ಹೊನ್ನಾವರ; ತಾಲೂಕಿನ ಸರಳಗಿ ಸಮೀಪ ಬುಧವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಮನೆಯ ಸಮೀಪದ ಶರಾವತಿ ನದಿಗೆ ಈಜಲು ಹೋದ ಪ್ರಜ್ವಲ ಉಪ್ಪಾರ ಎನ್ನುವಾತನು ನಾಪತ್ತೆಯಾಗಿದ್ದನು.
ಸ್ಥಳಿಯರು, ಪೋಲಿಸರು ಅಗ್ನಿಶಾಮಕ ಸಿಬ್ಬಂದಿಗಳು ಬಾಲಕನ ಪತ್ತೆಗಾಗಿ ಇಡೀ ದಿನ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ. ನದಿಯಲ್ಲಿ ಮುಳುಗಿದ ಕೆಲವೇ ದೂರದಲ್ಲಿ ಮರಳು ತೆಗೆಯಲುಬಳಸುವ ಡಿಂಗಿಯ ಸಮೀಪ ಶವ ತೇಲುತ್ತಿತ್ತು. ಇದನ್ನು ಗಮನಿಸಿದ ಸ್ಥಳಿಯರು ಹೊನ್ನಾವರ ಪೋಲಿಸರಿಗೆ ಮಾಹಿತಿ ನೀಡಿ ಪೋಲಿಸ್ ಸಮ್ಮುಖದಲ್ಲೆ ಮೇಲಕ್ಕೆ ತರಲಾಗಿದೆ. ಶವವನ್ನು ಮರಣೊತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಈ ಸಂಭದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment