ಹೊನ್ನಾವರ: ಪಟ್ಟಣದ ರಾಮತೀರ್ಥ ಕ್ರಾಸ್ ಸಮೀಪ ಪಟ್ಟಣ ಪಂಚಾಯತಿ ಉದ್ಯಾನವನದಲ್ಲಿ ಬಿಜೆಪಿ ಹೊನ್ನಾವರ ಮಂಡಲದಿಂದ ದಿ. ಶ್ಯಾಮ್ ಪ್ರಸಾದ ಮುಖರ್ಜಿ ಇವರ ಸ್ಮರಣಾರ್ಥ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವೃಕ್ಷಾರೋಹಣ ಕಾರ್ಯಕ್ರಮವನ್ನು ವೃಕ್ಷಾರೋಹಣ ಕಾರ್ಯಕ್ರಮದ ಸಂಚಾಲಕ ನಾಗರಾಜ ನಾಯಕ ತೊರ್ಕೆ ಚಾಲನೆ ನೀಡಿದರು.ನಂತರ ಮಾತನಾಡಿ ಶ್ಯಾಮ ಪ್ರಸಾದ ಮುಖರ್ಜಿ ಈ ದೇಶ ಕಂಡ ಮಹಾನ್ ನಾಯಕರಲ್ಲಿ ಒರ್ವರಾಗಿದ್ದಾರೆ. ಜೂನ್ ೨೩ರ ಇವರ ಬಲಿದಾನದಿಂದ ಜುಲೈ ೬ರ ಜನ್ಮದಿನದ ೧೪ ದಿನಗಳ ಕಾಲ ಅವರ ಸ್ಮರಣೆಗಾಗಿ ಗಿಡ ನೆಡುವ ಕಾರ್ಯಕ್ರಮ ದೇಶಾದ್ಯಂತ ಬಿಜೆಪಿ ಹಮ್ಮಿಕೊಂಡಿದೆ.
ಕೊರೋನಾ ಸಂಕಷ್ಟದ ಸಮಯದಲ್ಲಿ ಆಕ್ಸಿಜನ ಮಹತ್ವ ಅರಿವಾಗಿದೆ. ನೈಸರ್ಗಿಕವಾಗಿ ಗಿಡದಿಂದ ಮಾತ್ರ ಆಕ್ಸಿಜನ್ ಸಿಗಲು ಸಾಧ್ಯ. ರಾಜ್ಯದಲ್ಲಿ ೧೧ ಲಕ್ಷ ಗಿಡ ನೆಡುವ ಜೊತೆ ಜಿಲ್ಲೆಯಲ್ಲಿ ೨೫ ಸಾವಿರ ಗುರಿ ಹೊಂದಿದೆ. ಪ್ರತಿ ಬೂತ್ ವಿಭಾಗದಲ್ಲಿ ಕನಿಷ್ಟ ೨೫ ಗಿಡವನ್ನು ಬೆಳೆಸಲು ಸಿದ್ದತೆಯಲ್ಲಿ ತೊಡಗಿದ್ದು ಇಂದಿನಿಂದ ಚಾಲನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಂದ್ರು ಎಸಳೆ, ಮಂಡಲಧ್ಯಕ್ಷ ರಾಜೇಶ ಭಂಡಾರಿ, ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ,ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ, ಸದಸ್ಯ ನಾಗರಾಜ ಭಟ್, ವಿಜಯ ಕಾಮತ್, ನಿಶಾ ಶೇಟ್, ಭೋಗ್ಯ ಮೇಸ್ತ, ಮುಖಂಡರಾದ ಎಂ.ಜಿ.ಭಟ್, ಎಂ.ಜಿ.ನಾಯ್ಕ, ಉಮೇಶ ನಾಯ್ಕ,ಮಂಜುನಾಥ ನಾಯ್ಕ, ವಿನೋಧ ನಾಯ್ಕ ರಾಯಲಕೇರಿ,ಎಂ.ಎಸ್.ಹೆಗಡೆ ಕಣ್ಣಿ, ದತ್ತಾತ್ರೇಯ ಮೇಸ್ತ,ಸುರೇಶ ಖಾರ್ವಿ, ಉಮೇಶ ಸಾರಂಗ, ಗಣೇಶ ಸಾರಂಗ ಮತ್ತಿತರರು ಹಾಜರಿದ್ದರು.
Leave a Comment