ಭಟ್ಕಳ: ಸಾಮಾನ್ಯ ಜ್ಞಾನವಿಲ್ಲದೆ ಮಳವಿ ಚಿಪ್ಪು ಹಾಕಿದಂತೆ ಕಾಮಗಾರಿ ಮಾಡುವುದಲ್ಲ ಮಾಜಿ ಶಾಸಕರೇ ಎಂದು ಶಾಸಕ ಸುನೀಲ ನಾಯ್ಕ ಮಾಜಿ ಶಾಸಕ ಮಂಕಾಳ ವೈದ್ಯರವರಿಗೆ ಮಂಗಳವಾರ ತಿರುಗೇಟು’ ನೀಡಿದ್ದಾರೆ .
ಚಂಡಮಾರುತದಿಂದ ಹಾನಿಯಾದ ಪ್ರದೇಶದ ಪುನರ್ ನಿರ್ಮಾಣ ಕಾಮಗಾರಿ 24 ಗಂಟೆಯಲ್ಲಿ ಮಾಡಲು ಸಾಧ್ಯವಿಲ್ಲ. ಕಾರಣ ವಿಪತ್ತು ನಿರ್ವಹಣೆ ಅಡಿಯಲ್ಲಿ ಕೆಲವೊಂದು ಮಾನದಂಡವಿದ್ದು ಅದರಂತೆ ಪುನರ್ ನಿರ್ಮಾಣದ ಕಾಮಗಾರಿ ನಡೆಯಲಿದೆ. ಇದ್ಯಾವುದರ ಸಾಮಾನ್ಯ ಜ್ಞಾನವಿಲ್ಲದ ಮಾಜಿ ಶಾಸಕರು ಮಳವಿ ಚಿಪ್ಪು ಕೆಲಸ ಮಾಡಿದಂತೆ ಕಾಮಗಾರಿ ಮಾಡಲು ನನಗೆ ಬರುವುದಿಲ್ಲ. ಸತತ 4 ದಿನದ ಚಂಡಮಾರುತದ ಅಬ್ಬರ ಇರುವ ವೇಳೆ ಯಾರು ಕಾಮಗಾರಿ ಮಾಡಿಸಲು ಸಾಧ್ಯವಿದೆ.
ಆದರೆ ಸಮಸ್ಯೆಯಾದ ಗಂಟೆಯೊಳಗೆ ಹಾನಿಯಾದ ಎಲ್ಲಾ ಪ್ರದೇಶಕ್ಕೆ ಭೇಟಿ ನೀಡಿ ಜನರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿವ ಕೆಲಸ ಮಾಡಿದ್ದೇನೆ. ತಾವೇನು ಜವಾಬ್ದಾರಿಯುತ ಮಾಜಿ ಶಾಸಕರಾಗಿ ಇಂತಹ ಸಂದರ್ಭಗಳಲ್ಲಿ ರಾಜಕೀಯದ ತೆವಳಿನ ಹೇಳಿಕೆ ನೀಡುವುದಲ್ಲ. ನಿಮ್ಮ ಸವಾಲುಗಳೆನ್ನಿದ್ದರು 2 ವರ್ಷದ ಬಳಿಕ ಬರುವ ಚುನಾವಣೆಯ ಅಖಾಡದಲ್ಲಿ ಎದುರು ನಿಲ್ಲಿ. ಜನರಿಗೆ ಶಾಶ್ವತ ಪರಿಹಾರದ ಕೆಲಸ ಮಾಡುವತ್ತ ನಾನು ಕಾರ್ಯ ಮಾಡುತ್ತಿದ್ದೇನೆ. ಜನರನ್ನು ದಾರಿತಪ್ಪಿಸುವ ಕೆಲಸ ಮಾಡಿದರೆ ನಿಮ್ಮ ವ್ಯಕ್ತಿತ್ವವೇ ಜನರ ಮುಂದೆ ಹರಾಜಾಗಲಿದೆ. ಸ್ವಲ್ಪ ಆದರು ಮಾನ ಮರ್ಯಾದೆ ಇಟ್ಟುಕೊಳ್ಳಿ ಎಂದು ಗುಡುಗಿದರು.
ಇನ್ನು ಈ ಭಾಗದ ಜಿಲ್ಲಾ ಪಂಚಾಯತ ಅಧ್ಯಕ್ಷರು, ತಾಲೂಕಾ ಪಂಚಾಯತ್ ಉಪಾಧ್ಯಕ್ಷರು ಸಹ ಅವರದ್ದೇ ಊರಿನ ಜನರಿಗೆ ಸಾಂತ್ವನ ಹೇಳಲು ಬಾರದ ಇವರು ಮಾಜಿ ಶಾಸಕರ ಜೊತೆಗೆ ನಿಂತು ಪೋಟೋ ತೆಗೆದುಕೊಳ್ಳುವ ಕೆಲಸ ಆಗಿದೆ ಹೊರತು ಮತ್ತೆನು ಮಾಡಿಲ್ಲ ಎಂದು ಆರೋಪಿಸಿದರು.
Leave a Comment