ಯಲ್ಲಾಪುರ: ಕುಂಬ್ರಾಳದ ಕೆಲವರು ಹಾಗೂ ಜಿಲ್ಲಾ ಅತೀಕ್ರಮಣ ಹಕ್ಕು ಸಮಿತಿಯ ರವೀಂದ್ರ ನಾಯ್ಕ ದುರುದ್ದೇಶ ಹಾಗೂ ರಾಜಕೀಯ ಪ್ರೇರಿತವಾಗಿ ಕೋಟ್ಯಂತರ ರೂಪಾಯಿ ಅರಣ್ಯ ನಾಶ ಮಾಡಿದ್ದಾರೆ ಎಂದು ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ ಗ್ರಾಮ ಪಂಚಾಯ್ತಿ ಮಾಡಿದ ಅಭಿವೃದ್ಧಿ ಕಾರ್ಯ ಸಹಿಸದೇ ಆಪಾದನೆ ಮಾಡಿರುವುದನ್ನು ತೀವೃವಾಗಿ ಖಂಡಿಸುತ್ತೇವೆಂದು ದೇಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀಪತಿ ಮುದ್ದೇಪಾಲ ಹಾಗೂ ಆನಗೋಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪರಮೇಶ್ವರ ಗಾಂವ್ಕರ್ ಹೇಳಿದರು.
ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಗ್ರಾಮ ಪಂ ದಲ್ಲಿ ಕೋಟ್ಯಂತರ ರೂಪಾಯಿ ಅರಣ್ಯ ಪರಿಸರ ನಾಶವಾಗಿದೆ ಈ ಹೇಳಿಕೆಗಳನ್ನು ಅಲ್ಲಗಳೆದಿದ್ದಾರೆ.
ಬೆಲೆಬಾಳುವ ಸಾಗವಾನಿ,ಇತರ ಮರಗಳ ಹನನ ನಡೆದಿದೆ ಎಂದು ಆರೋಪಿಸಲಾಗಿದೆ , ಖನಿಜಯುಕ್ತ ಮಣ್ಣನ್ನು ಕಳ್ಳಸಾಗಾಟ ಮಾಡಲಾಗಿದೆ ಎಂದು ಆಪಾದಿಸಿದ್ದಾರೆ. ಆದರೆ ಆರೋಪ ಮಾಡಿದವರು ಅರಣ್ಯ ಅತೀಕ್ರಮಣವನ್ನು ಉತ್ತೇಜಿಸಿ ಅರಣ್ಯ ನಾಶಕ್ಕೆ ಕಾರಣರಾದವರ ರಕ್ಷಣೆಗೆ ನಿಂತಿರುವ ರವೀಂದ್ರ ನಾಯ್ಕ ಅವರ ಪರಿಸರ ಕಾಳಜಿಗೆ ಅಚ್ಚರಿ ಪಡಬೇಕು .
ಆನಗೋಡ ಗ್ರಾ.ಪಂ ವ್ಯಾಪ್ತಿಯಲ್ಲಿ ಅನೇಕ ಹಳ್ಳಿಗಳ ಹಳೆಯ ರಸ್ತೆಗಳನ್ನು ಮೊರಂ ಮಣ್ಣು ಹಾಕಿ ಅಭಿವೃದ್ಧಿಪಡಿಸಲಾಗಿದೆಯೇ ವಿನಃ, ಇಲ್ಲಿನ ಮಣ್ಣಿನಲ್ಲಿ ಖನಿಜಾಂಶ ಇರುವುದು ರವೀಂದ್ರ ನಾಯ್ಕರಿಂದ ಈಗಲೇ ತಿಳಿದು ಬಂದಿದ್ದು ಇದು ಅಪಹಾಸ್ಯದ ಹೇಳಿಕೆಯಾಗಿದೆ. ಇಂತಹ ಸುಳ್ಳಿನ ಕಂತೆಯನ್ನು ಸೃಷ್ಟಿಸಿ, ತಪ್ಪು ಸಂದೇಶ ನೀಡುವ ಕಾರ್ಯ ಮಾಡುವುದು ಭೂಷಣವಲ್ಲ ಎಂದರು.ನಾವು ಪರಿಸರದ ಮಧ್ಯೆಯೇ ಇದ್ದೇವೆ. ಪರಿಸರದ ಕುರಿತು ನಮಗೆ ತಿಳಿಹೇಳುವ ಅಗತ್ಯತೆಯಿಲ್ಲಎಂದರು
ಈ ಸಂದರ್ಭದಲ್ಲಿ ಆನಗೋಡ ಗ್ರಾ.ಪಂ ಮಾಜಿ ಅಧ್ಯಕ್ಷ ರಾಮಚಂದ್ರ ಚಿಕ್ಯಾನಮನೆ, ಗ್ರಾ.ಪಂ ಸದಸ್ಯರಾದ ಮಂಜುನಾಥ ಗುಮ್ಮಾನಿ, ಮೀನಾಕ್ಷಿ ಭಟ್ಟ ವಿಎಫ್ಸಿ ಅಧ್ಯಕ್ಷರಾದ ನಾರಾಯಣ ಕಂಚನಗದ್ದೆ (ಕುಂಬ್ರಾಳ, ಕಬ್ಬಿನಗದ್ದೆ), ಚಂದ್ರಶೇಖರ ಮೆಣಸುಮನೆ (ಕಟ್ಟಿಗೆ), ಗೋಪಾಲಕೃಷ್ಣ ಭಟ್ಟ (ಶಿಸ್ತಮುಡಿ), ಹುಟಕಮನೆ ಸೇರಿದಂತೆ ೨೫ ಕ್ಕೂ ಅಧಿಕ ಸ್ಥಳೀಯರು ಉಪಸ್ಥಿತರಿದ್ದರು.
Leave a Comment