ಹೊನ್ನಾವರ: ಕೋರೋನಾ ಸಂಕಷ್ಟ ಸಮಯದಲ್ಲಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವರಿಗೆ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿತ್ತು. ಕಳೆದ ಕೆಲ ವರ್ಷದಿಂದ ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಸೇವೆ ನೀಡುತ್ತಿದ್ದ ಸಿಬ್ಬಂದಿಗಳು ಕೊರೋನಾ ಸಮಯದಲ್ಲಿ ಸೇವೆ ನೀಡುತ್ತಿದ್ದರು.ಘಟಕ ನಿರ್ವಹಣೆ ಮಾಡುತ್ತಿದ್ದ ಬಿ.ಆರ್.ಶೆಟ್ಟಿ ಪೌಂಡೇಶನ್ ನಿರ್ವಹಣೆ ಮಾಡುತ್ತಿರಲಿಲ್ಲ. ಶಾಸಕ ಸುನೀಲನಾಯ್ಕ ಸಲಕರಣೆ ಹಾಗೂ ಡಯಾಲಿಸಿಸ್ ತಗಲುವ ಖರ್ಚು ನೀಡಿ ಸಹಕಾರ ನೀಡಿದ್ದರು.
ಆದರೆ ಕಳೆದ ಮೂರು ತಿಂಗಳಿನಿಂದ ಸೇವೆ ನೀಡುತ್ತಿದ್ದರು ಸಂಬಳವಿಲ್ಲದೇ ಆರ್ಥಿಕ ಸಂಕಷ್ಟದಲ್ಲಿದ್ದರು. ಕೆಲ ದಿನದ ಹಿಂದೆ ತಾಲೂಕ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿಯವರ ಗಮನಕ್ಕೆ ಮಾಧ್ಯಮದವರು ತಂದು ಕುಮಟಾ ಮಾದರಿಯಲ್ಲಿ ಸಹಾಯ ಮಾಡುವಂತೆ ಒತ್ತಾಯಿಸಿದ್ದರು. ಕೂಡಲೇ ಸ್ಪಂದಿಸಿದ ಶಾಸಕರು ಕರ್ತವ್ಯ ನಿರ್ವಹಿಸುವ ೬ ಸಿಬ್ಬಂದಿಗಳಿಗೆ ತಲಾ ೬ಸಾವಿರದಂತೆ 36ಸಾವಿರ ಧನ ಸಹಾಯ ಮಾಡುವ ಮೂಲಕ ನೆರವಾದರು.
ಗುರುವಾರ ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ ಹಾಗೂ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕಾಮತ್ ಶಾಸಕರು ನೀಡಿದ ಹಣವನ್ನು ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ಸಮ್ಮುಖದಲ್ಲಿ ಸಿಬ್ಬಂದಿಗಳಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ಮಾತನಾಡಿ ಮೂರು ತಿಂಗಳ ವೇತನವಿಲ್ಲದೇ ಸೇವೆ ಸಲ್ಲಿಸುತ್ತಿದ್ದರು. ವೈಯಕ್ತಿಕವಾಗಿ ಶಾಸಕರ ಸಹಕಾರದಿಂದ ಸಿಬ್ಬಂದಿಗಳಿಗೆ ವೇತನ ದೊರೆತಿದೆ. ಮುಂದಿನ ತಿಂಗಳಿನಿಂದ ನಿರ್ವಹಣೆ ಬೇರೆ ಕಂಪನಿ ವಹಿಸುದರಿಂದ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕರಿಗೆ ಅಭಿನಂದಿಸಿದರು.
Leave a Comment