ಯಲ್ಲಾಪುರ : ‘ಕೋವಿಡ್ ಸುರಕ್ಷೆ ದೃಷ್ಠಿಯಿಂದ ನಾವು ಮನೆಯ ಒಳಗಿದ್ದರೂ, ನಮ್ಮ ಸುರಕ್ಷೆಗಾಗಿ ಕೋವಿಡ್ ಭಯ ಬಿಟ್ಟು ಹೊರಗೆ ಸ್ವಚ್ಚತಾ ಕಾರ್ಯ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಕಿಂಚಿತ್ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಆಹಾರದ ಕಿಟ್ ನೀಡುತ್ತಿದ್ದೇವೆ. ಇದು ಅವರು ನಮ್ಮ ಸುರಕ್ಷೆಗಾಗಿ ಮಾಡುತ್ತಿರುವ ಕಾರ್ಯಕ್ಕೆ ನಮ್ಮ ಚಿಕ್ಕ ಸಹಾಯ’ ಎಂದು ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ ಹೇಳಿದರು.
ಅವರು ಶುಕ್ರವಾರ ಸಂಜೆ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಅವರ ಕುಟುಂಬದ ವಿ.ಅರ್.ದೇಶಪಾಂಡೆ ಸ್ಮಾರಕ ಟ್ರಸ್ಟ್ ವತಿಯಿಂದ ಪೌರ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸುನಂದಾ ದಾಸ್, ಮುಖ್ಯಾಧಿಕಾರಿ ಅರುಣ ನಾಯ್ಕ, ಸದಸ್ಯರಾದ ನರ್ಮದಾ ನಾಯ್ಕ, ಸಯ್ಯದ ಕೈಸರ್, ಪ್ರಮುಖರಾದ ದೀಪಕ ದೊಡ್ಡೂರ್, ಎನ್.ಕೆ.ಭಟ್ಟ ಮೆಣಸುಪಾಲ್, ರವಿ ನಾಯ್ಕ, ಪ್ರಶಾಂತ ಸಭಾಹಿತ, ಅನಿಲ್ ಮರಾಠೆ, ಅಣ್ಣಪ್ಪ ನಾಯ್ಕ, ಜಿ.ವಿ.ಭಟ್ಟ, ಸರಸ್ವತಿ ಗುನಗ, ಪೂಜಾ ನೇತ್ರೇಕರ್, ಮುಸ್ರತ್ ಖಾನ್ ಮುಂತಾದವರಿದ್ದರು.
Leave a Comment