ಯಲ್ಲಾಪುರ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಪಟ್ಟಣದ ಬಾಳಗಿಮನೆ ಶಾಲಾ ಅವಾರದಲ್ಲಿ ಜಿಲ್ಲಾ ಜನಜಾಗೃತಿ ಮಾಜಿ ಅಧ್ಯಕ್ಷ ಡಿ ಎನ್ ಗಾಂವ್ಕರ್ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮೊದಲು ನಮ್ಮ ಮನೆಯ ಪರಿಸರ ಚೆನ್ನಾಗಿರಿಸಿಕೊಳ್ಳಬೇಕು. ಇಂದು ಆಮ್ಲಜನಕ ಖರೀದಿಸುವ ಹಂತಕ್ಕೆ ನಾವು ತಲುಪಿದ್ದೇವೆ ಇದೇರೀತಿ ಗಿಡಗಳನ್ನು ನಾಶಮಾಡಿದರೆ ನಮ್ಮ ಮಕ್ಕಳು ಉಸಿರಾಡಲು ಕಷ್ಟವಾಗಬಹುದು ಕೇವಲ ಕಾಟಾಚಾರಕ್ಕೆ ಗಿಡ ನೆಡಬಾರದು ಅದನ್ನು ಸಂರಕ್ಷಿಸುವ ಕೆಲಸವನ್ನು ಮಾಡಬೇಕು ಎಂದರು.
ಯಲ್ಲಾಪುರ /ಮುಂಡಗೋಡ ಯೋಜನಾಧಿಕಾರಿ ಹನುಮಂತ ನಾಯ್ಕ್ ಮಾತನಾಡಿ ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಂತೆ ನಮ್ಮ ಕಾರ್ಯವ್ಯಾಪ್ತಿಯಲ್ಲಿ ೨೦ ಕಡೆ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಗಿಡ ಮರ ಬೆಳೆಸಿ ಪರಿಸರವನ್ನು ಉಳಿಸಬೇಕು ಎಂದರು.
ಬಾಳಗಿಮನೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಶೇಖರ್ ಪಟಗಾರ, ಮುಖ್ಯೋಪಾಧ್ಯಾಪಕ ಗಜಾನನ ನಾಯ್ಕ್ , ಪಟ್ಟಣ ಪಂಚಾಯತಿ ಸದಸ್ಯೆ ಗೀತಾ ದೇಶ ಭಂಡಾರಿ,ಉದ್ಯಮ ನಗರದ ಒಕ್ಕೂಟದ ಅಧ್ಯಕ್ಷೆö ಸುಧಾ ಶೇಟ್, ಆಂತರಿಕ ಲೆಕ್ಕಪರಿಶೋಧಕ ರಾದ ನೇತ್ರಾವತಿ ನಾಯ್ಕ್ ಕೃಷಿ ಮೇಲ್ವಿಚಾರಕ ಸತೀಶ್ ನಾಯ್ಕ್ ,ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಜ್ಯೋತಿ ಪಾಠಣಕಾರ್.ಇದ್ದರು.
Leave a Comment