ಭಟ್ಕಳ: ರೈಲ್ವೇಯಲ್ಲಿ ಮೊಬೈಲ್, ಪರ್ಸ ಕಳ್ಳತನ ಹಾಗೂ ಮಹಿಳೆಯರ ಸುರಕ್ಷತೆ ಮತ್ತ ರೈಲ್ವೇ ಹಳಿಗಳ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವುದು ನಮ್ಮ ಮುಖ್ಯ ಉದ್ದೇಶಗಳಾಗಿತ್ತವೆ ಎಂದು ಕರ್ನಾಟಕ ರೈಲ್ವೇ ಎ.ಡಿ.ಜಿ.ಪಿ. ಭಾಸ್ಕರ್ ರಾವ್ ಹೇಳಿದರು.
ಅವರು ಉಡುಪಿಯಿಂದ ರೈಲ್ವೇ ಸುರಕ್ಷತೆಯ ಕುರಿತು ಕೊಂಕಣ ರೈಲ್ವೇ ಮಾರ್ಗದಲ್ಲಿ ಬಂದ ಅವರು ಭಟ್ಕಳದ ಪ್ರವಾಸಿ ಬಂಗಲೆಯಲ್ಲಿ ಕೆಲ ಕಾಲ ತಂಗಿದ್ದ ಸಮಯ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕೆಲವೊಮ್ಮೆ ಕಿಡಿಗೇಡಿಗಳು ಚಲುಸುತ್ತಿರುವ ರೈಲಿಗೆ ಕಲೆಸೆಯುವ ಕೆಲಸವನ್ನು ಮಾಡುತ್ತಾರೆ. ಇದನ್ನೆಲ್ಲಾ ನಿಯಂತ್ರಿಸಲು ನಾವು ರೈಲ್ವೇಯಿಂದ ಸಾಮಾಜಿಕ ಚಳವಳಿಯೊಂದನ್ನು ಮಾಡಿದ್ದು ಗ್ರಾಮೀಣ ಭಾಗದಲ್ಲಿ ಜನರನ್ನು ಜಾಗೃತಗೊಳಿಸಿ ರೈಲ್ವೇ ಹಳಿಯ ಸುರಕ್ಷತೆಯನ್ನು ನೋಡಿಕೊಳ್ಳುವಂತೆ ಕೋರುವುದು. ಅಲ್ಲದೇ ರೈಲ್ವೇ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ತಡೆಯುವುದು ಇತ್ಯಾದಿ ಈ ನಮ್ಮ ಸಮಾಜಿಕ ಕಳಕಳಿಯ ತಂಡ ಮಾಡುತ್ತಿದ್ದು ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು.
ರೈಲ್ವೇ ದೃಷ್ಟಿಯಿಂದ ಭದ್ರತೆ ಬಹಳ ಮುಖ್ಯವಾಗಿದೆ. ಈ ಭಾಗದಲ್ಲಿ ಹಲವಾರು ಸುರಂಗ ಮಾರ್ಗಗಳು ಹಾದು ಹೋಗಿವೆ, ಅಲ್ಲದೇ ನಕ್ಷಲ್ ಪ್ರದೇಶದಲ್ಲಿ ಕೂಡಾ ನಮ್ಮ ರೈಲ್ವೇ ಹಾದು ಹೋಗಿದ್ದು ಈ ಭಾಗದಲ್ಲಿ ಕೈಗೊಳ್ಳಬೇಕಾದ ಹೆಚ್ಚಿನ ಸೆಕ್ಯರಿಟಿ ಹಾಗೂ ಬಂದೋಬಸ್ತ ಕುರಿತು ತಿಳಿದು ಕೊಳ್ಳಲು ಉಡುಪಿಯಿಂದ ರೈಲಿನಲ್ಲಿಯೇ ಪ್ರಯಾಣ ಮಾಡಿ ಬಂದಿದ್ದೇನೆ ಎಂದ ಅವರು ಕೆಲವೊಮ್ಮೆ ಏನೂ ಆಗಿಲ್ಲ ಎಂದರೆ ಯಾವುದೂ ಅವಶ್ಯಕತೆ ಇರುವುದಿಲ್ಲ, ಆದರೆ ಏನಾದರೊಂದು ಘಟನೆ ಸಂಭವಿಸಿದ ಮೇಲೆ ಏನೂ ಮಾಡಲಿಕ್ಕಾಗುವುದಿಲ್ಲ ಅದಕ್ಕಾಗಿಯೇ ಮುಂಜಾಗ್ರತಾ ಕ್ರಮದ ಪರಿಶೀಲನೆ ನಡೆಸಿದ್ದೇನೆ ಎಂದರು.
Leave a Comment