ಹೊನ್ನಾವರ: ತಾಲೂಕಿನ ಕರ್ಕಿಯಲ್ಲಿ ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ಹಾಗೂ ಕಿಸಾನ್ ಕಾಂಗ್ರೇಸ್ ವತಿಯಿಂದ ಪೆಟ್ರೂಲ್, ಡಿಸೇಲ್ ಹಾಗೂ ಅಗತ್ಯವಸ್ತು ಬೆಲೆ ಏರಿಕೆ ವಿರೋಧಿಸಿ ಸೋಮವಾರ ಪ್ರತಿಭಟನೆ ಜರುಗಿತು.
ಪೆಟ್ರೂಲ್ ಡಿಸೇಲ್ ಹಾಗೂ ಅಗತ್ಯವಸ್ತು ಬೆಲೆ ನಿಯಂತ್ರಣ ಮಾಡುವಲ್ಲಿ ವಿಫಲವಾದ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಮೊಳಗಿಸಿ ಪೆಟ್ರೊಲ್ ಬಂಕ್ ಎದರು ಧರಣಿ ನಡೆಸಿದರು.

ಕಿಸಾನ್ ಕಾಂಗ್ರೆಸ್ ತಾಲೂಕಾ ಘಟಕದ ಅಧ್ಯಕ್ಷ ಹರಿಶ್ಚಂದ್ರ ನಾಯ್ಕ ಮಾತನಾಡಿ ಜನಸಾಮಾನ್ಯರ ಬದುಕು ಬೀದಿಗೆ ಬೀಳುವಂತಾಗಿದೆ. ಬಡವರ ಸಮಸ್ಯೆಗೆ ಸ್ಪಂದನೆ ಇಲ್ಲ, ಅಳಲು ಕೇಳುವವರಿಲ್ಲ .ಕೆಲಸವಿಲ್ಲದೆ ಕಾರ್ಮಿಕರ ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ದೇಶದಾಧ್ಯಂತ ಕೋರೊನಾ ಹೆಮ್ಮಾರಿ ತಾಂಡವವಾಡುತ್ತಿದ್ದು, ಇಂತಹ ಕಠಿಣ ಸಂದರ್ಭದಲ್ಲೂ ಜನರ ಜೇಬಿಗೆ ಕತ್ತರಿ ಹಾಕಿ ಪೆಟ್ರೋಲ್, ಡಿಸೇಲ್, ಬೆಲೆಯನ್ನು ಮನಬಂದಂತೆ ಏರಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಜಾರಿಗೆ ಬಂದಿದ್ದ ಅನ್ನಭಾಗ್ಯ ಯೋಜನೆ ಈ ಸಂದರ್ಭದಲ್ಲಿ ಜನರಿಗೆ ನೆರವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ಹಿಂದಿನ ಸರ್ಕಾರಗಳು ಜನರಿಗೆ ಸ್ಪಂದಿಸುತ್ತಿತ್ತು.
ಆದರೆ ಈಗಿನ ಸರ್ಕಾರ ಜನರ ಕೂಗನ್ನು ಆಲಿಸುತ್ತಿಲ್ಲ. ಕಟ್ಟಡ ಕಾರ್ಮಿಕರಿಗೆ ಘೋಷಣೆ ಮಾಡಿದ ಮೂರುಸಾವಿರ ರೂಪಾಯಿ ಹಣ ಹದಿನೈದು ದಿನ ಕಳೆದರು ಫಲಾನುಭವಿಗಳ ಖಾತೆಗೆ ಇನ್ನೂ ಜಮಾ ಆಗಿಲ್ಲ .ಬಡಜನರ ಗುರುತಿಸಿ ಅಗತ್ಯ ದಿನಸಿ ಕಿಟ್ ಕೂಡ ನೀಡಿಲ್ಲ. ಇಂತಹ ಕೆಟ್ಟ ಸರ್ಕಾರ ಶೀಘ್ರವೇ ತೊಲಗಲಿ ಎಂದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಕರ್ಕಿ ಗ್ರಾಮ ಪಂಚಾಯತ ಸದಸ್ಯ ಕಮಲಾಕರ ಮುಕ್ರಿ, ಪಟ್ಟಣ ಪಂಚಾಯತ ಮಾಜಿ ಸದಸ್ಯ ರವೀಂದ್ರ ನಾಯ್ಕ,ಕಿಸಾನ್ ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ ವಿನೋದ್ ನಾಯ್ಕಮಹೇಶ್ ಹೆಗಡೆ,ರಾಮಚಂದ್ರ ನಾಯ್ಕ,ಮಾದೇವ ನಾಯ್ಕ, ಹುಲಿಯಣ್ಣ ಗೌಡ, ಸುರೇಶ್ ಮೇಸ್ತ, ಮಾಬ್ಲೇಶ್ವರ ಮೇಸ್ತ,ರಾಮ ನಾಯ್ಕ,ಶ್ರೀಪಾದ ನಾಯ್ಕ, ಜನಾರ್ಧನ ನಾಯ್ಕ,ಗಜಾನನ ನಾಯ್ಕ, ನವೀನ್ ನಾಯ್ಕ ಸೇರಿದಂತೆ ಕಾಂಗ್ರೆಸ ಪಕ್ಷದ ಹಾಗೂ ಕಿಸಾನ್ ಜಿಲ್ಲಾ,ತಾಲೂಕಾ ಘಟಕದ ಪ್ರಮುಖರು ಭಾಗವಹಿಸಿದ್ದರು.
Leave a Comment