ಹೊನ್ನಾವರ : ಕೊರೊನಾ ವಿರುದ್ಧ ಹೋರಾಡುತ್ತಿರುವ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ, ಪೋಲೀಸ್ ಠಾಣೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಜೇನುತುಪ್ಪವನ್ನು ವಿತರಿಸಲಾಯಿತು.
ಜೇನುತುಪ್ಪ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಕೃತಿ ಸಹಜ ಶಕ್ತಿವರ್ಧಕ ಎಂದು ಗುರುತಿಸಲ್ಪಟ್ಟಿದ್ದು ಕೋವಿಡ್ ಅವಧಿಯಲ್ಲಿ ಅತಿಹೆಚ್ಚು ಜೇನುತುಪ್ಪ ಮಾರಾಟವಾಗುತ್ತದೆ. ಖಾದಿ ಕಮೀಶನ್ ನಿರ್ದೇಶನದಂತೆ ಇಂದು ಕೊರೊನಾ ವಾರಿಯರ್ಗಳಿಗೆ ಜೇನುಸಾಕುವವರ ಸಹಕಾರಿ ಸಂಘದ ಕಾರ್ಯನಿರ್ವಾಹಕ ಶ್ರೀಧರ ಹೆಗಡೆ ಮತ್ತು ಅಭಿವೃದ್ಧಿ ಅಧಿಕಾರಿ ರವಿ ಹೆಗಡೆ ಜೇನುತುಪ್ಪದ ಬಾಟಲಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ. ಉಷಾ ಹಾಸ್ಯಗಾರ, ತಾಲೂಕಾಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಜೇಶ ಕಿಣಿ, ಎಸ್ಐ ಸಾವಿತ್ರಿ ನಾಯ್ಕ ಮಾತನಾಡಿ ನಾವು ಮಾಡುವ ಕೆಲಸಕ್ಕೆ ಮೆಚ್ಚುಗೆಯ ಸೂಚಕವಾಗಿ ನಮ್ಮನ್ನು ಗುರುತಿಸಿ ಈ ಜೇನುತುಪ್ಪದ ಉಡುಗೊರೆ ನೀಡಿದಕ್ಕಾಗಿ ಸಂಘವನ್ನು ಅಭಿನಂದಿಸುವುದಾಗಿ ತಿಳಿಸಿದರು.
Leave a Comment