ಹೊನ್ನಾವರ; ತಾಲೂಕಿನಲ್ಲಿ ಕೊರೋನಾರ್ಭಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕಳೆದ ವರ್ಷ ಕೋವಿಡ್ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ಯಾಕೇಜ್ ನೀಡಿತ್ತು. ಆದರೆ ಈ ಪ್ಯಾಕೇಜ್ ಹಲವರಿಗೆ ತಲುಪಿಲ್ಲ. ಈ ಹಿಂದೆ ಕೇಂದ್ರ ಸರ್ಕಾರ ವಾಕ್ಸಿನ್ ವಿಷಯದಲ್ಲಿ ಎಡವಿತ್ತು. ಇದೀಗ ೧೮ ವರ್ಷ ಮೆಲ್ಪಟ್ಟವರಿಗೆ ಘೋಷಣೆ ಮಾಡಿದೆ. ಆದರೆ ಇದು ಘೊಷಣೆಗೆ ಸಿಮೀತವಾಗಿರದೇ ಪ್ರತಿಯೊರ್ವರಿಗೂ ತಲುಪುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕರವೇ ರಾಜ್ಯಧ್ಯಕ್ಷ ನಾರಾಯಣ ಗೌಡರ ಸೂಚನೆ ಮೇರೆಗೆ ಪ್ರತಿ ತಾಲೂಕ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಲಸಿಕೆಯೆಂಬುದು ಭಾರತದ ಪ್ರತಿಯೊಬ್ಬ ನಾಗರಿಕನ ಹಕ್ಕು. ಅದರ ಹಂಚಿಕೆಯೂ ಸಮಾನತೆಯ ಆಶಯಕ್ಕೆ ಧಕ್ಕೆಯಾಗದಂತೆ ಇರಬೇಕು. ಹೀಗಾಗಿ ಎಲ್ಲ ರಾಜ್ಯಗಳಿಗೂ ಜನಸಂಖ್ಯೆ ಆಧಾರದಲ್ಲಿ ಲಸಿಕೆ ವಿತರಣೆಯಾಗಬೇಕು. ಉತ್ತರದ ರಾಜ್ಯಗಳಿಗೆ ಹೆಚ್ಚು, ದಕ್ಷಿಣದ ರಾಜ್ಯಗಳಿಗೆ ಕಡಿಮೆ ಲಸಿಕೆ ನೀಡಿದ್ದನ್ನು ನಾವು ನೋಡಿದ್ದೇವೆ. ಈ ಅನ್ಯಾಯ ಕೊನೆಗೊಳ್ಳಬೇಕು.ಪ್ರಧಾನ ಮಂತ್ರಿಗಳು ಉಚಿತವಾಗಿ ಲಸಿಕೆ ಕೊಡುವುದಾಗಿ ಘೋಷಿಸಿದ್ದರೂ, ಎಷ್ಟು ದಿನಗಳೊಳಗೆ ಲಸಿಕೆ ಕೊಡುತ್ತೇವೆ ಎಂಬುದನ್ನು ಹೇಳಿಲ್ಲ. ಮತ್ತೊಂದು ಅಲೆ ಬಂದು ಇನ್ನಷ್ಟು ಜೀವಗಳು ಹೋಗುವಂತಾದರೆ ಉಚಿತ ಲಸಿಕೆಗೆ ಅರ್ಥವಿರುವುದಿಲ್ಲ.
ಕೋವಿಡ್ ಮೂರನೇ ಅಲೆ ಅಕ್ಟೋಬರ್ ನಲ್ಲಿ ಬರುವ ಸಾಧ್ಯತೆ ಇರುವುದರಿಂದ ಅಷ್ಟರೊಳಗೆ ಎರಡೂ ಡೋಸ್ ಲಸಿಕೆ ಎಲ್ಲ ನಾಗರಿಕರಿಗೂ ಸಿಗಬೇಕು ಎಂದು ಕರವೇ ಆಗ್ರಹಿಸಿತ್ತು.ಗುರವಾರ ಬೆಳಿಗ್ಗೆ ಎಕಕಾಲದಲ್ಲಿ ಚಳುವಳಿಗೆ ಚಾಲನೆ ನೀಡಲಾಗಿತ್ತು. ಅದರಂತೆ ಹೊನ್ನಾವರದಲ್ಲಿ ಕಾರ್ಯಕರ್ತರು ಮನೆಯಲ್ಲಿ ಭಿತ್ತಿಪತ್ರ ಹಿಡಿದು “ಮಾತು ತಪ್ಪದೇ ಲಸಿಕೆ ನೀಡಿ ಎಂದು ಆಗ್ರಹಿಸಿ ಗುರುವಾರ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕರವೇ ತಾಲೂಕ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ ಕೇಂದ್ರ ರಾಜ್ಯ ಸರ್ಕಾರ ಕೋವಿಡ್ ವಿಷಯದಲ್ಲಿ ಎಡವಿದೆ. ವಿಪಕ್ಷವು ಕೂಡಾ ರಾಜಕೀಯ ಲಾಭಕ್ಕಾಗಿ ಹೇಳಿಕೆ ನೀಡುದರಲ್ಲಿ ಕಾಲ ಕಳೆಯುತ್ತಿದೆ. ನಮ್ಮ ಸಂಘಟನೆಯ ಆಗ್ರಹವೆನೆಂದರೆ, ಘೋಷಣೆಗೆ ಸೀಮಿತವಾಗಿರದೇ ಲಸಿಕೆ ನೀಡಿ. ತಾಲೂಕಿನಲ್ಲಿ ಗ್ರಾಮೀಣ ಭಾಗ ಹೆಚ್ಚಿರುದರಿಂದ ಲಾಕ್ ಡೌನ್ ಜಾರಿ ಇರುದರಿಂದ ತಾಲೂಕ ಆರೊಗ್ಯ ಕೇಂದ್ರ ಅಥವಾ ಪ್ರಾಥಮಿಕ ಆರೊಗ್ಯ ಕೇಂದ್ರಕ್ಕೆ ಆಗಮಿಸಲು ಕಷ್ಟಸಾಧ್ಯವಿದ್ದು, ಮಜರೆವಾರು ಅಥವಾ ಮನೆಯ ಸಮೀಪ ಪೊಲೀಯೊ ಲಸಿಕೆ ನೀಡುವಂತೆ ಈ ವಾಕ್ಸಿನ್ ನೀಡುವಂತೆ ಆಗ್ರಹಿಸಿದರು.
Leave a Comment