ ಪಂಚಾಯತ ವ್ಯಾಪ್ತಿಯ ಉತ್ತರಕೊಪ್ಪ ಅತ್ತಿಬಾರದ ಹೆಗ್ಗದ್ದೆಯ 8 ಕಿ.ಮೀ. ಒಳಗಡೆ ಗುರುವಾರ ನಡೆದಿದ್ದು ಆರೋಪಿಗಳು ಪರಾರಿಯಾಗಿದ್ದಾರೆ
.
ಅರಣ್ಯ ಇಲಾಖೆಯ ಹೊನ್ನಾವರದ ವಿಭಾಗದ ಭಟ್ಕಳ ವಲಯದ ಸಿಬ್ಬಂದಿಗಳು ರಾತ್ರಿ ಗಸ್ತು ತಿರುಗುತ್ತಿರುವಾಗ ಉತ್ತರಕೊಪ್ಪ ರಸ್ತೆ ಹತ್ತಿರ ಅತ್ತಿಬಾರ ಎಂಬಲ್ಲಿ ಯಾರೋ ಕಳ್ಳರು ಅಕ್ರಮವಾಗಿ ಸಾಗವಾನಿ ಮರ ಕಡಿದು ತುಂಡು ತಯಾರಿಸಿ 15.000 ರೂ. ಬೆಲೆಬಾಳುವ ತುಂಡು ಸಾಗಿಸುತ್ತಿದ್ದರು ಎಂಬ ಬಗ್ಗೆ ಅಲ್ಲಿನ ನಿವಾಸಿಗಳು ಮಾಹಿತಿ ನೀಡಿದ್ದರು. ಆದರೆ ಕಾರು ಪಂಚರ ಆಗಿದ್ದ ಕಾರಣ ವಾಹನ ಅಲ್ಲಿಯೇ ಇರುವುದನ್ನು ಕಂಡ ಸ್ಥಳಿಯರು ವಾಹನವನ್ನು ಹಿಡಿದು ತಮ್ಮ ವಶದಲ್ಲಿರಿಸಿಕೊಂಡಿದ್ದು ಅರಣ್ಯಾಧಿಕಾರಿಗಳಿಗೆ ಮಾಹಿತಿ ತಲುಪಿಸಿದ್ದಾರೆ.ಗುರುವಾರದಂದು ಮುಂಜಾನೆ ಸ್ಥಳಕ್ಕೆ ತೆರಳಿ ಸ್ಕಾರ್ಪಿಯೋ ಕಾರು ಮತ್ತು ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ 3 ಸಾಗುವಾನಿ ತುಂಡುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸುದರ್ಶನ್ ಆರ್. ಕೆ. ಹಾಗೂ ವಲಯ ಅರಣ್ಯಾಧಿಕಾರಿ ಸವಿತಾ ಆರ್. ದೇವಾಡಿಗ, ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಜಗದೀಶ್ ನಾಯ್ಕ ಹಾಗೂ ಮದುಕುಮಾರ ನಾಯ್ಕ, ಅರಣ್ಯ ರಕ್ಷಕ ಕಾಡಪ್ಪ, ವಾಹನ ಚಾಲಕ ಜೈದೀಪ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment