ಚಂಡಮಾರುತದಿಂದ ಹಾನಿಯಾದ ತಲಗೋಡ ಭಾಗದ ಸಮುದ್ರ ಅಲೆ ತಡೆಗೋಡೆ ಕಾಮಗಾರಿ ಶಾಸಕ ಸುನೀಲ ನಾಯ್ಕ ಮಂಗಳವಾರ ಬೆಳಿಗ್ಗೆ ಸ್ಥಳ ಭೇಟಿ ನೀಡಿ ಪರಿಶೀಲಿನೆ ನಡೆಸಿದರು
ಕಳೆದ 7-8 ದಿನದ ಹಿಂದೆ ತೌಕ್ತೆ ಚಂಡಮಾರುತದ ಪರಿಣಾಮ ತಾಲೂಕಿನ ಮಾವಿನಕುರ್ವೆ ತಲಗೋಡ, ಬಂದರ ಭಾಗದ ಸಮುದ್ರ ತೀರದ ರಸ್ತೆ, ಅಲೆ ತಡೆಗೋಡೆ ಹಾನಿಯಾಗಿದ್ದು, ಶುಕ್ರವಾರದಂದು ಹಾನಿ ಪ್ರದೇಶದಲ್ಲಿ ಪುನರ್ ನಿರ್ಮಾಣ ಕಾರ್ಯ ಆರಂಭಗೊಂಡಿದ್ದರ ಹಿನ್ನೆಲೆ ಶಾಸಕ ಸುನೀಲ ನಾಯ್ಕ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದರು.
ಚಂಡಮಾರುತದಿಂದ ಅತಿ ಹೆಚ್ಚು ಹಾನಿಗೊಳಗಾದ ಭಾಗದಲ್ಲಿ ತಾಲೂಕಿನ ಮಾವಿನಕುರ್ವೆ ತಲಗೋಡು ಸಮುದ್ರ ತೀರವಾಗಿದ್ದು, ಓಡಾಡಲು ಸಾಧ್ಯವಾಗದ ರೀತಿಯಲ್ಲಿ ರಸ್ತೆ, ತಡೆಗೋಡೆಗಳು ಕಿತ್ತು ಹೋಗಿದ್ದವು.
ಸ್ಥಳೀಯರ ಮಾರ್ಗದರ್ಶನದಂತೆ ಅವರಿಗೆ ಅನೂಕೂಲಕರ ರೀತಿಯಲ್ಲಿ ಅಲೆ ತಡೆಗೋಡೆ ಪುನರ್ ನಿರ್ಮಾಣ ಮಾಡುವಂತೆ ಕಾಮಗಾರಿ ಗುತ್ತಿಗೆದಾರರಿಗೆ ಸ್ಥಳಕ್ಕೆ ತೆರಳಿದ ಶಾಸಕ ಸುನೀಲ ನಾಯ್ಕ ಸೂಚಿಸಿದರು. ಸದ್ಯ ಜೆ.ಸಿ.ಬಿ., ಹಿಟಾಚಿ ಮೂಲಕ ತಡೆಗೋಡೆ ಕಲ್ಲನ್ನು ತೆಗೆದು ಸಮರ್ಪಕವಾಗಿ ಜೋಡಣೆ ಮಾಡುತ್ತಿದ್ದರೆ ಇನ್ನೊಂದೆಡೆ ಮರಳು ಚೀಲವನ್ನು ಕಾಂಕ್ರಿಟ್ ರಸ್ತೆಯ ತಳಭಾಗದಲ್ಲಿ ಶಾಶ್ವತವಾಗಿ ಭದ್ರವಾಗಿರುವಂತೆ ಜೋಡಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಸ್ಥಳ ಪರಿಶೀಲನೆ ವೇಳೆ ಕುದ್ದು ಮರಳು ಚೀಲದ ಅಳವಡಿಕೆಯನ್ನು ವೀಕ್ಷಿಸಿದ ಶಾಸಕ ಸುನೀಲ ನಾಯ್ಕ ಊರಿನ ಹಿರಿಯ ಮೀನುಗಾರ ಮುಖಂಡರ ಸೂಚನೆಯನ್ನು ಆಲಿಸಿದರು. ಹಾಗೂ ಅಳವಡಿಸಲಾಗುತ್ತಿರುವ ಮರಳು ಚೀಲವೂ ಮತ್ತೆ ಸಮಸ್ಯೆಯಾದಂತೆ ಕಾಮಗಾರಿ ನಡೆಸಬೇಕೆಂದು ಕಾಮಗಾರಿ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
Leave a Comment