ಯಲ್ಲಾಪುರ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋರೋನಾ ವಿಷಯದಲ್ಲಿ ಜನರ ಪ್ರಾಣದೊಂದಿಗೆ ಚಲ್ಲಾಟ ಆಡುತ್ತಿವೆ .ಹಿಂದೆಯೂ ಈ ದೇಶದಲ್ಲಿ ಪ್ಲೇಗ್, ಕಾಲರಾದಂತಹ ಮಾರಕ ರೋಗ ಬಂದಿತ್ತು. ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರ ಇವನ್ನು ಪರಿಣಾಮಕಾರಿ ಕ್ರಮದ ಮೂಲಕ ನಿಗ್ರಹಿಸಿ ಪ್ರಚಾರಕ್ಕಿಂತ ಜನರ ಜೀವಕ್ಕೆ ಆದ್ಯತೆ ನೀಡಿದ್ದವು.
ಮೋದಿ ಸರ್ಕಾರ ಕೊರೋನಾ ಲಸಿಕೆ ವಿಷಯದಲ್ಲಿ ಪರಿಣಾಮಕಾರಿ ಕ್ರಮಕ್ಕಿಂತ ಪ್ರಚಾರದಲ್ಲೇ ಹೆಚ್ಚು ಮುಳುಗಿದೆ ಎಂದು ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಹೇಳಿದರು.
ಸೋಮವಾರ ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಅವರು ಆದರೆ ಮೋದಿ ಸರ್ಕಾರ ಬರೇ ಪ್ರಚಾರಕ್ಕೆ ಸೀಮಿತವಾಗಿದೆ ಎಂದರು.
ದೇಶದಲ್ಲಿ ಪೆಟ್ರೊಲ್ ಬೆಲೆ ನೂರರ ಗಡಿ ತಲುಪಿದರೂ ಮೋದಿಯವರಿಗೆ ಜನರ ನೋವು ಅರ್ಥವಾಗುತ್ತಿಲ್ಲ.ಸಾವಿರಾರು ಜನ ಕೋವಿಡ ನಿಂದ ಸಾವಿಗೀಡಾಗಿದ್ದು ಆ ಶವಗಳಿಗೆ ಗೌರವಯುತವಾಗಿ ಆಂತ್ಯಕ್ರಿಯೆ ಮಾಡುವ ಯೋಗ್ಯತೆ ಯು ಸರಕಾರಕ್ಕಿಲ್ಲ. ಅಸಂಖ್ಯಾತ ಶವಗಳನ್ನು ಗಂಗಾನದಿಯಲ್ಲಿ ತೇಲಿಬಿಟ್ಟಿದ್ದಾರೆಂದರೆ ದುರಾದೃಷ್ಟವೆ ಸರಿ. ಮುಂದಿನ ಚುನಾವಣೆಯಲ್ಲಿ ಈ ಜನವಿರೋಧಿ ಮೋದಿ ಸರ್ಕಾರವನ್ನು ಜನರೇ ಅಂತ್ಯಕ್ರಿಯೆ ಮಾಡುತ್ತಾರೆ ಎಂದರು.
ಜಿಲ್ಲಾಧ್ಯಕ್ಷ ಭಿಮಣ್ಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್. ಗಾಂವಕರ್, ಮುಖ್ಯ ವಕ್ತಾರ ರವಿ ನಾಯ್ಕ, ಪ್ರಶಾಂತ ಸಭಾಯಿತ್,ಪಟ್ಟಣ ಪಂಚಾಯತ ಸದಸ್ಯರಾದ ನರ್ಮದಾ ನಾಯ್ಕ, ಕೈಸರ್ ಅಲಿ, ಅನಿಲ ಮರಾಠಿ . ಪೂಜಾ ನೇತ್ರೆಕರ್ ಮುಂತಾದವರು ಇದ್ದರು.
Leave a Comment